ದೆಹಲಿ ಡೆಪ್ಯುಟಿ ಸಿಎಂ ಸಿಸೋಡಿಯಾ ವಿರುದ್ಧ ಸಿಬಿಐ ವಿಚಾರಣೆ
ನವದೆಹಲಿ, ಜನವರಿ 18: ಟಾಕ್ ಟು ಎಕೆ ಅಭಿಯಾನದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ಪ್ರಾಥಮಿಕ ವಿಚಾರಣೆಯನ್ನು ನಡೆಸಿದೆ. ಅಭಿಯಾನದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಾರ್ವಜನಿಕರ ಜೊತೆಗೆ ಮಾತುಕತೆ ನಡೆಸುವುದಾಗಿತ್ತು.
ಆ ಕಾರ್ಯಕ್ರಮದ ಮೊದಲ ಅವತರಣಿಕೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಧ್ಯೆ ಹದಗೆಟ್ಟಿರುವ ಸಂಬಂಧದ ಬಗ್ಗೆ ಮಾತನಾಡಿದ್ದರು. ಆ ಕಾರ್ಯಕ್ರಮದಲ್ಲಿ ಕೆಲವು ಅಕ್ರಮಗಳನ್ನು ಸಿಬಿಐ ಗುರುತಿಸಿತ್ತು.[ಮೋದಿ ವಿರುದ್ಧ ಸಾಕ್ಷ್ಯವಿದ್ದರೆ ರಾಹುಲ್ ಬಯಲು ಮಾಡಿ: ಕೇಜ್ರಿವಾಲ್]
ಈ ಸಮಯದಲ್ಲಿ ಇನ್ನಷ್ಟು ವಿವರಗಳನ್ನು ನೀಡುವುದು ಅಂದರೆ ತುಂಬ ಆತುರ ಮಾಡಿದಂತಾಗುತ್ತದೆ. ನಮಗೆ ಆ ಕಾರ್ಯಕ್ರಮದಲ್ಲಿ ಕೆಲವು ಲೋಪ ದೋಷಗಳು ಕಂಡುಬಂದಿವೆ. ಅದ್ದರಿಂದ ನಾವು ವಿಚಾರಣೆ ನಡೆಸಿದ್ದೇವೆ. ಈ ಎಲ್ಲ ಲೋಪದೋಷಗಳು ಗಂಭೀರವಾಗಿದ್ದು, ಈ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸಲಿದ್ದೇವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.