ಎಎಪಿಯಿಂದ ವಕ್ತಾರೆ ಅಲ್ಕಾ ಲಾಂಬ ಉಚ್ಚಾಟನೆ
ನವದೆಹಲಿ, ಜೂನ್ 16: ಆಮ್ ಆದ್ಮಿ ಪಕ್ಷದ ಮುಖಂಡ, ದೆಹಲಿಯ ಮಾಜಿ ಸಾರಿಗೆ ಸಚಿವ ಗೋಪಾಲ್ ರಾಯ್ ಅವರಿಗೆ ಬೆಂಬಲ ಸೂಚಿಸಿದ ಕಾರಣಕ್ಕಾಗಿ ಪಕ್ಷದ ವಕ್ತಾರೆ ಅಲ್ಕಾ ಲಾಂಬ ಅವರನ್ನು ಪಕ್ಷದ ವಕ್ತಾರ ಸ್ಥಾನದಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.
ಪ್ರೀಮಿಯಂ ಬಸ್ ಸೇವೆ ಹಗರಣದ ತನಿಖೆ ಪಾರದರ್ಶಕವಾಗಿ ನಡೆಯುವ ಉದ್ದೇಶದಿಂಡ ಗೋಪಾಲ್ ರಾಯ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮಾಜಿ ಸಾರಿಗೆ ಸಚಿವ ಗೋಪಾಲ್ ರಾಯ್ ಅವರಿಗೆ ಅಲ್ಕಾ ಲಾಂಬ ಬೆಂಬಲ ಸೂಚಿಸಿದ್ದರು.

ಆದರೆ, ಗೋಪಾಲ್ ರಾಯ್ ಆರೋಗ್ಯದ ಸಮಸ್ಯೆಯಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಆಪ್ ತಿಳಿಸಿತ್ತು. ಆದರೆ ಕೇಜ್ರಿವಾಲ್ ಗೋಪಾಲ್ ರಾಯ್ಗೆ ರಾಜೀನಾಮೆ ನೀಡಲು ಸೂಚಿಸಿದ್ದರು ಎಂದು ಲಾಂಬಾ ತಿಳಿಸಿದ್ದರು.
मैं पार्टी की एक अनुशासित कार्यकर्त्ता हूँ और पार्टी के हर फैसले का सम्मान करती हूँ,मुझसे अनजाने में भी अगर कोई गलती हुई होगी तो मैं उसका1/1
— Alka Lamba (@LambaAlka) June 16, 2016
ಲಂಬಾ ಅವರ ಹೇಳಿಕೆಯಿಂದ ಪಕ್ಷದ ಗೌರವಕ್ಕೆ ಧಕ್ಕೆ ಉಂಟಾಗಿರುವ ಕಾರಣ ಅವರನ್ನು ಪಕ್ಷದ ವಕ್ತಾರೆ ಸ್ಥಾನದಿಂದ ಹೊರಹಾಕಲಾಗಿದೆ.












Click it and Unblock the Notifications