ರಾಹುಲ್-ಎಚ್ಡಿಕೆ ಭೇಟಿಗೆ ಕ್ಷಣಗಣನೆ: ಮಾತುಕತೆ ಹಿನ್ನೆಲೆ ಏನು?
Recommended Video
ಬೆಂಗಳೂರು, ಆಗಸ್ಟ್ 30: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇಂದು(ಆಗಸ್ಟ್ 30) ದೆಹಲಿಗೆ ತೆರಳಲಿದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಲಿದ್ದಾರೆ.
ವಿಡಿಯೋ ಕಾನ್ಫೆರೆನ್ಸ್ ಮೂಲಕ ಅಮೆರಿಕ ಕನ್ನಡಿಗರ ಉದ್ದೇಶಿಸಿ ಎಚ್ಡಿಕೆ ಭಾಷಣ
ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಆತಂಕ ಮೂಡಿರುವ ಬೆಳವಣಿಗೆ ಹಿನ್ನೆಲೆಯಲ್ಲೇ ಮುಖ್ಯಮಂತ್ರಿ ರಾಹುಲ್ ಗಾಂಧಿ ಭೇಟಿಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ದೆಹಲಿಗೆ ಪ್ರಯಾಣ ಬೆಳೆಸಿರುವ ಕುಮಾರಸ್ವಾಮಿ ದೆಹಲಿ ತಲುಪುತ್ತಿದ್ದಂತೆಯೇ ರಾಹುಲ್ ಭೇಟಿ ಮಾಡಲಿದ್ದಾರೆ, ಬೆಳಗ್ಗೆ 9.30ಕ್ಕೆ ರಾಹುಲ್ ಭೇಟಿಗೆ ಸಮಯ ನಿಗದಿ ಮಾಡಲಾಗಿದೆ.
ಕೊಡಗಿಗೆ ನೆರವು ಕೇಳಲು ಆಗಸ್ಟ್ 30ಕ್ಕೆ ದೆಹಲಿಗೆ ಹಾರಲಿದ್ದಾರೆ ಎಚ್ಡಿಕೆ
ಈ ವೇಳೆ ರಾಜ್ಯದಲ್ಲಿನ ವಿದ್ಯಮಾನಗಳ ಬಗ್ಗೆ ಎಚ್ಡಿಕೆ ಚರ್ಚಿಸುವ ಸಾಧ್ಯತೆ ಇದೆ, ಮೈತ್ರಿ ಸರ್ಕಾರ ಅತಂತ್ರಗೊಳೀಸುವ ಯತ್ನ ನಡೆಯುತ್ತಿರುವುದಾಗಿ ಸಿಎಂ ಒಮ್ಮೆ ಹೇಳಿಕೆಯನ್ನು ನೀಡಿದ್ದರು.
ಲೋಕಸಭೆಯಲ್ಲಿ ಹೊಂದಾಣಿಕೆಯ ನಿರ್ಧಾರ ಒಂದೆಡೆ ಆಗಿದೆ ಹಾಸನ ಸೇರಿ ಕೆಲವು ಜಿಲ್ಲೆಗಳಲ್ಲಿ ಸಮಸ್ಯೆ ಇರುವುದಾಗಿ ಸಿಎಂ ಒಪ್ಪಿಕೊಂಡಿದ್ದಾರೆ. ಇಂಥ ಸೂಕ್ಷ್ಮ ಸಂಗತಿ ಬಗ್ಗೆ ರಾಹುಲ್ ಜತೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.