Get Updates
Get notified of breaking news, exclusive insights, and must-see stories!

ಮುಂಗಾರು ಅಧಿವೇಶನ: ಅಮಾನತುಗೊಂಡ ಸಂಸದರಿಂದ ಮುಂದುವರೆದ ಪ್ರತಿಭಟನೆ

ಹೊಸದಿಲ್ಲಿ ಜುಲೈ 27: ಅಮಾನತುಗೊಂಡಿರುವ ಸಂಸದರು ತಮ್ಮ ಧರಣಿಯನ್ನು ಅಂತ್ಯಗೊಳಿಸದಿರುವ ನಿರ್ಧಾರದಲ್ಲಿ ದೃಢವಾಗಿ ನಿಂತಿದ್ದಾರೆ. ಶುಕ್ರವಾರ ಸಂಜೆ 5 ಗಂಟೆಯವರೆಗೆ ಸಂಸದರ ಧರಣಿ ಮುಂದುವರಿಯಲಿದೆ ಎಂದು ರಾಜ್ಯಸಭೆಯಿಂದ ಅಮಾನತುಗೊಂಡಿರುವ ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ. ವಯಸ್ಸಾದ ಸಂಸದರು ಅಥವಾ ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದರೆ ಅಂತಹ ಸಹ ಸಂಸದರು ಕೂಡ ಧರಣಿ ನಡೆಸುತ್ತಾರೆ ಎಂದು ಅವರು ಹೇಳಿದರು.

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಉಭಯ ಸದನಗಳ ಬಾವಿಗಳಿದು ಜಿಎಸ್‌ಟಿ, ಬೆಲೆ ಏರಿಕೆ ಬಗ್ಗೆ ಚರ್ಚಿಸುವಂತೆ ಹಾಗೂ ಅದರ ವಿರುದ್ಧ ಪ್ರತಿಪಕ್ಷ ನಾಯಕರು ಪ್ರತಿಭಟನೆ ನಡೆಸಿದರು. ಅಧಿವೇಶನದಲ್ಲಿ ಗದ್ದಲ ಮತ್ತು ಅಸಂಸದೀಯ ವರ್ತನೆಗಾಗಿ ಸಂಸದರನ್ನು ಲೋಕಸಭೆ ಮತ್ತು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.

ಲೋಕಸಭೆಯಿಂದ ನಾಲ್ವರು, ರಾಜ್ಯಸಭೆಯಿಂದ 20 ಮಂದಿಯನ್ನು ಅಮಾನತುಗೊಳಿಸಲಾಗಿದೆ. ಅಮಾನತುಗೊಂಡ ಸಂಸದರು ತಮ್ಮ ವರ್ತನೆಗೆ ಕ್ಷಮೆಯಾಚಿಸಬೇಕು ಎಂದು ಸರ್ಕಾರ ಹೇಳಿದೆ. ಎಲ್ಲ ವಿಷಯಗಳ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದೂ ಹೇಳಿದೆ.

ಸಭಾಪತಿ ಎದುರು ಅಸಭ್ಯ ವರ್ತನೆ

ಸಭಾಪತಿ ಎದುರು ಅಸಭ್ಯ ವರ್ತನೆ

ಸಂಸತ್ತಿನ ಮುಂಗಾರು ಅಧಿವೇಶನದಿಂದ ಅಮಾನತುಗೊಂಡ ಸಂಸದರು ಸಂಸತ್ತಿನ ಆವರಣದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಎದುರು 50 ಗಂಟೆಗೂ ಹೆಚ್ಚು ಕಾಲ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಹಣದುಬ್ಬರ ಮತ್ತಿತರ ವಿಷಯಗಳ ಕುರಿತು ಚರ್ಚೆಗೆ ಆಗ್ರಹಿಸಿ ರಾಜ್ಯಸಭೆಯ ಬಾವಿಗಿಳಿದು ಗದ್ದಲ ಸೃಷ್ಟಿಸಿದ ಸಂಸದರು, ಸಭಾಧ್ಯಕ್ಷರ ವೇದಿಕೆಯ ಮುಂದೆ ಬಂದು ಅಸಭ್ಯ ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

ಶುಕ್ರವಾರ ಸಂಜೆ 5 ಗಂಟೆವರೆಗೆ ಧರಣಿ

ಶುಕ್ರವಾರ ಸಂಜೆ 5 ಗಂಟೆವರೆಗೆ ಧರಣಿ

ಅಮಾನತುಗೊಂಡ ಸಂಸದರಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಕೂಡ ಸೇರಿದ್ದಾರೆ. ಶುಕ್ರವಾರ ಸಂಜೆ 5 ಗಂಟೆವರೆಗೆ ಅಮಾನತುಗೊಂಡಿರುವ ಸಂಸದರು ಧರಣಿ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಕೆಲವು ಮಹಿಳಾ ಸಂಸದರು ಮತ್ತು ಹಿರಿಯ ಸಂಸದರು ಪಾಳಿ ಪ್ರಕಾರ ಕುಳಿತುಕೊಳ್ಳುತ್ತಾರೆ. ಎಎಪಿ ಸಂಸದ ಸಂಜಯ್ ಸಿಂಗ್ ಪಾಳಿಯಲ್ಲಿ ಕುಳಿತಿರುವ ಸಂಸದರ ವಯಸ್ಸು ಮತ್ತು ಆರೋಗ್ಯವನ್ನು ಉಲ್ಲೇಖಿಸಿದ್ದಾರೆ.

ಹಿರಿಯ ಸಂಸದರು ಧರಣಿಯಲ್ಲಿ ಭಾಗಿ

ಹಿರಿಯ ಸಂಸದರು ಧರಣಿಯಲ್ಲಿ ಭಾಗಿ

ಸಂಸದರ ಧರಣಿ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, "ನಡವಳಿಕೆ ಬಗ್ಗೆ ವಿಷಾದವಿದ್ದರೆ ಸಂಸತ್ತಿನ ಕಲಾಪಕ್ಕೆ ಹಾಜರಾಗಬೇಕು. ಜನರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳುತ್ತಾರೆ, ಆಗ ಅವರು ಶ್ರೇಷ್ಠರಾಗುತ್ತಾರೆ, ಆದರೆ ಅಮಾನತುಗೊಂಡ ಸಂಸದರು ಇಂತಹ ದುರಹಂಕಾರವನ್ನು ಪ್ರದರ್ಶಿಸಿದರೆ ನಾವು ಏನು ಹೇಳಬಹುದು? ಅವರು ಇಲ್ಲಿ ಕುಳಿತಿದ್ದರೆ, ನಿಮ್ಮ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ ಎಂದು ನಾವು ಅವರಿಗೆ ಹೇಳಲು ಬಯಸುತ್ತೇವೆ" ಎಂದು ಅವರು ಮನವಿ ಮಾಡಿದ್ದಾರೆ.

ಸರ್ಕಾರದ ಮನವಿ

ಸರ್ಕಾರದ ಮನವಿ

50 ಗಂಟೆಗೂ ಹೆಚ್ಚು ಕಾಲ ಅಮಾನತುಗೊಂಡ ಸಂಸದರ ಹಗಲು-ರಾತ್ರಿ ಧರಣಿ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಬೆಳಗ್ಗೆಯಿಂದ ಸಂಜೆಯವರೆಗೂ ಇಲ್ಲಿಯೇ ಕುಳಿತುಕೊಳ್ಳಿ ಎಂದು ಹೇಳಿದರು. ನಂತರ ಮನೆಗೆ ಹೋಗಿ ವಿಶ್ರಾಂತಿ ಪಡೆಯಿರಿ. ಮರುದಿನ ಹಿಂತಿರುಗಿ ಮತ್ತು ನಂತರ ನಿಮ್ಮ ಪ್ರತಿಭಟನೆಯನ್ನು ಮುಂದುವರಿಸಿ. ಚರ್ಚೆಗೆ ಸರಕಾರ ಸಿದ್ಧವಿದೆ ಎಂದರು. ಅಮಾನತುಗೊಂಡಿರುವ ಸಂಸದರ ಕಾರ್ಯವೈಖರಿಯನ್ನು ಸಾರ್ವಜನಿಕರು ಗಮನಿಸುತ್ತಿದ್ದಾರೆ. ಹೀಗೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಸರ್ಕಾರದ ಮನವಿಯ ವಿಡಿಯೋ ಇಲ್ಲಿದೆ ನೋಡಿ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಈ ವೇಳೆ ಸಂಸದರ ಕ್ಷಮೆಯಾಚಿಸುವಂತೆ ಮನವಿ ಮಾಡಿದ್ದು ಕಂಡುಬಂತು. ಸಂಸದರು ಸಂಸತ್ ಕಲಾಪದಲ್ಲಿ ಭಾಗವಹಿಸಬೇಕು ಎಂದು ಜೋಶಿ ಹೇಳಿದರು.

Recommended Video

      KL ರಾಹುಲ್ ಸ್ಥಾನ ತುಂಬಬಲ್ಲ ಆಟಗಾರರು ಇರುವಾಗ ಟೆನ್ಶನ್ ಯಾಕಲ್ವಾ? | OneIndia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+