'ಮನ್ ಕಿ ಬಾತ್' ನಲ್ಲಿ ಮೋದಿ ಹೊಗಳಿದ ಬಾಲಕಿ ಯಾರು?
ಪ್ರತಿಬಾರಿ ಒಂದಿಲ್ಲೊಂದು ವಿಷಯಕ್ಕಾಗಿ ಚರ್ಚೆಯಾಗುವ ಪ್ರಧಾನಿಯರ ಮನ್ ಕಿ ಬಾತ್ ಈ ಬಾರಿ ಸುದ್ದಿಯಾಗಿದ್ದು, ಒಬ್ಬ 16 ವರ್ಷದ ಬಾಲಕಿಯ ವಿಷಯವನ್ನು ಮೋದಿ ಪ್ರಸ್ತಾಪಿಸಿದ ಕಾರಣಕ್ಕಾಗಿ.
ನವದೆಹಲಿ, ಮಾರ್ಚ್ 27: ಪ್ರಧಾನಿ ನರೇಂದ್ರ ಮೋದಿ, ಮಾರ್ಚ್ 26, ಭಾನುವಾರದಂದು ತಮ್ಮ 30 ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪ್ರತಿಬಾರಿ ಒಂದಿಲ್ಲೊಂದು ವಿಷಯಕ್ಕಾಗಿ ಚರ್ಚೆಯಾಗುವ ಪ್ರಧಾನಿಯರ ಮನ್ ಕಿ ಬಾತ್ ಈ ಬಾರಿ ಸುದ್ದಿಯಾಗಿದ್ದು, ಒಬ್ಬ 16 ವರ್ಷದ ಬಾಲಕಿಯ ವಿಷಯವನ್ನು ಮೋದಿ ಪ್ರಸ್ತಾಪಿಸಿದ ಕಾರಣಕ್ಕಾಗಿ.
ಡೆಹ್ರಾಡೂನ್ ನ ಅಜಬ್ ಪುರ ಎಂಬ ಹಳ್ಳಿಯ ಗಾಯತ್ರಿ ಸಿಂಗ್ ಅವರಿಗೆ, ಸುತ್ತಲ ಹಲವು ಊರಿಗೆ ನೀರು ನೀಡುತ್ತಿದ್ದ ರಿಸ್ಪಾನಾ ಎಂಬ ನದಿ ಇದೀಗ ತ್ಯಾಜ್ಯ ವಿಲೇವಾರಿ ಕೇಂದ್ರದಂತಾಗಿರುವುದರ ಬಗ್ಗೆ ಬೇಸರವಿತ್ತು. ಈ ಬಗ್ಗೆ ಅಲ್ಲಿನ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಕೋಪವೂ ಇತ್ತು. ಆದರೆ ಇವಕ್ಕೆಲ್ಲ ಪರಿಹಾರವೇನು ಎಂಬುದು ಗೊತ್ತಿರಲಿಲ್ಲ.[ಉತ್ತರ ಪ್ರದೇಶ ಸಂಸದರಿಗೆ ಪಾಠ ಹೇಳಿದ ಮೋದಿ, ಶಾ]
ತಮ್ಮೂರಿನ ಸಮಸ್ಯೆಯನ್ನು ಪ್ರಧಾನಿ ಮೋದಿಯವರಿಗೆ ತಿಳಿಸಿದರೆ ಏನಾದರೂ ಪ್ರಯೋಜನವಾದೀತು ಎಂದೆನ್ನಿಸಿದರೂ ಅವರನ್ನು ಸಂಪರ್ಕಿಸುವುದು ಹೇಗೆಂಬುದು ಗೊತ್ತಿರಲಿಲ್ಲ. ಆಗ ನೆನಪಾಗಿದ್ದು ಮನ್ ಕಿ ಬಾತ್ ಕಾರ್ಯಕ್ರಮ![ಗುಜರಾತ್, ರಾಜಸ್ಥಾನದ ಎಂಪಿಗಳನ್ನು ತುರ್ತಾಗಿ ಮೋದಿ ಭೇಟಿಯಾಗಿದ್ದು ಯಾಕೆ?]
ಪ್ರಧಾನಿಯವರ ಮನ್ ಕಿ ಬಾತ್ ಕಾರ್ಯಕ್ರಮದ ಬಗ್ಗೆ ತಿಳಿದಿದ್ದ ಗಾಯತ್ರಿ ತಮ್ಮೂರಿನ ದೂರದರ್ಶನ ಕಚೇರಿಗೆ ನೇರವಾಗಿ ಹೋಗಿ ತನ್ನ ಅಳಲನ್ನು ತೋಡಿಕೊಂದು, ತನ್ನ ಮನವಿಯನ್ನು ಪ್ರಧಾನಿಯವರಿಗೆ ತಿಳಿಸಬೇಕೆಂದು ಕೇಳಿಕೊಂಡಳು. ದೂರದರ್ಶನ ಅದಕ್ಕೆ ಒಪ್ಪಿಗೆ ನೀಡಿತು.[ಮೋದಿ ಆದರ್ಶಗಳಿಗೆ ಮರುಳಾಗಿ ಬಿಜೆಪಿ ಸೇರಿದೆ: ಎಸ್ಸೆಂ ಕೃಷ್ಣ]
ಆಕೆ ಮಾತನಾಡಿದ ಆಡಿಯೋ ಕ್ಲಿಪ್ ಅನ್ನು ಮೋದಿಯವರು ತಾವಷ್ಟೇ ಅಲ್ಲದೆ, ಇಡೀ ಭಾರತವೂ ಕೇಳುವಂತೆ ಮಾಡಿದರು. ಜೀವಜಲವನ್ನು ಕಸದ ತೊಟ್ಟಿಯನ್ನಾಗಿ ಮಾಡುತ್ತಿರುವ ಜನರ ಕುರಿತು, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಗಾಯತ್ರಿಯವರ ಧೈರ್ಯವನ್ನು, ದೇಶದ ಬಗೆಗಿನ ಕಾಳಜಿಯನ್ನು ಮೋದಿ ಮೆಚ್ಚಿಕೊಂಡರು.[ನರೇಂದ್ರ ಮೋದಿ ಅಶ್ವಮೇಧ ಯಾಗ ವಿಫಲಗೊಳಿಸಲು ಮೆಗಾಪ್ಲಾನ್]
ನಮ್ಮ ಸ್ವಚ್ಛ ಭಾರತ ಅಭಿಯಾನಕ್ಕೆ ಗಾಯತ್ರಿ ಅವರ ಮಾತುಗಳು ಪ್ರೇರಣಾದಾಯಿಯಾಗಿವೆ. ಗಾಯತ್ರಿಯವರಂತೆಯೇ ಎಲ್ಲ ನಾಗರಿಕರಿಗೂ ತಾವು ವಾಸಿಸುವ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಮತ್ತು ಕಾಳಜಿ ಮೂಡಿದ್ದೇ ಆದಲ್ಲಿ ಸ್ವಚ್ಛ ಭಾರತದ ಪರಿಕಲ್ಪನೆ ವಾಸ್ತವಕ್ಕೆ ಬರುತ್ತದೆ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು.