ಅತಿ ವೇಗದ ಆರ್ಥಿಕ ಬೆಳವಣಿಗೆ: ಟಾಪ್ 10ರಲ್ಲಿ ಭಾರತದ್ದೇ ನಗರಗಳು
ನವದೆಹಲಿ, ಡಿಸೆಂಬರ್ 6: ಅತ್ಯಂತ ವೇಗವಾಗಿ ಆರ್ಥಿಕ ಬೆಳವಣಿಗೆ ಹೊಂದುತ್ತಿರುವ ವಿಶ್ವದ ನಗರಗಳ ಟಾಪ್ 10ರ ಪಟ್ಟಿಯಲ್ಲಿ ಸಂಪೂರ್ಣ ಭಾರತದ ನಗರಗಳೇ ತುಂಬಿಕೊಂಡಿವೆ.
ಆಕ್ಸ್ಫರ್ಡ್ ಎಕನಾಮಿಕ್ಸ್ ಪ್ರಕಾರ, ಭಾರತದ ನಗರಗಳು ಇನ್ನೂ ಎರಡು ವರ್ಷಗವರೆಗೆ ಆರ್ಥಿಕಾಭಿವೃದ್ಧಿಯಲ್ಲಿ ಪಾರುಪತ್ಯ ಮೆರೆಯಲಿವೆ. 2035ರವರೆಗೂ ಟಾಪ್ 10ರಲ್ಲಿ ಭಾರತದ ನಗರಗಳೇ ಇರಲಿವೆ ಎಂದು ವರದಿ ತಿಳಿಸಿದೆ.
ಟೈಮ್ಸ್ ಸಮೀಕ್ಷೆ ವಿಶ್ವದ ಟಾಪ್ 100 ವಿವಿಗಳಲ್ಲಿ ಬೆಂಗಳೂರಿನ ಐಐಎಸ್ಸಿ
ಈ ಪಟ್ಟಿಯಲ್ಲಿ ಗುಜರಾತ್ನ ಸೂರತ್ ಮೊದಲನೆಯ ಸ್ಥಾನ ಪಡೆದುಕೊಂಡಿದೆ. ಸೂರತ್ ವಾರ್ಷಿಕ 9.17% ಬೆಳವಣಿಗೆ ಹೊಂದಿದೆ.

ಉತ್ತರ ಪ್ರದೇಶದ ಆಗ್ರಾ 8.58% ಬೆಳವಣಿಗೆಯೊಂದಿಗೆ ಎರಡನೆಯ ಸ್ಥಾನದಲ್ಲಿದ್ದರೆ, ಬೆಂಗಳೂರು ಶೇ 8.5ರ ಬೆಳವಣಿಗೆಯೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ.
ಹೈದರಾಬಾದ್ (8.47%), ನಾಗಪುರ (8.41%), ತಿರುಪ್ಪುರ್ (8.36%), ರಾಜಕೋಟ್ (8.33%), ತಿರುಚಿರಾಪಳ್ಳಿ (8.29%), ಚೆನ್ನೈ (8.17%) ಮತ್ತು ವಿಜಯವಾಡ (8.16%) ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.
ವಿಶ್ವದ ಅತಿದೊಡ್ಡ ಮೆಟ್ರೊಪಾಲಿಟನ್ ನಗರಗಳಿಗೆ ಹೋಲಿಸಿದರೆ ಭಾರತದ ನಗರಗಳು ಈಗಲೂ ತುಂಬಾ ಚಿಕ್ಕದಾಗಿವೆ. ಆದರೆ, ಏಷ್ಯಾದ ಎಲ್ಲ ನಗರಗಳ ಒಟ್ಟು ಸರಾಸರಿ ಆಂತರಿಕ ಉತ್ಪಾದನೆಯು ಉತ್ತರ ಅಮೆರಿಕ ಮತ್ತು ಯುರೋಪ್ನ ನಗರ ಕೇಂದ್ರಗಳ ಒಟ್ಟಾರೆ ಉತ್ಪಾದನೆಯನ್ನು 2027ರ ವೇಳೆಗೆ ಮೀರಿಸಲಿದೆ. 2035ರ ವೇಳೆಗೆ ಅದು ಶೇ 17ರಷ್ಟು ಹೆಚ್ಚಳವಾಗಲಿದೆ. ಇದರಲ್ಲಿ ಚೀನಾ ನಗರಗಳ ಪಾಲು ಹೆಚ್ಚಿನದ್ದಾಗಿರಲಿದೆ.
2035ರ ವೇಳೆಗೆ ವಿಶ್ವದ ಅತಿ ದೊಡ್ಡ ನಗರಗಳ ಪಟ್ಟಿಯಲ್ಲಿ ಕೆಲವು ಬದಲಾವಣೆಗಳಾಗಲಿವೆ.
ನ್ಯೂಯಾರ್ಕ್, ಟೋಕಿಯೊ, ಲಾಸ್ ಏಂಜಲಿಸ್ ಮತ್ತು ಲಂಡನ್ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲಿವೆ. ಶಾಂಘೈ ಮತ್ತು ಬೀಜಿಂಗ್ ನಗರಗಳು ಪ್ಯಾರಿಸ್ ಹಾಗೂ ಷಿಕಾಗೊಗಳನ್ನು ಹಿಂದಿಕ್ಕಿ 20 ಮಿಲಿಯನ್ ಜನಸಂಖ್ಯೆಯೊಂದಿಗೆ ಮೇಲಕ್ಕೇರಲಿವೆ.
ದಕ್ಷಿಣ ಚೀನಾದ ಗಾಂಗ್ಜೌ ಮತ್ತು ಶೆಂಜೆನ್ ನಗರಗಳು ಟಾಪ್ 10ರಲ್ಲಿ ಸ್ಥಾನ ಪಡೆದುಕೊಳ್ಳಲಿವೆ. 2035ರ ವೇಳೆಗೆ ಟಾಪ್ 10 ಅತಿ ದೊಡ್ಡ ನಗರಗಳ ಪಟ್ಟಿಯಲ್ಲಿ ಚೀನಾದ ನಾಲ್ಕು ನಗರಗಳು ಇರಲಿವೆ. ಇದರಲ್ಲಿ ಭಾರತದ ನಗರಗಳ ಹೆಸರಿಲ್ಲ.
-
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್












Click it and Unblock the Notifications