ಮ್ಯಾಗಿ ನ್ಯೂಡಲ್ಸ್ ತಿನ್ನದಂತೆ ಸೈನಿಕರಿಗೆ ಎಚ್ಚರಿಕೆ!
ನವದೆಹಲಿ, ಜೂ.3: ದೇಶದೆಲ್ಲೆಡೆ ಮ್ಯಾಗಿ ಬಗ್ಗೆ ಉಂಟಾಗಿರುವ ಸಮೂಹ ಸನ್ನಿ ಈಗ ಭಾರತೀಯ ಸೇನೆಯ ಕ್ಯಾಂಪಿಗೂ ಹರಡಿದೆ. ಮ್ಯಾಗಿಯಲ್ಲಿರುವ ಸೀಸದ ಅಂಶದ ಬಗ್ಗೆ ಪರೀಕ್ಷೆ ವರದಿ ಬರುವ ಮೊದಲೇ ನಿಷೇಧಕ್ಕೆ ಒಳಗಾಗುತ್ತಿದೆ. ಮುಂದಿನ ಆದೇಶದ ತನಕ ಮಿಲಿಟರಿ ಕ್ಯಾಂಟೀನ್ ಗಳಲ್ಲಿ ಮ್ಯಾಗಿ ನ್ಯೂಡಲ್ಸ್ ತಯಾರಿ ಬಂದ್ ಆಗಿದೆ.
ಮೋನೊಸೋಡಿಯಂ ಗ್ಲುಟಮೇಟ್(ಎಂಎಸ್ ಜಿ) ಅಧಿಕವಾಗಿರುವ ಮ್ಯಾಗಿ ನ್ಯೂಡಲ್ಸ್ ತಿಂದು ಆರೋಗ್ಯ ಕೆಡಿಸಿಕೊಳ್ಳಬೇಡಿ. ಸೀಸದ ಪ್ರಮಾಣದ ಬಗ್ಗೆ ಪರೀಕ್ಷಾ ವರದಿ ಬಂದ ಮೇಲೆ ನೋಡೋಣ.. ಅಲ್ಲಿ ತನಕ ನ್ಯೂಡಲ್ಸ್ ತಿನ್ನಬೇಡಿ ಎಂದು ಸೈನಿಕರಿಗೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಸುಮಾರು 1000 ಕ್ಕೂ ಅಧಿಕ ಆರ್ಮಿ ಕ್ಯಾಂಟೀನ್ ಗಳಲ್ಲಿ 13 ಲಕ್ಷಕ್ಕೂ ಅಧಿಕ ಸೈನಿಕರಿಗೆ ಮ್ಯಾಗಿ ನ್ಯೂಡಲ್ಸ್ ನೆಚ್ಚಿನ ತ್ವರಿತ ಆಹಾರವಾಗಿತ್ತು.
ಕೆಲವೆಡೆ ನಿಷೇಧ: ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ ರಾಜ್ಯದಲ್ಲಿ ಮುಂದಿನ ಆದೇಶದ ತನಕ ಮ್ಯಾಗಿ ಮಾರಾಟ ಸೇವನೆಗೆ ನಿರ್ಬಂಧ ಹೇರಲಾಗಿದೆ. ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಪರೀಕ್ಷೆ ಜಾರಿಯಲ್ಲಿದೆ. ದೆಹಲಿಯಲ್ಲಿ 15 ದಿನಗಳ ನಿಷೇಧ ಹೇರಲಾಗಿದೆ.
ಈ ನಡುವೆ ಅಮಿತಾಬ್ ಬಚ್ಚನ್ ಜಾಣತನ ಮೆರೆದು ನನಗೂ ನೆಸ್ಲಿ ಕಂಪನಿ ಮ್ಯಾಗಿಗೂ ಸಂಬಂಧವಿಲ್ಲ ಎಂದಿದ್ದಾರೆ. ಈ ನಡುವೆ ಅಮಿತಾಬ್, ಮಾಧುರಿ ದೀಕ್ಷಿತ್ ಹಾಗೂ ಪ್ರೀತಿ ಜಿಂಟಾ ಪರ ಶಿವಸೇನೆ ಬ್ಯಾಟಿಂಗ್ ಆರಂಭಿಸಿದೆ.
ಬಿಗ್ ಬಜಾರ್, ಫ್ಯೂಚರ್ ಬಜಾರ್, ರೀಟೈಲ್ ಮಳಿಗೆಗಳಲ್ಲಿ ಮ್ಯಾಗಿ ಪ್ಯಾಕೆಟ್ ಮಾಯವಾಗಿದೆ. ಅದರೆ, ನೆಸ್ಲೆ ಇಂಡಿಯಾ ಮಾತ್ರ ಮೂರು ದಶಕಗಳಲ್ಲಿ ಕಾಣದ ಸೀಸದ ಅಂಶ ಈಗ ಏಕೆ, ಹೇಗೆ ಕಾಣಿಸಿಕೊಳ್ಳಲು ಸಾಧ್ಯ? ವಿಶ್ವ ಶ್ರೇಷ್ಠ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿದ ಮೇಲೆ ನ್ಯೂಡಲ್ಸ್ ಮಾರುಕಟ್ಟೆಗೆ ಬರುತ್ತದೆ. ಇಲ್ಲದಿದ್ದರೆ ಆಹಾರ ನಿಯಂತ್ರಣ ಪ್ರಾಧಿಕಾರ ಲೈಸನ್ಸ್ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ. (ಪಿಟಿಐ)
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications