ಮಾಲಿನ್ಯವೇ ಮಾರಕವಾಗಿದೆಯೇ ದೆಹಲಿಗರ ಲೈಂಗಿಕ ಜೀವನಕ್ಕೆ?
ಕಲುಷಿತ ಗಾಳಿ ದೇಹದ ಹಾರ್ಮೋನ್ ಗಳ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಶೇ 15ರಷ್ಟು ಪುರುಷರಲ್ಲಿ ಫಲವಂತಿಕೆ ಸಮಸ್ಯೆಯಿದೆ. ಮಹಿಳೆಯರಿಗಿಂತ ಪುರುಷರಲ್ಲೇ ಈ ಸಮಸ್ಯೆಯ ಪ್ರಮಾಣ ಹೆಚ್ಚು.
ದೆಹಲಿ, ನವೆಂಬರ್ 8: ದೆಹಲಿಯ ವಾಯು ಮಾಲಿನ್ಯದ ಪ್ರಮಾಣ ಗಾಬರಿಪಡುವಂಥ ಹಂತ ತಲುಪಿಯಾಗಿದೆ. ಇಲ್ಲಿನ ಜನರ ಲೈಂಗಿಕ ಜೀವನ, ಫಲವಂತಿಕೆ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಮಾಲಿನ್ಯದ ಪರಿಣಾಮವಾಗಿ ದೆಹಲಿಗರ ಲೈಂಗಿಕ ಚಟುವಟಿಕೆಯಲ್ಲಿ ಶೇ 30ರಷ್ಟು ಕಡಿಮೆಯಾಗಿದೆಯಂತೆ.
ಕಳೆದ ಹದಿನೇಳು ವರ್ಷದಲ್ಲೇ ದೆಹಲಿ ವಾಯುಮಾಲಿನ್ಯ ಈ ಪ್ರಮಾಣ ತಲುಪಿರಲಿಲ್ಲ. 'ಕಲುಷಿತ ಗಾಳಿ ದೇಹದ ಹಾರ್ಮೋನ್ ಗಳ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಶೇ 15ರಷ್ಟು ಪುರುಷರಲ್ಲಿ ಫಲವಂತಿಕೆ ಸಮಸ್ಯೆಯಿದೆ. ಮಹಿಳೆಯರಿಗಿಂತ ಪುರುಷರಲ್ಲೇ ಈ ಸಮಸ್ಯೆಯ ಪ್ರಮಾಣ ಹೆಚ್ಚು' ಎಂದು ನಗರದ ಇಂದಿರಾ ಐವಿಎಫ್ ಅಸ್ಪತ್ರೆ ವೈದ್ಯೆ ಸಾಗರಿಕಾ ಅಗರವಾಲ್ ಹೇಳಿದ್ದಾರೆ.[ದೆಹಲಿ ವಾಯು ಮಾಲಿನ್ಯ: ಮೂರು ದಿನ ಶಾಲೆ ಕಾಲೇಜು ಬಂದ್]

ಗಾಳಿಯಲ್ಲಿರುವ ರಾಸಾಯನಿಕಗಳು ಹಾರ್ಮೋನ್ ಸಮತೋಲನದ ಪರಿಣಾಮ ಬೀರಲಿದ್ದು, ವೀರ್ಯಕ್ಕೆ ವಿಷಕಾರಿಯಾಗಿ ಪರಿಣಮಿಸುತ್ತದೆ. ಜತೆಗೆ ಮಹಿಳೆಯರಲ್ಲಿ ಈಸ್ಟ್ರೋಜನ್ ಪ್ರಮಾಣದಲ್ಲೂ ಕಡಿಮೆಯಾಗುತ್ತದೆ. ಆದ್ದರಿಂದ ಲೈಂಗಿಕ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಸಮಸ್ಯೆ ತಡೆಯಬೇಕು ಅಂದರೆ, ಹೊರಗೆ ಸುತ್ತಾಡುವಾಗ ಮಲ್ಟಿ ಲೇಯರ್ ಫಿಲ್ಟರ್ ಮಾಸ್ಕ್ ಹಾಕಬೇಕು ಅಂತಾರೆ.[ಮಲಿನ ನಗರಿ ದೆಹಲಿ ಜನರ ಬದುಕು, ಬವಣೆ ಕೇಳಿಸಿಕೊಳ್ಳಿ..]

ಮತ್ತೊಬ್ಬ ಐವಿಎಫ್ ತಜ್ಞರು ಹೇಳುವ ಹಾಗೆ, ಇಂಥ ಮಲಿನ ಗಾಳಿ ಸೇವಿಸಿದರೆ ಫಲವಂತಿಕೆ ಸಮಸ್ಯೆ ಇಲ್ಲದ ಪುರುಷರಲ್ಲೂ ವೀರ್ಯಾಣುಗಳ ಸಂಖ್ಯೆ ಕಡಿಮೆ ಆಗುತ್ತದೆ. ಪುರುಷರಲ್ಲಿ ಫಲವಂತಿಕೆ ಕಡಿಮೆ ಮಾಡಲು, ಮಹಿಳೆಯರಲ್ಲಿ ಗರ್ಭಪಾತ ಪ್ರಮಾಣ ಹೆಚ್ಚಲು ಸದ್ಯಕ್ಕಿರುವ ಮಾಲಿನ್ಯದ ಪ್ರಮಾಣವೇ ಸಾಕು ಎಂದು ಅವರು ಹೇಳಿದ್ದಾರೆ. ಗರ್ಭಿಣಿಯರ ಮೇಲೆ ವಾಯು ಮಾಲಿನ್ಯ ಅತಿ ಹೆಚ್ಚು ಪರಿಣಾಮ ಬೀರುತ್ತದೆ ಎಂದು ರಾಮ್ ಮನೋಹರ್ ಲೋಹಿಯಾದ ವೈದ್ಯೆಯೊಬ್ಬರು ಹೇಳಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications