ಜಗತ್ತಿನಲ್ಲೇ ಅತ್ಯಂತ ಕಡಿಮೆ ತೆರಿಗೆ ವಿಧಿಸುವ ಹಾದಿಯಲ್ಲಿ ಭಾರತ: ರಾಜೀವ್
ನವದೆಹಲಿ, ಫೆಬ್ರವರಿ 1: ಕಳೆದ ಲೋಕಸಭಾ ಚುನಾವಣೆ ವೇಳೆ ದೇಶದ ಜನರು ಭಾರತದ ಬದಲಾವಣೆಗಾಗಿ ಮತ ಹಾಕಿದ್ದರು. ದಶಕಗಳ ಭ್ರಷ್ಟಾಚಾರ, ಆಡಳಿತ ವೈಫಲ್ಯ ಹಾಗೂ ನೀತಿ ನಿರೂಪಣೆಯಲ್ಲಿನ ದೋಷಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಮತ ಚಲಾಯಿಸಿದ್ದರು ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಮಧ್ಯಂತರ ಬಜೆಟ್ ಅನ್ನು ಕೇಂದ್ರ ಸರಕಾರ ಶುಕ್ರವಾರದಂದು ಮಂಡಿಸಿದ್ದು, ಆ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಶ್ರೀಮಂತ ನವ ಭಾರತದ ಕನಸನ್ನು ಗುರಿಯಲ್ಲಿಟ್ಟುಕೊಂಡು ಈ ಸಲವೂ ಬಿಜೆಪಿಗೆ ಮತ ಚಲಾಯಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಯುಪಿಎ ಸರಕಾರವು ಐದು ವರ್ಷದ ಹಿಂದೆ ಅಧಿಕಾರದಿಂದ ಕೆಳಗಿಳಿದ ಕತ್ತಲ ದಿನಗಳಿಂದ ದೇಶದ ಆರ್ಥಿಕತೆಯು ಬಹಳ ಮುಂದೆ ಬಂದಿದೆ. ಜಿಡಿಪಿ ಸಮಸ್ಯೆ, ಚಾಲ್ತಿ ಖಾತೆ ಕೊರತೆ, ಬಂಡವಾಳ ಕೊರತೆ, ವಿದೇಶಿ ಹೂಡಿಕೆದಾರರಲ್ಲಿ ಅನುಮಾನ, ಹಗರಣಗಳ ಕಾರಣಕ್ಕೆ ಹೂಡಿಕೆದಾರರ ಅನುಮಾನಕ್ಕೆ ಕಾರಣವಾಗಿತ್ತು ಎಂದಿದ್ದಾರೆ.

ಭಾರತದ ಆರ್ಥಿಕತೆ ಈಗ ಸುಧಾರಿಸಿದೆ. ಯುಪಿಎ ಸರಕಾರ ಕಾರಣವಾಗಿರುವ ಹಲವಾರು ಅನಾಹುತಗಳನ್ನು ಸಾರ್ವಜನಿಕ ನೆನಪಿನಿಂದ ತೆಗೆಯಲು ಸಾಧ್ಯವಿಲ್ಲ. ಆದರೆ ನರೇಂದ್ರ ಮೋದಿ ಅವರ ಸರಕಾರ ಸ್ಥಿರವಾದ ಆರ್ಥಿಕತೆ ನೀಡಿದೆ. 7 ಪರ್ಸೆಂಟ್ ಗೂ ಹೆಚ್ಚು ದರದಲ್ಲಿ ಪ್ರಗತಿ ಸಾಧಿಸಿದೆ. ಹಣದುಬ್ಬರ- ವಿತ್ತೀಯ ಕೊರತೆ ಹತೋಟಿಯಲ್ಲಿದೆ. ಕಳೆದ ನಾಲ್ಕು ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಬಂದಿದೆ ಎಂದು ಹೇಳಿದ್ದಾರೆ.
ತುಂಬ ಮುಖ್ಯವಾಗಿ ಸರಕಾರ ಅಂದರೆ ಭ್ರಷ್ಟಾಚಾರ ಎಂಬ ಭಾವನೆ ಇತ್ತಲ್ಲಾ, ಅದು ಬದಲಾಗಿ ಭ್ರಷ್ಟಾಚಾರಮುಕ್ತ, ನಿಗದಿತ ಗುರಿ ಇರುವ ಮತ್ತು ಶ್ರಮ ಪಡುವ ಸರಕಾರ ಅಧಿಕಾರದಲ್ಲಿದೆ ಎಂಬುದು ಅರಿವಿಗೆ ಬಂದಿದೆ ಎಂದಿದ್ದಾರೆ.
ಈಗಿನ ಮಧ್ಯಂತರ ಬಜೆಟ್ ರೈತರಿಗೆ, ಮಧ್ಯಮ ವರ್ಗದವರಿಗೆ, ಅಸಂಘಟಿತ ವಲಯದವರಿಗೆ ಸಹಾಯ ಮಾಡಿದೆ. ಮಧ್ಯಮ ವರ್ಗದವರ ಪಾಲಿನ ಹೊರೆ ಇಳಿಸಿದೆ. ತಳ ವರ್ಗದವರಿಗೆ ನೆರವಿನ ಹಸ್ತ ಚಾಚಿದೆ. ಅತ್ಯಂತ ಕಡಿಮೆ ತೆರಿಗೆ ವಿಧಿಸುವ ದೇಶ ಎಂಬ ಪಟ್ಟಿಯಲ್ಲಿ ಭಾರತ ಕೂಡ ಸೇರುವ ಹಾದಿಯಲ್ಲಿದೆ. ಈಗಿನ ಬಜೆಟ್ ಹೆಚ್ಚು ಸ್ಪರ್ಧಾತ್ಮಕ, ಸಮರ್ಥ ಹಾಗೂ ಸ್ವಚ್ಛ ಆರ್ಥಿಕತೆಗೆ ಪೂರಕವಾಗಿದೆ. ಹೆಚ್ಚಿನ ದರದಲ್ಲಿ ಪ್ರಗತಿಯೆಡೆಗೆ ಸಾಗಲು ನೆರವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಮ್ಮ ನವ ಭಾರತ- ಸಮಾನ ಭಾರತ, ಸಮೃದ್ಧ ಭಾರತವನ್ನು ವಂಚಕ ಕುಟುಂಬ ರಾಜಕಾರಣದಿಂದ ನಿರ್ಮಿಸಲು ಸಾಧ್ಯವಿಲ್ಲ. ತೆರಿಗೆದಾರರ ಹಣ ಖರ್ಚು ಮಾಡುತ್ತಾ ಒಂದು ದಿನಕ್ಕೂ ಕೆಲಸ ಮಾಡದೆ, ಯಾರಿಂದ ಬಡತನ ಹಾಗೂ ಸಮಸ್ಯೆಗಳನ್ನು ಎದುರಿಸಬೇಕಾಯಿತೋ ನೆನಪಿಸಿಕೊಳ್ಳಿ. ಎಂಥವರ ಕೈಗೆ ಎಲ್ಲ ಭಾರತೀಯರ ಭವ್ಯ ಭವಿಷ್ಯ ನೀಡಬೇಕು ಎಂಬುದನ್ನು ತೀರ್ಮಾನಿಸಬೇಕಿದೆ ಎಂದು ಹೇಳಿದ್ದಾರೆ.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications