ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದೆಹಲಿ ಕಾಲೇಜು ಹೆಸರು ಬದಲಾವಣೆ ಸರ್ಕಾರದ ನಿರ್ಧಾರವಲ್ಲ'

By Mahesh
|
Google Oneindia Kannada News

ನವದೆಹಲಿ, ಡಿಸೆಂಬರ್ 19: ದೆಹಲಿಯ ದಯಾಳ್ ಸಿಂಗ್ (ಸಂಜೆ) ಕಾಲೇಜಿನ ಹೆಸರನ್ನು ಬದಲಾಯಿಸುವ ನಿರ್ಧಾರ ಸರ್ಕಾರ ತೆಗೆದುಕೊಂಡಿದ್ದಲ್ಲ ಎಂದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.

ಅಕಾಲಿದದಳ ಸಂಸದ ನರೇಶ್ ಗುಜ್ರಾಲ್ ಕೇಳಿದ ಪ್ರಶ್ನೆಗೆ ಪ್ರಕಾಶ್ ಜಾವಡೇಕರ್ ಅವರು ಸಂಸತ್ತಿನ ಶೂನ್ಯವೇಳೆಯಲ್ಲಿ ಉತ್ತರಿಸಿದರು. ನವೆಂಬರ್ 18ರಂದು ಈ ಕಾಲೇಜಿನ ಹೆಸರನ್ನು ವಂದೇ ಮಾತರಂ ಮಹಾವಿದ್ಯಾಲಯ ಎಂದು ಬದಲಾಯಿಸಲಾಗಿತ್ತು.

Decision to rename Delhi Dayal Singh Evening college put on hold : Prakash Javadekar

ಪ್ರತಿ ಭಾರತೀಯರ ಮನಸ್ಸಿನಲ್ಲಿ ದೇಶಭಕ್ತಿಯ ಭಾವನೆಯು ವಂದೇ ಮಾತರಂ ಎಂಬ ಭಾವನೆ ಇದೆ ಎಂದು ನಾನು ನಂಬುತ್ತೇನೆ. ಸರ್ಕಾರವು ದೇಶದಾದ್ಯಂತ ವಂದೇ ಮಾತರಮ್ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಬೇಕು, ಆದರೆ ಯಾವುದೇ ಸಂಸ್ಥೆಯ ಹೆಸರನ್ನು ಬದಲಾಯಿಸಬಾರದು. ಅಲ್ಪಸಂಖ್ಯಾತರ ಶಾಲೆ ಹೆಸರನ್ನು ಬದಲಾಯಿಸುವುದರಿಂದ ಸಿಖ್ಖರ ಮನೋಭಾವವನ್ನು ಹಾನಿಯುಂಟುಮಾಡಿದೆ ಎಂದು ಗುಜ್ರಾಲ್ ಆರೋಪಿಸಿದ್ದರು.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಕಾಲೇಜು ಹೆಸರನ್ನು ಬದಲಿಸುವ ನಿರ್ಧಾರ ಕೇಂದ್ರ ಸರ್ಕಾರದ ನಿರ್ಧಾರವಲ್ಲ. ದಯಾಳ್ ಸಿಂಗ್ ಕಾಲೇಜ್ ದೆಹಲಿ ವಿಶ್ವವಿದ್ಯಾನಿಲಯಕ್ಕೆ ಅಧೀನದಲ್ಲಿದ್ದು, ಈ ಬಗ್ಗೆ ವಿವಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಜಾವಡೇಕರ್ ತಿಳಿಸಿದರು.

English summary
Clarifying its stance on a row over renaming Dyal Singh (Evening) College, HRD Minister Prakash Javadekar on Tuesday said the decision to change the name of the institution was not made by the government and that it has been put on hold.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X