ಮಾರುತಿ 800ನಲ್ಲಿ ಐದು ಸೀಟು, ಬಿಜೆಪಿಗೆ ಮೂರು ಸೀಟು
ಎಕ್ಸಿಟ್ ಪೋಲ್ ಫಲಿತಾಂಶದ ನಂತರ ಸೋಲು ಖಚಿತ ಎನ್ನುವ ಮನಸ್ಥಿತಿಯಲ್ಲಿ ಬಿಜೆಪಿಯವರಿದ್ದರೂ, ಈ ರೀತಿಯ ದಯನೀಯ ಸೋಲು ಎದುರಾಗುತ್ತೆ ಎಂದು ಕನಸು ಮನಸಿನಲ್ಲೂ ನೆನೆಸಿರಲಿಕ್ಕಿಲ್ಲ. ದೆಹಲಿಯ ಮತದಾರ ಎರಡೂ ರಾಷ್ಟೀಯ ಪಕ್ಷಗಳಿಗೆ ತನ್ನ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾನೆ.
ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ, ಕೆಲವೇ ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಎಲ್ಲಾ ಏಳು ಸೀಟನ್ನು ಗೆದ್ದಿದ್ದ ಬಿಜೆಪಿಗೆ ಈ ಫಲಿತಾಂಶ ಜೀರ್ಣಿಸಲು ಕಷ್ಟವಾಗಬಹುದು. ಇನ್ನು ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಖಾತೆಯೇ ತೆರೆಯದೇ ತೀವ್ರ ಮುಖಭಂಗ ಅನುಭವಿಸಿದೆ. (ನೆಗಟಿವ್ ಪಬ್ಲಿಸಿಟಿ ಬಿಜೆಪಿ ಸೋಲಿಗೆ ಕಾರಣ)
ಆಪ್ ಜಯಭೇರಿ, ಬಿಜೆಪಿ ಮತ್ತು ಕಾಂಗ್ರೆಸ್ಸಿನ ಸೋಲನ್ನು ಸಾಮಜಿಕ ತಾಣ/ ವಾಟ್ಸಪ್ ನಲ್ಲಿ ಕೆಲವರು ತಮ್ಮದೇ ಶೈಲಿಯಲ್ಲಿ ವರ್ಣಿಸಿಕೊಂಡಿದ್ದಾರೆ. ಅದರೆ ಕೆಲವೊಂದು ಸ್ಯಾಂಪಲ್..

> ಮಾರುತಿ 800 ನಲ್ಲಿ ಐದು ಸೀಟು, ಬಿಜೆಪಿಗೆ ಮೂರು ಸೀಟು
> ಕಳೆದ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರು (8 ಶಾಸಕರಿದ್ದರು) ಸದನಕ್ಕೆ ಇನ್ನೋವಾದಲ್ಲಿ ಬರುತ್ತಿದ್ದರು, ಈ ಬಾರಿ ಅದರ ಅವಶ್ಯಕತೆಯಿಲ್ಲ.
> ದೆಹಲಿಯಲ್ಲಿ ಮೋದಿ 'ಅಲೆ' ಯಿಲ್ಲ, ಯಾಕೆಂದರೆ ಅಲ್ಲಿ ಸಮುದ್ರವಿಲ್ಲ
> ಗೆದ್ದ ವಾಮನ ಕೇಜ್ರಿವಾಲ, ಜವಾಬ್ದಾರಿ ಹಾಗೂ ನಿರೀಕ್ಷೆ ಹೆಚ್ಚಾಗಿದೆ, ಮರೆಯಬೇಡ ಮಾರಾಯ..
> ಆಪ್ ಬನ್ಗಯಾ ಸಬ್ಕಾ ಬಾಪ್
> ಕಡೆಗೂ ದೆಹಲಿಯಲ್ಲಿ 'ನಕ್ಸಲ್' ಗಳು ಸೇರಿ ಕೊಳೆ ಕಮಲದ ಕಳೆಯನ್ನು ಬುಡ ಸಹಿತ ಕಿತ್ತು ಹಾಕಿದರು.
> ಚುನಾವಣಾ ಸಭೆಯಲ್ಲಿ ಮೋದಿ ಜನರನ್ನು ಕೇಳಿದರು, 'ಮಿತ್ರೋ ಕಿಸ್ಕೋ ವೋಟ್ ಕರೋಗೆ, ಜನ ಹೇಳಿದ್ರು 'ಆಪ್ಕೋ'. ದೆಹಲಿಯ ಜನತೆ ನುಡಿದಂತೆ ನಡೆದರು.
> ಮೋದಿಯ ಅವಸರದ ಬೇಧಿಗೆ ಸರಿಯಾದ ಜಾಪಾಳ ಮಾತ್ರೆ ಕೊಟ್ಟ ಅರವಿಂದ.
> ಕಡೆಗೂ ಕೃಷ್ಣಾನಗರವೂ (ಬೇಡಿ ಸ್ಪರ್ಧಿಸಿದ್ದ ಕ್ಷೇತ್ರ) ಸ್ವಚ್ಚ ಭಾರತದ ಆಂದೋಲನದಲ್ಲಿ ಭಾಯಿಯಾಯಿತು.
> ನೋಡುವ ಹಿಡಿಸೂಡಿ ಹಿಡಿದ ಹೊಸಬರು ಚೆನ್ನಾಗಿ ಗುಡಿಸಿಯಾರು, ಬಿಜೆಪಿಯ ಮೂವರು ಇನ್ನು ಸದನದಲ್ಲಿ ಗೋಲಿ ಆಡಬಹುದು.
> AAP has exceeded expectations, BJP below expectations only Congress met the expectations..
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications