Get Updates
Get notified of breaking news, exclusive insights, and must-see stories!

ಸರ್ಕಾರಿ ವಸತಿ ಗೃಹವನ್ನು ಖಾಲಿಮಾಡುವಂತೆ ಸುಬ್ರಮಣಿಯನ್ ಸ್ವಾಮಿಗೆ ಹೈಕೋರ್ಟ್ ಸೂಚನೆ

ನವದೆಹಲಿ, ಸೆ.14: ದೆಹಲಿ ಹೈಕೋರ್ಟ್ ಬುಧವಾರ ರಾಜ್ಯಸಭಾ ಮಾಜಿ ಸಂಸದ ಡಾ.ಸುಬ್ರಮಣಿಯನ್ ಸ್ವಾಮಿ ಅವರಿಗೆ ಲುಟಿಯನ್ಸ್ ಬಂಗಲೆ ವಲಯದಲ್ಲಿರುವ ಸರ್ಕಾರಿ ವಸತಿ ಸೌಕರ್ಯವನ್ನು ಆರು ವಾರಗಳಲ್ಲಿ ಖಾಲಿ ಮಾಡಿ ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ಸೂಚಿಸಿದೆ.

ಭದ್ರತಾ ಬೆದರಿಕೆಯ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಗೆ 2016ರಲ್ಲಿ ನೀಡಲಾಗಿದ್ದ ಸರ್ಕಾರಿ ವಸತಿ ಗೃಹವನ್ನು ತೆರವುಗೊಳಿಸಲು ದೆಹಲಿ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ. ಮನೆ ಖಾಲಿ ಮಾಡಲು ಸ್ವಾಮಿ ಅವರಿಗೆ ಆರು ವಾರಗಳ ಕಾಲಾವಕಾಶ ನೀಡಿದೆ.

ಸ್ವಾಮಿ ಅವರು ಐದು ವರ್ಷಗಳ ನಂತರ ವಸತಿಯನ್ನು ಮರುಹಂಚಿಕೆ ಮಾಡುವಂತೆ ಕೋರಿದ್ದರು.

ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಐದು ವರ್ಷಗಳ ಕಾಲ ವಸತಿ ಹಂಚಿಕೆ ಮಾಡಲಾಗಿದ್ದು, ಆ ಅವಧಿ ಮುಕ್ತಾಯವಾಗಿದೆ. "ಝಡ್ ವರ್ಗದ ಭದ್ರತೆ ಹೊಂದಿರುವವರಿಗೆ ಸರ್ಕಾರಿ ವಸತಿ ಸೌಕರ್ಯವನ್ನು ಕಡ್ಡಾಯಗೊಳಿಸುವ ಮತ್ತು ಅದರೆ ಅಗತ್ಯವಿರುವ ಯಾವುದೇ ವಿಷಯ ನ್ಯಾಯಾಲಯದ ಮುಂದೆ ತೋರಿಸಲಾಗಿಲ್ಲ" ಎಂದು ಪೀಠ ಹೇಳಿದೆ.

ಏಪ್ರಿಲ್ 24 ರವರೆಗೆ ಸಂಸತ್ತಿನ ಮೇಲ್ಮನೆ ಸದಸ್ಯರಾಗಿದ್ದ ಸ್ವಾಮಿ ಅವರು ಝಡ್ ಕೆಟಗರಿ ರಕ್ಷಕರಿಗೆ ಮಾಡಬೇಕಾದ ಭದ್ರತಾ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು, ಮೂಲತಃ ತಮಗೆ ನೀಡಲಾಗಿದ್ದ ವಸತಿಯನ್ನು ಮುಂದುವರಿಸಬೇಕು ಎಂದು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

Delhi HC Asks Subramanian Swamy to Vacate House in Six weeks Over Security Threat

ಸ್ವಾಮಿಯನ್ನು ಪ್ರತಿನಿಧಿಸಿದ ಹಿರಿಯ ವಕೀಲ ಜಯಂತ್ ಮೆಹ್ತಾ ಅವರು 2016 ರ ಜನವರಿಯಲ್ಲಿ ಲೈಸೆನ್ಸ್ ಶುಲ್ಕವನ್ನು ಪಾವತಿಸಿದ ಮೇಲೆ ಭದ್ರತಾ ಕಾರಣಗಳಿಗಾಗಿ ಐದು ವರ್ಷಗಳ ಅವಧಿಗೆ ವಸತಿಯನ್ನು ಮಂಜೂರು ಮಾಡಲಾಗಿತ್ತು. ಅದು ರಾಜ್ಯಸಭಾ ಸದಸ್ಯರಾಗಿ ಅವರ ಬಳಿಯೇ ಮುಂದುವರೆಯಿತು ಎಂದರು.

ಸ್ವಾಮಿ ಅವರು ಸಾರ್ವಜನಿಕ ಖಜಾನೆಗೆ ಹೊರೆಯಾಗಲು ಬಯಸುವುದಿಲ್ಲ ಎಂದು ವಾದಿಸಿದ ಮೆಹ್ತಾ, "ನನ್ನ ವೈಯಕ್ತಿಕ ವಸತಿಗೆ ಬದಲಾಯಿಸಲು ನನಗೆ ಯಾವುದೇ ತೊಂದರೆ ಇಲ್ಲ. ಆದರೆ ವೈಯಕ್ತಿಕ ಸೌಕರ್ಯಗಳು ಸಾಕಷ್ಟಿಲ್ಲ. ಈ ಅನೇಕ ಭದ್ರತಾ ಸಿಬ್ಬಂದಿಯಿಂದ ಸುತ್ತುವರೆದಿರುವವರು, ನಾನು ಅಷ್ಟು ಜನರ ವಸತಿಯನ್ನು ಖಚಿತಪಡಿಸಿಕೊಳ್ಳುವುದು ಮಾತ್ರವಲ್ಲದೆ ಅವರಿಗೆ ವಿಶ್ರಾಂತಿ ಪಡೆಯಲು, ಉಳಿದುಕೊಳ್ಳಲು ಮತ್ತು ಅವರ ಮೂಲಭೂತ ಅಗತ್ಯಗಳನ್ನು ಪೂರೈಸಲು ಮನೆಯ ಸೌಲಭ್ಯಗಳನ್ನು ಸಹ ಖಚಿತಪಡಿಸಿಕೊಳ್ಳಬೇಕು. ನನ್ನ ಖಾಸಗಿ ಮನೆಯಲ್ಲಿ ಅಷ್ಟೊಂದು ಜನರನ್ನು ಇರಿಸಲು ಸಾಧ್ಯವಿಲ್ಲ," ಎಂದು ತಿಳಿಸಿದ್ದಾರೆ.

ಕೇಂದ್ರವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರು ವಾಸ್ತವ್ಯವನ್ನು ವಿಸ್ತರಿಸಲು ಸಾಧ್ಯವಾಗದಿದ್ದರೂ, ಭದ್ರತಾ ಏಜೆನ್ಸಿಗಳು ನಿಜಾಮುದ್ದೀನ್ ಪೂರ್ವದಲ್ಲಿರುವ ಸ್ವಾಮಿ ಅವರ ಖಾಸಗಿ ನಿವಾಸದಲ್ಲಿ ತಮ್ಮ ಸೇವೆಗಳನ್ನು ಒದಗಿಸುತ್ತವೆ. ನಿಜಾಮುದ್ದೀನ್ ಪೂರ್ವದಲ್ಲಿ ಅರಮನೆಯಂತಹ ಮನೆಯನ್ನು ಹೊಂದಿದ್ದಾರೆ, ಇದು ಬಹಳ ಸುಂದರವಾದ ಸ್ಥಳದಲ್ಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಸಾರ್ವಜನಿಕ ಆವರಣ ಕಾಯಿದೆಯ ಪ್ರಕಾರ ಸ್ವಾಮಿಯನ್ನು ಅನಧಿಕೃತ ನಿವಾಸಿ ಎಂದು ಘೋಷಿಸಲಾಗಿದೆ ಎಂದು ಜೈನ್ ಹೇಳಿದರು. ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವ ಕಾರಣ ಅನಧಿಕೃತ ಒತ್ತುವರಿ ತೆರವಿಗೆ ಕ್ರಮಕೈಗೊಂಡಿಲ್ಲ ಎಂದು ಸರ್ಕಾರಿ ವಕೀಲರು ತಿಳಿಸಿದರು. ನಿಯತಕಾಲಿಕ ಪರಿಶೀಲನೆಗೆ ಒಳಪಟ್ಟು ಸಂರಕ್ಷಣಾ ಏಜೆನ್ಸಿಗಳು ಸ್ವಾಮಿಗೆ Z ವರ್ಗದ ರಕ್ಷಣೆಯನ್ನು ವಿಸ್ತರಿಸುವುದನ್ನು ಮುಂದುವರೆಸುತ್ತವೆ. ಅವರ ಖಾಸಗಿ ಮನೆಯಲ್ಲಿ ಅವರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸಮರ್ಥ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದು ಜೈನ್ ಹೇಳಿದರು.

ಜೊತೆಗೆ ದೆಹಲಿ ಹೈಕೋರ್ಟ್‌ನಲ್ಲಿ ಮಂತ್ರಿಗಳ ಮಂಡಳಿ ಮತ್ತು ಹೆಚ್ಚಿದ ನ್ಯಾಯಾಧೀಶರಿಗೆ ಸರ್ಕಾರಿ ವಸತಿಗಳ ಅಗತ್ಯವಿದೆ ಎಂದು ಜೈನ್ ಒತ್ತಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+