ಸಲಿಂಗಕಾಮ ಒಂದು ಪ್ರವೃತ್ತಿ, ಅದು ಶಾಶ್ವತವಲ್ಲ: ರವಿಶಂಕರ್ ಗುರೂಜಿ
ನವದೆಹಲಿ, ನವೆಂಬರ್ 14: "ಸಲಿಂಗಕಾಮ ಎಂಬುದು ಒಂದು ಪ್ರವೃತ್ತಿ. ಈ ಪ್ರವೃತ್ತಿ ಶಾಶ್ವತವಲ್ಲ. ಕ್ರಮೇಣ ಅದು ಬದಲಾಗಬಹುದು" ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಹೇಳಿದರು.
ನ.14 ರಂದು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ ಯು)ದಲ್ಲಿ ವಾರ್ಷಿಕವಾಗಿ ನಡೆಯುವ ನೆಹರು ಸಂಸ್ಮರಣ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
'ಸಲಿಂಗಕಾಮ ಒಂದು ಪ್ರವೃತ್ತಿ. ಅದನ್ನು ಒಪ್ಪಿಕೊಳ್ಳಿ, ಆದರೆ ಒಂದು ವಿಷಯವನ್ನು ಮರೆಯಬೇಡಿ, ಈ ಪ್ರವೃತ್ತಿ ಶಾಶ್ವತವಲ್ಲ. ಕ್ರಮೇಣ ಈ ಮನಸ್ಥಿತಿ ಬದಲಾಗಬಹುದು. ನಾನು ಎಷ್ಟೋ ಪುರುಷ ಸಲಿಂಗಕಾಮಿಗಳನ್ನು ನೋಡಿದ್ದೇನೆ. ಆದರೆ ಅವರೆಲ್ಲ ಕ್ರಮೇಣ ಬದಲಾಗಿದ್ದಾರೆ. ಸಾಮಾನ್ಯ ಜನರಂತೇ ಮನಃಪರಿವರ್ತನೆಗೊಂಡಿದ್ದಾರೆ" ಎಂದರು.
ಇದಕ್ಕೂ ಮೊದಲು ಸಹ ಅವರು ಸಲಿಂಗ ಕಾಮದ ಬಗ್ಗೆ ಮಾತನಾಡಿದ್ದರು. ಹಿಂದು ಸಂಸ್ಕೃತಿಯಲ್ಲಿ ಸಲಿಂಗ ಕಾಮವನ್ನು ಅಪರಾಧ ಎಂದು ಎಲ್ಲಿಯೂ ಹೇಳಲಾಗಿಲ್ಲ ಎಂದಿದ್ದರು.
|
ಹಿಂದು ಸಂಸ್ಕೃತಿಯಲ್ಲಿ ಸಲಿಂಗಕಾಮ ತಪ್ಪಲ್ಲ!
2013, ಡಿಸೆಂಬರ್ 11 ರಂದು ಸಲಿಂಗಕಾಮದ ಕುರಿತು ಟ್ವೀಟ್ ಮಾಡಿದ್ದ ಶ್ರೀ ರವಿಶಂಕರ್ ಗುರೂಜಿ, "ಸಲಿಂಗ ಕಾಮವನ್ನು ಹಿಂದು ಸಂಸ್ಕೃತಿಯಲ್ಲೆಲ್ಲೂ ಅಪರಾಧವೆಂಬಂತೆ ಉಲ್ಲೇಖಿಸಿಲ್ಲ. ಅಷ್ಟಕ್ಕೂ ಅಯ್ಯಪ್ಪ ಸ್ವಾಮಿ ಹುಟ್ಟಿದ್ದು ಹರಿ-ಹರ(ವಿಷ್ಣು-ಶಿವ)ರಿಗೇ ತಾನೆ?" ಎಂದಿದ್ದರು.
|
ಅದೊಂದು ಪ್ರವೃತ್ತಿ ಅಷ್ಟೆ!
ಯಾವ ಸ್ಮೃತಿಯಲ್ಲೂ ಸಲಿಂಗಕಾಮ ತಪ್ಪು ಎಂದಿಲ್ಲ. ಪ್ರತಿಯೊಬ್ಬರಲ್ಲೂ ಪುರುಷ, ಸ್ತ್ರೀ ಅಂಶಗಳಿದ್ದೇ ಇರುತ್ತವೆ. ಅವರವರ ಆದ್ಯತೆ, ಪ್ರವೃತ್ತಿಗೆ ತಕ್ಕಂತೆ ಅವರ ಆಸಕ್ತಿಗಳಿರುತ್ತವೆ, ಮತ್ತು ಈ ಸ್ಥಿತಿ ಬದಲಾಗಬಹುದು ಎಂದೂ ಟ್ವೀಟ್ ಮಾಡಿದ್ದರು.
|
ಲೈಂಗಿಕ ಆಸಕ್ತಿಯ ಮೇಲೆ ತಾರತಮ್ಯ ಎದುರಿಸಬಾರದು!
ಯಾರೂ ಸಹ ತಮ್ಮ ತಮ್ಮ ಲೈಂಗಿಕ ಆಸಕ್ತಿಯ ಮೇಲೆ, ಆದ್ಯತೆಯ ಮೇಲೆ ತಾರತಮ್ಯ ಎದುರಿಸಬಾರದು. ಈ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂಬುದು ನಿಜಕ್ಕೂ ಅಸಂಬದ್ಧ ನಡೆ ಎನ್ನುವ ಮೂಲಕ ಸಲಿಂಗಕಾಮಿಗಳಿಗೆ ಬೆಂಬಲ ನೀಡಿದ್ದರು.
|
ಇಂದೂ ಪುನರುಚ್ಛಾರ
ಇಂದು(ನ.14) ಸಹ ತಮ್ಮ ಅದೇ ಮಾತನ್ನು ಸಮರ್ಥಿಸಿಕೊಂಡ ಶ್ರೀ ರವಿಶಂಕರ್ ಗುರೂಜಿ ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ ಮಾತನಾಡುತ್ತ, "ಸಲಿಂಗಕಾಮದ ಪ್ರವೃತ್ತಿ ಶಾಶ್ವತವಲ್ಲ, ಅದು ಬದಲಾಗಬಹುದು. ಅದು ತಪ್ಪಲ್ಲ" ಎಂದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications