ಮೋದಿಯ ಗೌರವವನ್ನು ತಿರಸ್ಕರಿಸಿದ 8 ವರ್ಷದ ಬಾಲಕಿ
ನವದೆಹಲಿ, ಮಾರ್ಚ್ 8: ಮಹಿಳಾ ದಿನಾಚರಣೆಯ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಮಾಡಿದ ಹಾಗೂ ಸ್ಫೂರ್ತಿ ನೀಡುವ ಮಹಿಳೆಯರಿಗೆ ಗೌರವ ನೀಡುವ ಕೆಲಸಕ್ಕೆ ಮುಂದಾಗಿದ್ದರು. ಒಂದು ದಿನದ ಮಟ್ಟಿಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯನ್ನು ನಿರ್ವಹಿಸುವ ಅಧಿಕಾರ ನೀಡಿ, ಅವರಿಂದ ಎಷ್ಟೋ ಜನರಿಗೆ ಸ್ಫೂರ್ತಿ ನೀಡುವ ಕೆಲಸ ಆಗಲಿ ಎಂದಿದ್ದರು.
#SheInspiresUs ಹ್ಯಾಶ್ ಟ್ಯಾಗ್ ಮೂಲಕ ಈ ಅಭಿಮಾನ ಶುರು ಆಗಿದ್ದು, ತಾವು ಕಂಡ ಸ್ಫೂರ್ತಿದಾಯಕ ಮಹಿಳೆಯನ್ನು ಅನೇಕರು ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಈ ಹ್ಯಾಶ್ ಟ್ಯಾಗ್ ಬಳಸಿ ಹಂಚಿಕೊಳ್ಳುತ್ತಿದ್ದರು. ಆದರೆ, ಇದೀಗ ಈ ಅಭಿಯಾನವನ್ನು 8 ವರ್ಷದ ಬಾಲಕಿ, ಹೋರಾಟಗಾರ್ತಿ ಕಂಗುಜಂ ವಿರೋಧಿಸಿದ್ದಾರೆ. #SheInspiresUs ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

8 ವರ್ಷದ ಹೋರಾಟಗಾರ್ತಿ ವಿರೋಧ
ಕೇವಲ 8 ವರ್ಷದಲ್ಲಿಯೇ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ಕಂಗುಜಂ ಮಹಿಳಾ ದಿನಾಚರಣೆಯ ವಿಶೇಷವಾಗಿ ಶುರುವಾದ #SheInspiresUs ವಿರುದ್ಧ ನಿಂತಿದ್ದಾರೆ. ''ಆತ್ಮೀಯ ನರೇಂದ್ರ ಮೋದಿ ಅವರೇ, ನೀವು ನನ್ನ ಮಾತನ್ನು ಆಲಿಸದೇ ಇದ್ದರೆ, ನನ್ನ ಬಗ್ಗೆ ಸಂಭ್ರಮಿಸಬೇಡಿ.'' ಎಂದು ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.

ಕಂಗುಜಂ ಹೆಸರು ತೆಗೆದುಕೊಂಡ ಸರ್ಕಾರ
ಸರ್ಕಾರದ ಟ್ವಿಟ್ಟರ್ ಖಾತೆಯಲ್ಲಿ ಕಂಗುಜಂ ಹೆಸರನ್ನು ಹಾಕಲಾಗಿತ್ತು. @mygovindia ಟ್ವಿಟ್ಟರ್ ಖಾತೆಯಲ್ಲಿ #SheInspiresUs ಹ್ಯಾಶ್ ಟ್ಯಾಗ್ ಮೂಲಕ ಅನೇಕ ಮಹಿಳಾ ಸ್ಫೂರ್ತಿದಾಯಕರ ಬಗ್ಗೆ ಬರೆಯಲಾಗಿತ್ತು. ಅದೇ ರೀತಿ 8 ವರ್ಷದ ಬಾಲಕಿ ಕಂಗುಜಂ ಬಗ್ಗೆಯೂ ಪೋಸ್ಟ್ ಮಾಡಲಾಗಿತ್ತು. ಆದರೆ, ಈ ಪೋಸ್ಟ್ ಬಗ್ಗೆಯೇ ಕಂಗುಜಂ ಬೇಸರ ವ್ಯಕ್ತಪಡಿಸಿದ್ದಾರೆ.

ಕಂಗುಜಂ ಬಗ್ಗೆ ಟ್ವೀಟ್
''ಕಂಗುಜಂ ಮಣಿಪುರದ ಮಕ್ಕಳ ಪರಿಸರ ಕಾರ್ಯಕರ್ತೆ. 2019ರಲ್ಲಿ ಅವರಿಗೆ ಡಾ.ಎಪಿಜೆ ಅಬ್ದುಲ್ ಕಲಾಂ ಮಕ್ಕಳ ಪ್ರಶಸ್ತಿ, ವಿಶ್ವ ಮಕ್ಕಳ ಶಾಂತಿ ಪ್ರಶಸ್ತಿ ಮತ್ತು ಭಾರತ ಶಾಂತಿ ಪ್ರಶಸ್ತಿ ನೀಡಲಾಯಿತು. ಅವರು ಸ್ಪೂರ್ತಿದಾಯಕವಲ್ಲವೇ? ಅವಳಂತಹ ಯಾರಾದರೂ ನಿಮಗೆ ತಿಳಿದಿದೆಯೇ? #SheInspiresUs ಬಳಸಿ ಹೇಳಿ". ಎಂದು ಸರ್ಕಾರದ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿತ್ತು.

ಯೋಚಿಸಿ ತೆಗೆದುಕೊಂಡ ನಿರ್ಧಾರ
ಹವಾಮಾನ ಬದಲಾವಣೆಯ ವಿರುದ್ಧದ ಹೋರಾಡಿದ ಕಂಗುಜಂ ಅವರನ್ನು ಭಾರತೀಯ 'ಗ್ರೆಟಾ' ಎಂದು ಕರೆಯುತ್ತಾರೆ. ಕಂಗುಜಂ ''#SheInspiresUs ಹ್ಯಾಶ್ ಟ್ಯಾಗ್ ಅಡಿಯಲ್ಲಿ ದೇಶದ ಸ್ಪೂರ್ತಿದಾಯಕ ಮಹಿಳೆಯರ ನಡುವೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಅನೇಕ ಬಾರಿ ಯೋಚಿಸಿದ ನಂತರ, ಈ ಗೌರವವನ್ನು ತಿರಸ್ಕರಿಸಲು ನಿರ್ಧರಿಸಿದೆ. ಜೈ ಹಿಂದ್.'' ಎಂದು ಟ್ವೀಟ್ ಮಾಡಿದ್ದಾರೆ.

#sheinspiresus ನಲ್ಲಿ ಸುಧಾಮೂರ್ತಿ ಟ್ರೆಂಡಿಂಗ್
#sheinspiresus ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಸುಧಾಮೂರ್ತಿ ಅವರ ಹೆಸರು ಟ್ರೆಂಡ್ ಆಗಿದೆ. ಟ್ವಿಟ್ಟರ್ ನಲ್ಲಿ ಕನ್ನಡತಿ, ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ ಹೆಸರು ಹೆಚ್ಚು ಹರಿದಾಡುತ್ತಿದೆ. ಸುಧಾಮೂರ್ತಿ ಅವರ ಸಾಮಾಜಿಕ ಕೆಲಸಗಳು, ಸರಳತೆ, ಸಾಧನೆ ಸಾವಿರಾರೂ ಜನರಿಗೆ ಸ್ಫೂರ್ತಿ ನೀಡಿವೆ ಎಂದಿದ್ದಾರೆ.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications