ಭದ್ರತಾ ಸೆಸ್ ನಿಂದಾಗಿ ಸದ್ಯದಲ್ಲೇ ಏರಲಿದೆ ರೈಲ್ವೆ ಟಿಕೇಟ್ ದರ
ಇನ್ನು ಮೇಲೆ ಪ್ರತಿ ರೈಲು ಟಿಕೇಟ್ ಮೇಲೆ ಭದ್ರತಾ ಸೆಸ್ ಅನ್ನು ವಿಧಿಸಲಿರುವ ಕೇಂದ್ರ ರೈಲ್ವೆ ಇಲಾಖೆ ಇದರಿಂದ ಸಂಗ್ರಹವಾಗುವ ಹಣವನ್ನು ರೈಲ್ವೆ ಭದ್ರತಾ ವೆಚ್ಚಕ್ಕಾಗಿ ಉಪಯೋಗಿಸಲಿದೆ.
ನವದೆಹಲಿ, ಮೇ 19: ಇನ್ನು ಕೆಲವೇ ದಿನಗಳಲ್ಲಿ ರೈಲ್ವೆ ಟಿಕೇಟ್ ದರ ಹೆಚ್ಚಾಗಲಿದೆ. ಪ್ರತಿ ಟಿಕೇಟ್ ಮೇಲೆ ಭದ್ರತಾ ಸೆಸ್ ಅನ್ನು ವಿಧಿಸಲಿರುವ ಕೇಂದ್ರ ರೈಲ್ವೆ ಇಲಾಖೆ ಇದರಿಂದ ಸಂಗ್ರಹವಾಗುವ ಹಣವನ್ನು ರೈಲ್ವೆ ಭದ್ರತಾ ವೆಚ್ಚಕ್ಕಾಗಿ ಉಪಯೋಗಿಸಲಿದೆ.
ಈಗಾಗಲೇ ರೈಲು ಅಪಘಾತಗಳು ಹೆಚ್ಚುತ್ತಿರುವ ನಿಟ್ಟಿನಲ್ಲಿ, ರೈಲ್ವೆ ಭದ್ರತೆಯ ಕುರಿತು ಕೇಂದ್ರ ರೈಲ್ವೆ ಸಚಿವಾಲಯ ಗಂಭೀರವಾಗಿ ಯೋಚಿಸುತ್ತಿದೆ. ರೈಲ್ವೆ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದಕ್ಕಾಗಿ ಇಲಾಖೆಗೆ ಪ್ರತಿ ವರ್ಷ ಸುಮಾರು 20,000 ಸಾವಿರ ಕೋಟಿ ರೂ.ಗಳ ಅಗತ್ಯವಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.[ಸ್ವಚ್ಛತೆಯಲ್ಲಿ ಬೆಂಗ್ಳೂರು ನಗರ ರೈಲ್ವೆ ನಿಲ್ದಾಣಕ್ಕೆ 10ನೇ ಸ್ಥಾನ]

ಅದಕ್ಕಾಗಿ ರೈಲ್ವೆ ಇಲಾಖೆ ಸಾರ್ವಜನಿಕರ ಸಹಕಾರವನ್ನು ಬಯಸಿದ್ದು, ಭದ್ರತಾ ಸೆಸ್ ಮೂಲಕ ಇಲಾಖೆಗೆ ಹಣ ಸಂಗ್ರಹವಾಗುವಂತೆ ಮಾಡಲಾಗುತ್ತದೆ. ಆದ್ದರಿಂದ ಪ್ರತಿ ಟಿಕೇಟ್ ದರ ಹೆಚ್ಚಾಗಲಿದ್ದು, ಪ್ರಯಾಣಿಕರ ಮೇಲೆ ಈ ಹೊರೆ ಬೀಳಲಿದೆ.[ನಿಮ್ಮ ಮನೆಗೆ ಟ್ರೈನ್ ಟಿಕೆಟ್ ತಲುಪಿಸುತ್ತೇವೆ : ಐಆರ್ ಸಿಟಿಸಿ]
ರೈಲ್ವೆ ಟ್ರ್ಯಾಕ್ ಗಳ ಉನ್ನತೀಕರಣ, ಸಿಗ್ನಲ್ ಮತ್ತು ಕ್ರಾಸಿಂಗ್ ಗಳನ್ನು ಗೊಂದಲಮುಕ್ತವಾಗಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಇಲಾಖೆ ತೆಗೆದುಕೊಳ್ಳಲಿದೆ. ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ರೈಲ್ವೆ ಇಲಾಖೆ, ಡಿಜಿಟಲ್ ಪೇಮೆಂಟ್ ಮೂಲಕ ಟಿಕೇಟ್ ಬುಕಿಂಗ್ ಮಾಡುವವರಿಗೆ ಸೇವಾ ತೆರಿಗೆ ವಿನಾಯಿತಿ ನೀಡಿತ್ತು.
ಕ್ಯಾಶ್ ಲೆಸ್ ಪದ್ಧತಿಗೆ ಉತ್ತೇಜನ ನೀಡುವ ಸಲುವಾಗಿ ತೆಗೆದುಕೊಂಡಿದ್ದ ಈ ಕ್ರಮದಿಂದ ರೈಲ್ವೆ ಇಲಾಖೆಗೆ ತೀವ್ರ ನಷ್ಟ ಉಂಟಾಗಿದ್ದ ಹಿನ್ನೆಲೆಯಲ್ಲಿ ಇದೀಗ ಸೇವಾ ತೆರಿಗೆಯನ್ನೂ ಮತ್ತೆ ಹೇರುವ ಬಗ್ಗೆ ಚಿಂತನೆ ನಡೆಯುತ್ತಿದ್ದು, ಇದರೊಂದಿಗೆ ಭದ್ರತಾ ಸೆಸ್ ಸಹ ಸೇರಿ, ಟಿಕೇಟ್ ಬೆಲೆ ಏರಿಕೆಯ ಹೊರೆಯನ್ನು ಜನಸಾಮಾನ್ಯ ಎದುರಿಸಬೇಕಿದೆ.
{promotion-urls}
-
ಹಿರಿಯ ನಾಗರಿಕರಿಗೆ ರೈಲ್ವೇ ನಿಯಮಗಳು 2026: ರಿಯಾಯಿತಿ ಇಲ್ಲದಿದ್ದರೂ ಸೌಲಭ್ಯಗಳು ಮುಂದುವರಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು












Click it and Unblock the Notifications