ಮೈಸೂರು ಯುವ ದಸರಾ: ಸೆಲೆಬ್ರಿಟಿಗಳು ಪಡೆಯುತ್ತಿರುವ ಸಂಭಾವನೆ ಎಷ್ಟು?
Recommended Video

ಮೈಸೂರು, ಅಕ್ಟೋಬರ್. 12: ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯಲ್ಲೊಂದಾದ ಹಾಗೂ ಯುವ ಸಮೂಹವನ್ನು ಸೂಜಿಗಲ್ಲಿನಂತೆ ಸೆಳೆಯುವ ಯುವದಸರಾ ಇಂದು ಸಂಜೆ ಶುಕ್ರವಾರ (ಅ.12) ಆರಂಭವಾಗಲಿದೆ.
ಪ್ರಖ್ಯಾತ ಗಾಯಕರಾದ ಜಯಹೋ ಖ್ಯಾತಿಯ ವಿಜಯ ಪ್ರಕಾಶ್, ಬಾಲಿವುಡ್ ಗಾಯಕರಾದ ಬಾದಶಾ, ಆಸ್ತ ಗಿಲ್, ಅರ್ಮಾನ್ ಮಲ್ಲಿಕ್, ನೇಹ ಕಕ್ಕರ್, ಶೆರ್ಲಿ ಸೇಟಿಯಾ ಹಾಗೂ ಸ್ಯಾಂಡಲ್ ವುಡ್ ಖ್ಯಾತ ನಟ ನಟಿಯರು ಯುವ ಸಮೂಹವನ್ನು ಸಂತಸದ ಕಡಲಲ್ಲಿ ತೇಲಿಸಲು ರೆಡಿಯಾಗಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ಆರಂಭವಾದ ಯುವ ದಸರಾ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಂಡೇ ಬಂದಿದೆ. ಪ್ರತೀ ಬಾರಿ ದೇಶದ ಮುಂಬೈ, ಹೊಸದಿಲ್ಲಿ, ಇನ್ನಿತರ ರಾಜ್ಯಗಳ ಕಲಾವಿದರು, ಯುವ ದಸರಾ ವೇದಿಕೆಯ ಮೂಲಕ ಯುವ ಸಮೂಹವನ್ನು ರಂಜಿಸಿದ್ದಾರೆ.
ಈ ಬಾರಿಯೂ ಅದು ಮುಂದುವರಿದಿದೆ. ಇದರ ಜೊತೆಗೆ ಯುವ ಸಂಭ್ರಮದ ಮೂಲಕ ಆಯ್ಕೆಯಾದ 25 ತಂಡಗಳ ವಿದ್ಯಾರ್ಥಿಗಳು ಯುವ ದಸರಾದಲ್ಲಿ ತಮ್ಮ ಕಲಾ ಪ್ರದರ್ಶನವನ್ನು ಉಣಬಡಿಸಲಿದ್ದಾರೆ. ಪ್ರತೀ ದಿನ 6 ಗಂಟೆಯಿಂದ 7 ಗಂಟೆಯವರೆಗೆ ಐದು ಕಾಲೇಜುಗಳ ವಿದ್ಯಾರ್ಥಿಗಳು ಪ್ರದರ್ಶನ ನೀಡಲಿದ್ದಾರೆ. ಮುಂದೆ ಓದಿ...

ಸ್ಥಳೀಯ ಕಲಾವಿದರಿಗೆ ಅವಕಾಶ
7 ರಿಂದ 8.30ರವರೆಗೆ ಸ್ಥಳೀಯ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಇನ್ನಿತರ ಜಿಲ್ಲೆಗಳ ಕಲಾವಿದರು ನೃತ್ಯ, ನೃತ್ಯ ರೂಪಕ, ಪಾಪ್ ಡ್ಯಾನ್ಸ್, ಭರತ ನಾಟ್ಯ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.

ಮುಖ್ಯಮಂತ್ರಿಗಳಿಂದ ಉದ್ಘಾಟನೆ
ಸಂಜೆ 6.30ಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವರಾದ ಸಾ.ರಾ.ಮಹೇಶ್, ಡಾ.ಜಯಮಾಲ, ಎನ್.ಮಹೇಶ್, ಸಿ.ಪುಟ್ಟರಂಗಶೆಟ್ಟಿ, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ ಭಾಗವಹಿಸಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು.

ಸಿದ್ಧತೆಗಳು ಪೂರ್ಣ
ಯುವ ದಸರಾ ಆಚರಣೆಗೆ ಸಂಬಂಧಿಸಿದಂತೆ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿದ್ದು, ಮೈದಾನದಲ್ಲಿ 30 ಸಾವಿರ ಮಂದಿ ಕೂರಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ದೊಡ್ಡ ಪರದೆಯ ಮೂಲಕ ಮೈದಾನದ ಹೊರಗಿನವರಿಗೂ ಕಾರ್ಯಕ್ರಮ ವೀಕ್ಷಿಸಲು ಅನುವು ಮಾಡಿಕೊಡಲಾಗುತ್ತಿದೆ.

ಕಾರ್ಯಕ್ರಮಗಳ ವಿವರ
ಉದ್ಘಾಟನೆ ದಿನ ವಿಜಯಪ್ರಕಾಶ್ ತಂಡದಿಂದ ಸಂಗೀತ, ಸಂಜೆ 13ರ ರಾತ್ರಿ ಬಾದಶಾ ಸಂಗೀತ ರಸಮಂಜರಿ, 14ರಂದು ಅರ್ಮಾನ್ ಮಲಿಕ್ ಸಂಗೀತೋತ್ಸವ, 15ರಂದು ಕನ್ನಡ ನಟಿಯರಿಂದ ಸ್ಯಾಂಡಲ್ ವುಡ್ ನೈಟ್ಸ್, 16ರಂದು ಸಂಗೀತಗಾರ ನವೀನ್ ಸಜ್ಜು ತಂಡ, ಶೆರ್ಲಿ ಸೇಟಿ ತಂಡದಿಂದ ಸಂಗೀತ, 17ರಂದು ಯಶ್ ಮನರಂಜನೆ, ನೇಹಾ ಕಕ್ಕರ್ ರಸಸಂಜೆ ಕಾರ್ಯಕ್ರಮವಿರುತ್ತದೆ.

ಸೆಲೆಬ್ರಿಟಿಗಳ ಸಂಭಾವನೆ
ವಿಜಯಪ್ರಕಾಶ್ ತಂಡ 60 ಲಕ್ಷ + ಜಿಎಸ್ಟಿ, ಅರ್ಮಾನ್ ಮಲಿಕ್: 35 ಲಕ್ಷ + ಜಿಎಸ್ಟಿ, ನೇಹಾ ಕಕ್ಕರ್: 35 ಲಕ್ಷ + ಜಿಎಸ್ಟಿ, ಬಾದಶಾ-30 ಲಕ್ಷ +ಜಿಎಸ್ಟಿ, ಶ್ರೀಧರ್ ಜೈನ್ ತಂಡ: 1.5 ಲಕ್ಷ
ನವೀನ್ ಸಜ್ಜು: 1.5 ಲಕ್ಷ ಸಂಭಾವನೆ ಪಡೆದಿದ್ದಾರೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications