ಮೋದಿ ವಿರುದ್ಧ ಸೋನಿಯಾ ಗಾಂಧಿ-ಪ್ರಿಯಾಂಕಾ ಗಾಂಧಿ ಜಂಟಿ ವಾಗ್ದಾಳಿ
ದೆಹಲಿ, ಜೂನ್ 26: ಚೀನಾ ಮತ್ತು ಭಾರತ ಸೇನೆ ಘರ್ಷಣೆಗೆ ಸಂಬಂಧಪಟ್ಟಂತೆ ''ದೇಶದ ಜನತೆ ಸ್ಪಷ್ಟ ಉತ್ತರ ನೀಡಿ'' ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
Recommended Video
''ಪ್ರಧಾನಿ ಮೋದಿ ಹೇಳ್ತಾರೆ, ಭಾರತದ ಗಡಿಯೊಳಗೆ ಚೀನಾ ಪ್ರವೇಶ ಮಾಡಿಲ್ಲ ಅಂತ, ಆದರೆ ಮತ್ತೊಂದು ಕಡೆ ರಕ್ಷಣಾ ಸಚಿವ ಹಾಗೂ ವಿದೇಶಾಂಗ ಸಚಿವರು ಈ ಕುರಿತು ಚರ್ಚೆ ಮಾಡ್ತಿದ್ದಾರೆ'' ಎಂದು ಸೋನಿಯಾ ಗಾಂಧಿ ಟೀಕಿಸಿದ್ದಾರೆ.

'ಚೀನಾ ಗಡಿ ಪ್ರದೇಶಕ್ಕೆ ನುಗ್ಗಿಲ್ಲ ಅಂದ್ರೆ ನಮ್ಮ 20 ಯೋಧರು ಏಕೆ ಸತ್ತರು ಮತ್ತು ಹೇಗೆ ಕೊಲ್ಲಲ್ಪಟ್ಟರು ಎಂಬುದು ದೇಶದ ಜನತೆಗೆ ತಿಳಿಯಬೇಕಿದೆ' ಎಂದು ಕಾಂಗ್ರೆಸ್ ಅಧ್ಯಕ್ಷೆ ಕೇಂದ್ರಕ್ಕೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
PM says China didn't infiltrate, but on the other hand, Defence Min&External Affairs Ministry keep discussing it. Today when we're paying tribute to our martyrs, then India wants to know why & how our 20 soldiers were killed (in Galwan Valley): Congress interim pres Sonia Gandhi pic.twitter.com/oSxiB0SU1R
— ANI (@ANI) June 26, 2020
ಲಡಾಖ್ ಗಡಿಯಲ್ಲಿ ನಡೆದಿರುವ ಘಟನೆ ಬಗ್ಗೆ ಪ್ರಧಾನಿ ಸ್ಪಷ್ಟ ವಿವರಣೆ ಕೊಟ್ಟಿಲ್ಲ. ಆದರೆ, ಉಪಗ್ರಹ ಚಿತ್ರಗಳನ್ನು ನೋಡಿದ ತಜ್ಞರು ನಮ್ಮ ಭೂಪ್ರದೇಶದಲ್ಲಿ ಚೀನಾದ ಸೈನ್ಯದ ಉಪಸ್ಥಿತಿಯನ್ನು ದೃಢಪಡಿಸಿದ್ದಾರೆ ಎಂದು ಸೋನಿಯಾ ಹೇಳಿದ್ದಾರೆ.
ಚೀನಾ ಆಕ್ರಮಿಸಿಕೊಂಡಿರುವ ಭೂ ಪ್ರದೇಶವನ್ನು ಮೋದಿ ಯಾವಾಗ ಹಿಂದಕ್ಕೆ ಪಡೆಯುತ್ತಾರೆ? ಲಡಾಖ್ನಲ್ಲಿ ಚೀನಾದಿಂದ ವಾಸ್ತವ ಗಡಿ ರೇಖೆ ಉಲ್ಲಂಘನೆ ಆಗುತ್ತಿದೆಯೇ? ಗಡಿ ವಿಷಯದಲ್ಲಿ ಪ್ರಧಾನಿ ಅವರು ದೇಶದ ಜನರ ವಿಶ್ವಾಸ ತೆಗೆದುಕೊಳ್ಳುತ್ತಿದ್ದಾರೆಯೇ? ಎಂದು ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.
People of India want to know why you (PM) sent our unarmed soldiers to face Chinese soldiers. The land on which they lost their lives is our land; we will not let you give our land to China. PM Modi has to answer questions asked from you: Congress leader Priyanka Gandhi Vadra pic.twitter.com/gLWO2ojTui
— ANI (@ANI) June 26, 2020
ಇನ್ನು ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಿಯಾಂಕಾ ಗಾಂಧಿ ಸಹ ಮಾತನಾಡಿದ್ದು ''ಚೀನಾದ ಸೈನಿಕರನ್ನು ಎದುರಿಸಲು ನೀವು (ಪಿಎಂ) ನಮ್ಮ ಸೈನಿಕರನ್ನು ನಿರಾಯುಧವಾಗಿ ಏಕೆ ಕಳುಹಿಸಿದ್ದೀರಿ ಎಂದು ಭಾರತದ ಜನರು ತಿಳಿದುಕೊಳ್ಳಬೇಕು. ಅವರು ಪ್ರಾಣ ಕಳೆದುಕೊಂಡ ಭೂಮಿ ನಮ್ಮದು; ನಮ್ಮ ಭೂಮಿಯನ್ನು ಚೀನಾಕ್ಕೆ ನೀಡಲು ನಿಮಗೆ ಬಿಡುವುದಿಲ್ಲ' ಎಂದು ಪ್ರಶ್ನಿಸಿದ್ದಾರೆ.
-
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ












Click it and Unblock the Notifications