ಬಚ್ಚನ್ ಫ್ಯಾಮಿಲಿಗೆ ಮತ್ತೆ ಕಾನೂನು ಕಂಟಕ
ನವದೆಹಲಿ, ಜೂ.18:ಬಚ್ಚನ್ ಕುಟಂಬಕ್ಕೆ ಯಾಕೋ ಟೈಂ ಚೆನ್ನಾಗಿಲ್ಲ. ಅಮಿತಾಬ್ ಬಚ್ಚನ್ ವಿರುದ್ಧ ಒಂದೆರಡು ನೋಟಿಸ್ ಜಾರಿಗೊಂಡ ಬೆನ್ನಲ್ಲೇ ಐಶ್ವರ್ಯಾ ರೈಗೆ ಕಾನೂನು ಕಂಟಕ ಶುರುವಾಗಿತ್ತು. ಈಗ ಅಮಿತಾಬ್ ಹಾಗೂ ಅಭಿಷೇಕ್ ವಿರುದ್ಧ ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಗಾಜಿಯಾಬಾದ್ ಕೋರ್ಟಿನಲ್ಲಿ ಅಮಿತಾಬ್ ಹಾಗೂ ಅಭಿಷೇಕ್ ವಿರುದ್ಧ ಚೇತನ್ ಧಿಮಾನ್ ಎಂಬುವರು ದೂರು ನೀಡಿದ್ದಾರೆ. ಕ್ರೀಡಾಕೂಟವೊಂದರಲ್ಲಿ ಪಾಲ್ಗೊಂಡಿದ್ದ ಅಪ್ಪ-ಮಗ ರಾಷ್ಟ್ರಧ್ವಜವನ್ನು ಬೆನ್ನಿಗೆ ಹಾಕಿಕೊಂಡು ಅಪಮಾನ ಮಾಡಿದ್ದಾರೆ ಎಂದು ಚೇತನ್ ದೂರಿನಲ್ಲಿ ಹೇಳಿದ್ದಾರೆ. [ರಾಷ್ಟ್ರಧ್ವಜಕ್ಕೆ ಅಪಮಾನ, ಮಲ್ಲಿಕಾಗೆ ನೋಟಿಸ್]

ಫೆ.15ರಂದು ಅಡಿಲೇಡ್ ನಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಸಮರದ ಸಂದರ್ಭದಲ್ಲಿ ಪ್ರೇಕ್ಷಕರಾಗಿ ತೆರಳಿದ್ದ ಅಮಿತಾಬ್-ಅಭಿಷೇಕ್ ಈ ಕೃತ್ಯ ಎಸಗಿದ್ದಾರೆ. ರಾಷ್ಟಧ್ವಜವನ್ನು ಹೆಮ್ಮೆಯಿಂದ ಹೊತ್ತು ಮೆರೆಸಬೇಕಾಗುತ್ತದೆ.
ಅದರೆ, ಈ ಇಬ್ಬರು ಅಂತಾರಾಷ್ಟ್ರೀಯ ಖ್ಯಾತಿ ಸೆಲೆಬ್ರಿಟಿಗಳು ಧ್ವಜವನ್ನು ಬಳಸಿದ ರೀತಿ ಸರಿ ಕಾಣಲಿಲ್ಲ. ಈ ದೃಶ್ಯವನ್ನು ಕಣ್ಣಾರೆ ಕಂಡ ಮೇಲೆ ಸುಮ್ಮನೆ ಇರಲು ಸಾಧ್ಯವಿರದೆ ನನ್ನ ಕಕ್ಷಿದಾರರು ದೂರು ನೀಡಿದ್ದಾರೆ ಎಂದು ಚೇತನ್ ಪರ ವಕೀಲ ಸಂಜೀವ್ ಶರ್ಮ ಹೇಳಿದ್ದಾರೆ.
1971ರ ರಾಷ್ಟ್ರೀಯ ಗೌರವ ಕಾಯ್ದೆ, ರಾಷ್ಟ್ರಧ್ವಜ ಸಂರಕ್ಷಣಾ ಕಾಯ್ದೆ 2002 ಅನ್ವಯ ಪ್ರಕರಣ ದಾಖಲಿಸಿಕೊಂಡು ಇಬ್ಬರಿಗೂ ಸಮನ್ಸ್ ಜಾರಿಗೊಳಿಸಲಾಗಿದೆ.
ಇದಕ್ಕೂ ಮುನ್ನ ಸರಬ್ಜಿತ್ ಸಿಂಗ್ ಜೀವನ ಆಧಾರಿಸಿದ ಚಿತ್ರದಲ್ಲಿ ಸರಬ್ಜಿತ್ ತಂಗಿ ಪಾತ್ರದಲ್ಲಿ ಐಶ್ವರ್ಯಾ ರೈ ನಟಿಸುತ್ತಾರೆ ಎಂಬ ಕಾರಣಕ್ಕೆ ರೈಗೆ ಸರಬ್ಜಿತ್ ಸಿಂಗ್ ಸೋದರಿಯೊಬ್ಬರು ನೋಟಿಸ್ ಜಾರಿಗೊಳಿಸಿದ್ದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications