ಮೋದಿ ಎಚ್ಚರಿಕೆ ನಂತರ ಸಾಧ್ವಿ ಕ್ಷಮೆಯಾಚನೆ
ನವದೆಹಲಿ, ಡಿ.2: ನಿಮಗೆ ಶ್ರೀರಾಮಭಕ್ತರ (ಬಿಜೆಪಿ) ಸರ್ಕಾರ ಬೇಕೋ ಅಥವಾ ಅಕ್ರಮ ಸಂತಾನದವರ (ಸೋನಿಯಾ-ಕಾಂಗ್ರೆಸ್) ಸರ್ಕಾರ ಬೇಕೋ ಎಂಬುದನ್ನು ನೀವೇ ನಿರ್ಧರಿಸಿ ಎಂದು ವಿವಾದಿತ ಹೇಳಿಕೆ ನೀಡಿದ್ದ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಮಂಗಳವಾರ ಕ್ಷಮೆಯಾಚಿಸಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರು ಸಾಧ್ವಿಗೆ ಎಚ್ಚರಿಕೆ ನೀಡಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಸಂಪುಟದ ರಾಜ್ಯ ಸಚಿವೆ ಸಾಧ್ವಿನಿರಂಜನ್ ಜ್ಯೋತಿ ಅವರು ಪಾತ್ರೆ ಮಾರಾಟ ಮಾಡುತ್ತಿದ್ದ ಸೋನಿಯಾ ಅಳಿಯ ವಾದ್ರ ಅದು ಹೇಗೆ ಕೋಟ್ಯಾಧೀಶನಾದ ಎಂದು ಪ್ರಶ್ನಿಸಿದ್ದರು.
ನಾವೆಲ್ಲ ಶ್ರೀರಾಮಚಂದ್ರನ ಸಂತಾನ(ಮಕ್ಕಳು). ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಅವನ ಮಕ್ಕಳೇ. ಈ ತತ್ವದಲ್ಲಿ ನಂಬಿಕೆ ಇಲ್ಲದವರೆಲ್ಲರೂಭಾರತ ಬಿಟ್ಟು ತೊಲಗಬಹುದು ಎಂದು ತಮ್ಮ ಚುನಾವಣಾ ಭಾಷಣದಲ್ಲಿ ಹೇಳುವ ಮೂಲಕ ಮೋದಿಗೆ ಇರುಸು ಮುರುಸು ಉಂಟು ಮಾಡಿದ್ದರು.
ನರೇಂದ್ರ
ಮೋದಿಯವರು
ಭ್ರಷ್ಟಾಚಾರದ
ವಿರುದ್ಧ
ಸಮರ
ಸಾರಿದ್ದಾರೆ.
ಅವರನ್ನು
ಬೆಂಬಲಿಸಿ.
ಅದರ
ಬದಲು
ಭ್ರಷ್ಟಾಚಾರದಲ್ಲಿ
ಮುಳುಗಿರುವವರಿಗೆ
ಮತ
ಹಾಕಬೇಡಿ.
ರಾಮನಲ್ಲಿ
ನಂಬಿಕೆ
ಇಟ್ಟಿರುವವರಿಗೆ
ಮತ
ನೀಡಬೇಕೋ
ಅಥವಾ
ರಾಮನಲ್ಲಿ
ನಂಬಿಕೆಯಿಲ್ಲದ
ಪಾಮರರಿಗೆ
ಮತ
ನೀಡಬೇಕೋ
ಎಂಬುದು
ನಿಮ್ಮ
ನಿರ್ಧಾರಕ್ಕೆ
ಬಿಟ್ಟಿದ್ದು
ಎಂದು
ಸಾಧ್ವಿ
ಜ್ಯೋತಿ
ಭಾಷಣ
ಮಾಡಿದ್ದರು.
ಬಿಜೆಪಿ ಸಮರ್ಥನೆ: ವಿವಾದಿತ ಹೇಳಿಕೆ ನೀಡಿದ ಬಳಿಕ ಸಚಿವೆ ನಿರಂಜನ್ ಜ್ಯೋತಿ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು, ರಾಷ್ಟ್ರವನ್ನು ಕೊಳ್ಳೆ ಹೊಡೆದು ವಿದೇಶಿ ಬ್ಯಾಂಕ್ಗಳಲ್ಲಿ ಹಣ ಇಟ್ಟಿರುವವರು, ದೇಶದ ಜನರನ್ನು ವಂಚಿಸಿದವರನ್ನು ಏನೆಂದು ಕರೆಯಬೇಕು ಎಂಬುದನ್ನು ನೀವೇ ಹೇಳಿ ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದರು.
ಸಾಧ್ವಿ ನಿರಂಜನ್ ಜ್ಯೋತಿ ಅವರು ಮೊದಲ ಬಾರಿಗೆ ಸಂಸದರಾಗಿದ್ದಾರೆ. ಅವರಿಗೆ ಇನ್ನೂ ಹೇಗೆ ಮಾತನಾಡಬೇಕು ಎಂಬುದರ ಅರಿವಿಲ್ಲ, ಬಾಯಿ ತಪ್ಪಿನಿಂದ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಪ್ರತಿಕ್ರಿಯಿಸಿತ್ತು.
ಮೋದಿ ಸಂಪುಟದ ಸಚಿವರ ಪೈಕಿ 5 ಸಚಿವರು ಮಾತ್ರ 1 ಕೋಟಿ ರು.ಗೂ ಕಡಿಮೆ ಗಳಿಕೆ ಹೊಂದಿದ್ದು ಈ ಪೈಕಿ ಅತ್ಯಂತ ಕಡಿಮೆ ಆಸ್ತಿ ಇರುವ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ (37 ಲಕ್ಷ ರು) ಎಂಬುದು ವಿಶೇಷ.[ಕಡಿಮೆ ಆಸ್ತಿ ಹೊಂದಿರುವವರ ವಿವರ]
ಇದಕ್ಕಿಂತಲೂ ಹೊಲಸು ಮಾತುಗಳನ್ನಾಡಲು ಯಾರಿಂದಲೂ ಸಾಧ್ಯವಿಲ್ಲ. ಸಚಿವೆ ನೀಡಿರುವ ಈ ಹೇಳಿಕೆಗಾಗಿ ಅವರು ಸಾರ್ವಜನಿಕರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿತ್ತು.