ಕೊವಿಡ್-19: ಕೇಂದ್ರ ಸಚಿವ ಅಮಿತ್ ಶಾ ತುರ್ತುಸಭೆ ಪ್ರಮುಖ ಅಂಶಗಳು
ನವದೆಹಲಿ, ನವೆಂಬರ್.15: ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಣ ಮತ್ತು ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗುವಂತಾ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನವದೆಹಲಿಯಲ್ಲಿ ದೈನಂದಿನ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು ಬಹುತೇಕ ಇಮ್ಮಡಿಯಾಗಿದೆ. ಈ ಹಿನ್ನೆಲೆ ಸರಣಿ ಟ್ವೀಟ್ ಮೂಲಕ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಹೆಚ್ಚುವರಿ ಐಸಿಯು ಬೆಡ್ ಗಳು, ಆಮ್ಲಜನಕದ ಸಿಲಿಂಡರ್ ಹಾಗೂ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ನಿಯೋಜಿಸುವುದಕ್ಕೆ ತೀರ್ಮಾನಿಸಲಾಗಿದೆ.
ಈ
ವಿಶೇಷ
ಮಾಸ್ಕ್
ಧರಿಸಿದರೆ
ಕೊರೊನಾವೈರಸ್
ಅಂಟುವುದಿಲ್ಲ!
ರಾಷ್ಟ್ರ
ರಾಜಧಾನಿಯಲ್ಲಿ
ಕೊರೊನಾವೈರಸ್
ಸೋಂಕಿತ
ಪ್ರಕರಣಗಳ
ಸಂಖ್ಯೆ
ಹೆಚ್ಚಾದ
ಹಿನ್ನೆಲೆ
ಕೇಂದ್ರ
ಗೃಹ
ಸಚಿವ
ಅಮಿತ್
ಶಾ
ತುರ್ತುಸಭೆ
ನಡೆಸಿದರು.
ಈ
ಸಭೆಯಲ್ಲಿ
ಆರೋಗ್ಯ
ಸಚಿವ
ಹರ್ಷವರ್ಧನ್,
ದೆಹಲಿ
ಮುಖ್ಯಮಂತ್ರಿ
ಅರವಿಂದ್
ಕೇಜ್ರಿವಾಲ್,
ಲೆಫ್ಟಿನೆಂಟ್
ಗವರ್ನರ್
ಅನಿಲ್
ಬೈಜಲ್
ಸೇರಿದಂತೆ
ಹಿರಿಯ
ಅಧಿಕಾರಿಗಳು
ಹಾಜರಿದ್ದರು.
ಡಿಆರ್
ಡಿಓನಲ್ಲಿ
750
ಐಸಿಯು
ಹಾಸಿಗೆ:
ರಾಷ್ಟ್ರ
ರಾಜಧಾನಿಯಲ್ಲಿ
ಪ್ರತಿನಿತ್ಯ
ಕೊವಿಡ್-19
ಸೋಂಕು
ತಪಾಸಣೆ
ಸಂಖ್ಯೆಯನ್ನು
1
ಲಕ್ಷಕ್ಕೆ
ಹೆಚ್ಚಿಸಲಾಗುತ್ತದೆ.
ಡಿಆರ್
ಡಿಓನಲ್ಲಿ
750
ಐಸಿಯು
ಬೆಡ್
ಗಳ
ಲಭ್ಯತೆಯಿದೆ
ಎಂದು
ಮುಖ್ಯಮಂತ್ರಿ
ಅರವಿಂದ್
ಕೇಜ್ರಿವಾಲ್
ಮಾಹಿತಿ
ನೀಡಿದ್ದಾರೆ.
ಶೇ.80ರಷ್ಟು
ಖಾಸಗಿ
ಆಸ್ಪತ್ರೆ
ಬೆಡ್
ಮೀಸಲು:
ಕೊರೊನಾವೈರಸ್
ಸೋಂಕಿತ
ಪ್ರಕರಣಗಳ
ಸಂಖ್ಯೆಯು
ಹೆಚ್ಚಾಗಿರುವ
ಹಿನ್ನೆಲೆ
ಕಳೆದ
ವಾರ
ದೆಹಲಿ
ಹೈಕೋರ್ಟ್
ಮಹತ್ವದ
ಆದೇಶವನ್ನು
ಹೊರಡಿಸಿತ್ತು.
ನವದೆಹಲಿಯ
33
ಖಾಸಗಿ
ಆಸ್ಪತ್ರೆಗಳಲ್ಲಿನ
ಶೇ.80ರಷ್ಟು
ಬೆಡ್
ಗಳನ್ನು
ಕೊರೊನಾವೈರಸ್
ರೋಗಿಗಳಿಗೆ
ಮೀಸಲು
ಇರಿಸುವಂತೆ
ಆದೇಶಿಸಿತ್ತು.
Recommended Video
ನವದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲೇ 3235 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 4,85,405 ಏರಿಕೆಯಾಗಿದೆ. ಒಂದೇ ದಿನದಲ್ಲಿ 95 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 7614ಕ್ಕೆ ಏರಿಕೆಯಾಗಿದೆ. ಈವರೆಗೂ 4,37,801 ಸೋಂಕಿತರು ಗುಣಮುಖರಾಗಿದ್ದಾರೆ.