ಪ್ರಿಂಟಿಂಗ್ ಪ್ರೆಸ್ ನಿಂದ ನೇರ ಕಾಳಧನಿಕರ ಮನೆ ತಲುಪಿವೆ ಹೊಸ ನೋಟುಗಳು!
ನವದೆಹಲಿ, ಜನವರಿ 11: ಕೇಂದ್ರ ಸರಕಾರದ ಆಲೋಚನೆಗಳು ಅದ್ಭುತವಾಗಿರಬಹುದು. ಅದಕ್ಕಿಂತ ವಿಭಿನ್ನವಾಗಿ, ಹೊಸ ರೀತಿಯಲ್ಲಿ ಆಲೋಚಿಸುವ ಖದೀಮರು ಇರುತ್ತಾರೆ ಎಂಬುದನ್ನು ಸಾಬೀತುಪಡಿಸುವಂಥ ನಿದರ್ಶನ ಇಲ್ಲಿದೆ. ಹೊಸ ನೋಟುಗಳು ಮುದ್ರಣಾಲಯದಿಂದ ಬ್ಯಾಂಕ್ ಗಳನ್ನು ತಲುಪುವ ಮುಂಚೆಯೇ ಕೆಲವು ವ್ಯಕ್ತಿಗಳನ್ನು ತಲುಪಿದ್ದವು ಎಂಬ ಸಂಗತಿ ಬಯಲಾಗಿದೆ.
ಗುಪ್ತಚರ ಇಲಾಖೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿ ಆಧಾರದಲ್ಲಿ ದೆಹಲಿಯಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡಾಗ ಆತನ ಬಳಿ ಕಂತೆ-ಕಂತೆ ಹೊಸ ನೋಟುಗಳು ಸಿಕ್ಕಿವೆ. ಆತನ ಹೆಸರು ಕೃಷ್ಣಕುಮಾರ್. ಡಿಸೆಂಬರ್ 15ರಂದೇ ವಶಕ್ಕೆ ಪಡೆದಿದ್ದು, ಆತನನ್ನು ಹಣ ಸಾಗಾಟಕ್ಕೆ ಬಳಸಿಕೊಳ್ಳುತ್ತಿದ್ದದ್ದು ತಿಳಿದುಬಂದಿದೆ.[ತೆರಿಗೆ ತಪ್ಪಿಸಿದ 3-4 ಲಕ್ಷ ಕೋಟಿ ರುಪಾಯಿ ಬ್ಯಾಂಕ್ ಗಳಿಗೆ ಜಮೆ]

ನೋಟು ಮುದ್ರಣವಾದದ್ದು ನೇರವಾಗಿ ಆಯಾ ವ್ಯಕ್ತಿಗಳಿಗೆ ತಲುಪುತ್ತಿದ್ದದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ನಾಸಿಕ್, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಲದ ಸಾಲ್ಬೋನಿಯಲ್ಲಿ ಮುದ್ರಣವಾದ ನೋಟುಗಳನ್ನು ಕಂತೆಕಂತೆ ಮಾಡಿ, ಕಳುಹಿಸಲಾಗಿದೆ. ಕೃಷ್ಣಕುಮಾರ್ ನನ್ನು ತಲುಪುವ ವೇಳೆಗೆ ನೋಟುಗಳು ಹಲವು ಕೈ ಬದಲಾಗಿವೆ.[ನೋಟ್ ಬ್ಯಾನ್ ನಂತರ 25 ಸಾವಿರ ಕೋಟಿ ರು. ಡಿಜಿಟಲ್ ವ್ಯವಹಾರ!]
ಮುದ್ರಣವಾದ ಹೊಸ ನೋಟುಗಳು ಬ್ಯಾಂಕ್ ಅಥವಾ ಎಟಿಎಂ ತಲುಪಬೇಕು. ಆದರೆ ಎರಡು ಮುದ್ರಣಾಲಯಲ್ಲಿ 5.20 ಕೋಟಿ ನೋಟುಗಳನ್ನು ನವೆಂಬರ್ 8ರ ನಂತರ ಮುದ್ರಿಸಲಾಗಿದೆ. ಆ ಪೈಕಿ ಕೆಲ ಭಾಗ ಬ್ಯಾಂಕ್ ಗಳನ್ನು ತಲುಪೇ ಇಲ್ಲ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಒನ್ಇಂಡಿಯಾಗೆ ಮಾಹಿತಿ ನೀಡಿದ್ದಾರೆ.
ನೋಟು ಮುದ್ರಣವಾದ ಮೇಲೆ ರಿಸರ್ವ್ ಬ್ಯಾಂಕ್ ತಲುಪಿಸುವ ಮೊದಲು ಅದನ್ನು ಒಂದು ಸಾವಿರ ನೋಟುಗಳ ಕಟ್ಟು ಮಾಡಲಾಗುತ್ತದೆ. ಅಲ್ಲಿಂದ ಇತರ ಬ್ಯಾಂಕ್ ಗಳಿಗೆ ಅವುಗಳನ್ನು ತಲುಪಿಸುವ ಮೊದಲು ನೂರರ ಕಟ್ಟಾಗಿ ಮಾಡಲಾಗುತ್ತದೆ. ಎಲ್ಲ ಕಟ್ಟುಗಳ ಮೇಲೆ ಸರಕಾರದ ಸೀಲು ಹಾಕಲಾಗುತ್ತದೆ. ಅಂಥ ಒಂದು ಕಟ್ಟು ಕೃಷ್ಣ ಕುಮಾರ್ ಬಳಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.[500, 1000 ರು. ನೋಟು ನಿಷೇಧ ಸರ್ಕಾರದ್ದು, ಆರ್ ಬಿಐನದ್ದಲ್ಲ!]
ಈ ಹಗರಣದಲ್ಲಿ ಬ್ಯಾಂಕ್ ಗಳ ಪಾತ್ರ ಇತ್ತೆ ಎಂಬ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ. ಆಯ್ದ ಕೆಲವರಿಗೆ ಹಾಗೆ ನೇರವಾಗಿ ಬ್ಯಾಂಕ್ ಗಳ ಹಣವನ್ನು ಬದಲಿಸಿಕೊಟ್ಟಿವೆಯಾ ಎಂಬ ಗುಮಾನಿ ಇದೆ. ಡಿಸೆಂಬರ್ ನಲ್ಲಿ ಸಿಬಿಐ ಇಬ್ಬರು ಅಧಿಕಾರಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿತ್ತು. ಅ ಇಬ್ಬರು ಕೆಲವು ವ್ಯಕ್ತಿಗಳಿಗೆ ದೊಡ್ಡ ಮೊತ್ತದ ಹಣ ಬದಲಾವಣೆ ಮಾಡಲು ನೆರವಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications