ಏನ್ ಮಾಡ್ಕೋತಿಯೋ ಮಾಡ್ಕೋ ಅಂದವನಿಗೆ ತಕ್ಕ ಶಾಸ್ತಿ
ನವದೆಹಲಿ, ಆಗಸ್ಟ್, 24 : ಆಧುನಿಕ ಯುಗದಲ್ಲಿ ಮಹಿಳೆಯರು ಇತ್ತೀಚೆಗೆ ಒಬ್ಬಂಟಿಯಾಗಿ ಓಡಾಡುವ, ಎಲ್ಲಾ ಕೆಲಸ ಕಾರ್ಯಗಳಲ್ಲಿ ದೈರ್ಯವಾಗಿ ತೊಡಗಲು ಶುರುವಿಟ್ಟಿದ್ದಾಳೆ. ಪುಂಡರ ಹುಚ್ಚಾಟಗಳಿಗೆ ಹೆದರುತ್ತಾ ಮನೆಯಿಂದ ಹೊರಗೆ ಅಡಿ ಇಡುವ ಮಹಿಳೆಯರಿಗೆ ಇಲ್ಲೊಬ್ಬ ಕಾಲೇಜು ಯುವತಿ ಮಾದರಿಯಾಗಿದ್ದಾಳೆ.
ದೆಹಲಿಯ ಅಗರ್ ವಾಲಾ ಬಳಿಯ ತಿಲಕ್ ನಗರ ನಿವಾಸಿಯಾದ, ಕಾಲೇಜು ಯುವತಿ ಜಸ್ಲೀನ್ ಕವೂರ್ ಟ್ರಾಫಿಕ್ನಲ್ಲಿ ಹೋಗುತ್ತಿದ್ದಾಗ ಇಲ್ಲೊಬ್ಬ ಭೂಪ ಭಾನುವಾರ ರಾತ್ರಿ 8ರ ಸಮಯದಲ್ಲಿ ರೇಗಿಸಿದ್ದಾನೆ. ಈಕೆ ತಿರುಗಿ ಮಾತನಾಡಿದಾಗ "Jo kar sakti hai kar le. Complaint karke dikha, fir dekhiyo kya karta hun main".ಎಂದು ಹೇಳಿ ಪೇಚಿಗೆ ಸಿಲುಕಿದ್ದಾನೆ.[ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತಿದ್ದಾಗ....]

ಯುವತಿಗೆ ಆ ಪೋಕಿರಿ ಕಂಡ ಸಾರ್ವಜನಿಕರು ಮೂಕ ಕೇವಲ ಮೂಕ ಪ್ರೇಕ್ಷರಾಗಿದ್ದರು. ಆಕೆಯ ಸಹಾಯಕ್ಕೆ ಯಾರು ಧಾವಿಸಲಿಲ್ಲ. ಇದರಿಂದ ಧೈರ್ಯಗೆಡದ ಯುವತಿ ಆತನ ಫೋಟೋ ತೆಗೆದು ಆತ ರೇಗಿಸಿದ್ದನ್ನು ಸಾಮಾಜಿಕ ಜಾಲತಾಣ(ಫೇಸ್ ಬುಕ್)ನಲ್ಲಿ ಹಾಕಿದ್ದಾಳೆ.
ಯುವತಿಯ ಫೇಸ್ ಬುಕ್ ಪುಟ ನೋಡಿದ ದೆಹಲಿ ಡಿಸಿಪಿ ಮಧುರ್ ವರ್ಮ 'ಯುವತಿಗೆ ನಡೆದಿರುವ ಘಟನೆಯ ಕುರಿತಾಗಿ ದೂರು ನೀಡುವಂತೆ ಹೇಳಿ ಆತನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬಳಿಕ ತಿಲಕ್ ನಗರ ಪೊಲೀಸ್ ಠಾಣೆಗೆ ತೆರಳಿದ ಕವೂರ್ ಆತನ ಅಸಭ್ಯ ವರ್ತನೆಯ ವಿರುದ್ದ ಆತನ ಬೈಕ್ ನಂಬರ್ ಸೇರಿದಂತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯುವತಿಯ ಧೈರ್ಯವನ್ನು ಮೆಚ್ಚಿದ ದೆಹಲಿಯ ಪಶ್ಚಿಮ ವಿಭಾಗದ ಡಿಸಿಪಿ ಆಕೆಗೆ 5000ರೂ ಬಹುಮಾನ ನೀಡಿ ಗೌರವಿಸಿದ್ದಾರೆ.
This man (misnomer) made obscene comments on me today at around 8 pm near Aggarwal, Tilak Nagar. He was on a silver...
Posted by Jasleen Kaur onSunday, August 23, 2015
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications