ಪೆಟ್ರೋಲ್ ಪಂಪ್ ಗಳಿಗೂ ಇನ್ನು ವಾರದ ರಜಾ?!
ತಮ್ಮ ಬೇಡಿಕೆಗಳು ಈಡೇರದ ಪಕ್ಷದಲ್ಲಿ ತಾವು ಪ್ರತಿ ಭಾನುವಾರ ವಾರದ ರಜಾ ಪಡೆಯುವುದಲ್ಲದೆ, ಪ್ರತಿದಿನ 8 ಗಂಟೆ ಮಾತ್ರವೇ ಕೆಲಸ ನಿರ್ವಹಿಸುವುದಾಗಿ ಪೆಟ್ರೋಲ್ ಪಂಪ್ ಡೀಲರ್ಸ್ ಸರ್ಕಾರವನ್ನು ಎಚ್ಚರಿಸಿದ್ದಾರೆ.
ನವದೆಹಲಿ, ಏಪ್ರಿಲ್ 10: ಪೆಟ್ರೋಲ್ ಮತ್ತು ಡಿಸೆಲ್ ಮಾರಾಟದ ಕಮಿಶನ್ ಅನ್ನು ಸರ್ಕಾರ ಹಚ್ಚಿಸದೆ ಇದ್ದಲ್ಲಿ ಮೇ 10 ರ ನಂತರ ಪ್ರತಿ ಭಾನುವಾರ ಪೆಟ್ರೋಲ್ ಪಂಪ್ ಗಳು ವಾರದ ರಜಾ ಪಡೆಯಲಿವೆ! ಅಷ್ಟೇ ಅಲ್ಲ, ದಿನಕ್ಕೆ ಕೇವಲ 8 ಗಂಟೆ ಮಾತ್ರ ಕಾರ್ಯನಿರ್ವಹಿಸಲಿವೆ. ಹಾಗೆಂದು ಪೆಟ್ರೋಲ್ ಪಂಪ್ ನ ಮಾಲೀಕರೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಜೊತೆಗೆ ಮೇ 10 ನ್ನು 'ನೋ ಪರ್ಚೇಸ್ ಡೆ' ಎಂದು ಆಚರಿಸುವುದಾಗಿ ಭಾರತೀಯ ಪೆಟ್ರೋಲಿಯಂ ವಿತರಕರ ಒಕ್ಕೂಟ(CPID) ಇಂದು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದೆ. ಸಭೆಯಲ್ಲಿ ವಿವಿಧ ರಾಜ್ಯಗಳ ಪೆಟ್ರೋಲಿಯಂ ವಿತರಕರು ಭಾಗವಹಿಸಿದ್ದರು.[ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಿಸಲು ಚಿಂತನೆ]

ಕಳೆದ ಏಳು ವರ್ಷಗಳಿಂದ ಡೀಲರ್ಸ್ ಕಮಿಶನ್ ಗೆ ಸಂಬಂಧಿಸಿದಂತೆ ತೈಲ ಮಾರುಕಟ್ಟೆ ಕಂಪೆನಿಗಳು ಯಾವುದೇ ಸೂಕ್ತ ನಿರ್ಣಯಗಳನ್ನು ತೆಗೆದುಕೊಂಡಿಲ್ಲ. ಲೈಟಿಂಗ್, ಮಾನವ ಸಂಪನ್ಮೂಲ ಸೇರಿದಂತೆ ಇನ್ನಿತರೆ ಸೌಲಭ್ಯಕ್ಕೆ ಸಂಬಂಧಿಸಿದಂತೆ ವೆಚ್ಚವಾಗುವ ಹಣದಿಂದಾಗಿ ನಾವು ಹೈರಾಣಾಗಿದ್ದೇವೆ. ಆದ್ದರಿಂದ ಕಮಿಶನ್ ಗೆ ಸಂಬಂಧಿಸಿದಂತೆ ಶೀಘ್ರವೆ ಸೂಕ್ತ ನಿರ್ಣಯ ತೆಗೆದುಕೊಳ್ಳದಿದ್ದಲ್ಲಿ, ನಾವು ವಾರದ ರಜಾ ಪಡೆಯಲಿದ್ದೇವೆ ಎಂದು ಪೆಟ್ರೋಲ್ ಪಂಪ್ ಡಿಲರ್ಸ್ ಎಚ್ಚರಿಸಿದ್ದಾರೆ.[ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ]
'ಡೀಲರ್ಸ್ ಕಮಿಶನ್ ಗೆ ಸಂಬಂಧಿಸಿದಂತೆ ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ತೈಲ ಮಾರುಕಟ್ಟೆ ಕಂಪೆನಿಗಳು ಭರವಸೆ ನೀಡಿದ್ದರಿಂದ ಜನವರಿಯಲ್ಲಿ ನಡೆಯಬೇಕಿದ್ದ ಮುಷ್ಕರವನ್ನು ನಾವು ಹಿಂಪಡೆದಿದ್ದೆವು. ಆದರೆ ಈ ನಾಲ್ಕು ತಿಂಗಳಲ್ಲಿ ಯಾವ ಬದಲಾವಣೆಯೂ ಆಗಿಲ್ಲವಾದ್ದರಿಂದ ಇಂಥ ನಿರ್ಧಾರ ತೆಗೆದುಕೊಂದಿದ್ದೇವೆ' ಎನ್ನುತ್ತಾರೆ ಪೆಟ್ರೋಲ್ ವಿತರಕರ ಸಂಘದ ರವಿ ಶಿಂಧೆ.
ಒಟ್ಟಿನಲ್ಲಿ ಪೆಟ್ರೋಲ್ ಪಂಪ್ ಡೀಲರ್ಸ್ ಗಳ ಬೇಡಿಕೆಗಳು ಈಡೇರದೆ ಇದ್ದಲ್ಲಿ, ವಾರಾಂತ್ಯದ ಹೊತ್ತಿಗೆ ಪೆಟ್ರೋಲ್ ಪಂಪ್ ಗಳ ಮುಂದೆ ವಾಹನಗಳ ನೂಕುನುಗ್ಗಲು ಹೊಸ ಸಮಸ್ಯೆಯಾಗಿ ಪರಿವರ್ತನೆಯಾದರೆ ಅಚ್ಚರಿಯೇನಿಲ್ಲ
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications