EPFOದಿಂದ ನೌಕರರಿಗೆ ವಸತಿಭಾಗ್ಯ ಕೈಗೂಡುವುದೇ?

ಏನಪ್ಪಾ ಅಂದರೆ 14 ವರ್ಷಗಳ ಹಿಂದೆ ಶೇ. 12ರಷ್ಟು ಬಡ್ಡಿ ದರ ನೀಡಿ, ತದನಂತರವೂ ನಾಲ್ಕು ವರ್ಷ ಕಾಲ ಶೇ. 9.5ರಷ್ಟು ಬಡ್ಡಿ ನೀಡಿ ಸೈ ಎನಿಸಿಕೊಂಡಿದ್ದ Employees' Provident Fund Organisation, ಇತ್ತೀಚೆಗೆ ತನ್ನ 5 ಕೋಟಿ ಸದಸ್ಯರಿಗೆ ಅಲ್ಪ ಪ್ರಮಾಣದ ಬಡ್ಡಿಯನ್ನಷ್ಟೇ ಕೊಡಲು ಶಕ್ಯವಾಗಿದೆ. ಚುನಾವಣೆ ವರ್ಷದಲ್ಲಾದರೂ ತುಸು ಹೆಚ್ಚು ನೀಡುತ್ತಾರೆ ಎಂಬ ಆಸೆಯೂ ಕಮರಿದೆ.
ಆದರೆ ಇದೀಗ ತನ್ನ ಸದಸ್ಯರ ಕ್ಷೇಮಾಭ್ಯದಯ ಬಯಸಿ EPFO ಸದ್ಯರಿಗಾಗಿ ವಸತಿ ಯೋಜನೆಯನ್ನೂ ಕೈಗೆತ್ತಿಕೊಳ್ಳಲು ಆಲೋಚಿಸುತ್ತಿದೆ. ಈ ಬಗ್ಗೆ ರಾಜ್ಯದವರೇ ಆದ ಕೇಂಧ್ರ ಕಾರ್ಮಿಕ ಸಚಿವ ಅಸ್ಕರ್ ಫರ್ನಾಂಡಿಸ್ ಅವರು EPFO ಸದ್ಯರಿಗೆ ವಸತಿ ಭಾಗ್ಯವನ್ನು ಕಲ್ಪಿಸುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ.
ಪ್ರಸ್ತಾವನೆಯ ಪ್ರಕಾರ, EPFO ಸದಸ್ಯತ್ವ ಪಡೆದ ಉದ್ಯೋಗಿಗಳು ತಮ್ಮ ಮಾಸಿಕ ವೇತನದಲ್ಲಿ ಮೂಲ ವೇತನದ (basic wage = basic pay + dearness allowance) ಶೇ. 10ರಷ್ಟನ್ನು ಹೆಚ್ಚುವರಿಯಾಗಿ ಸಂಸ್ಥೆಗೆ ತಿಂಗಳಾ ತಿಂಗಳಾ ಕಟ್ಟುತ್ತಾ ಬಂದರೆ ಮುಂದೊಂದು ದಿನ ಅಂತಹ ಸದಸ್ಯರಿಗೆ ವಸತಿ ಭಾಗ್ಯ ಕಲ್ಪಿಸುವ ಇರಾದೆಯಿದೆ.
ಇದು ಈಗಾಗಲೇ ಜಾರಿಯಲ್ಲಿರುವ ಶೇ. 12ರಷ್ಟು ಕಡ್ಡಾಯ ಕಡಿತದ (PF contribution) ಜತೆಗೆ ಹೆಚ್ಚುವರಿಯಾಗಿ ಶೇ. 10ರಷ್ಟು ಮೊತ್ತವಾಗಿದೆ. ಅಂದರೆ ಈ ಶೇ. 10ರಷ್ಟು ಮೊತ್ತವನ್ನು ಬಳಸಿಕೊಂಡು ಮುಂದೆ ಫಲಾನುಭವಿಗೆ ಒಂದು ಸೂರು ಕಲ್ಪಿಸುವುದು (housing facility) ಯೋಜನೆಯ ಗುರಿಯಾಗಿದೆ. ಈ ಹಿಂದೆ ಒಮ್ಮೆ ಇಂತಹ ಪ್ರಯತ್ನ ಕೈಗೆತ್ತಿಕೊಳ್ಳಲಾಗಿತ್ತಾದರೂ ಅದು ಮುಂದವರಿಯಲಿಲ್ಲ.
EPFO ಸಂಸ್ಥೆಯಲ್ಲಿ ನೌಕರರು ತುಂಬುತ್ತಾ ಬಂದಿರುವ 5 ಲಕ್ಷ ಕೋಟಿ ರೂಪಾಯಿ ಠೇವಣಿಯಿದೆ. ಇದಕ್ಕೆ ಪ್ರತಿ ವರ್ಷ 60,000 ಕೋಟಿ ರೂ. ಜಮೆಯಾಗುತ್ತಾ ಇದೆ. ಈ ಪಾಟಿ ಹಣ ಕೊಳೆಯುತ್ತಾ ಇರುವಾಗ ಸಂಸ್ಥೆಯು ತನ್ನ ಸದಸ್ಯರಿಗಾಗಿ ಖಂಡಿತಾ ವಸತಿ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದು. ಆದರೆ ಸಚಿವ ಅಸ್ಕರ್ ಫರ್ನಾಂಡಿಸ್ ಅವರದ್ದು ಇದು ಚುನಾವಣಾ ಪ್ರಸ್ತಾವನೆಯಾಗದೆ ವಾಸ್ತವವಾಗಿ ಕೈಗೂಡುವುದೇ? ಎಂಬುದು ಅದೇ ಕೋಟಿ ಪ್ರಶ್ನೆಯಾಗಿದೆ!
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications