ಮೈಸೂರಿನಲ್ಲಿ ಕಣ್ಮನ ಸೆಳೆಯುತ್ತಿದೆ ಮಾಗಿ ಉತ್ಸವ
ಮೈಸೂರು, ಡಿಸೆಂಬರ್ 23 : ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ, ಅರಮನೆ ಮಂಡಳಿ ಜಂಟಿಯಾಗಿ ಅರಮನೆ ಆವರಣದಲ್ಲಿ ಮಾಗಿ ಉತ್ಸವ'ದ ಅಂಗವಾಗಿ 4ನೇ ವರ್ಷದ ಫಲಪುಷ್ಪ ಪ್ರದರ್ಶನ ಏರ್ಪಡಿಸಿದೆ.
ಲಲಿತ ಮಹಲ್ ಅರಮನೆ, ಶ್ರೀ ಜಯಚಾಮರಾಜ ಒಡೆಯರ್, ದಸರಾ ಗಜಪಡೆ (9 ಅಡಿ ಎತ್ತರ) ಪಿಂಗ್ಪಾಂಗ್, ಜಟ್ಟಿ ಕಾಳಗ, ಶಿವಲಿಂಗಕ್ಕೆ ನಮಸ್ಕರಿಸುತ್ತಿರುವ ಆನೆ ಮತ್ತು ನಂದಿ, ಕೀಲುಕುದುರೆ, ಸೈಕಲ್ ತುಳಿಯುತ್ತಿರುವ ಅಳಿಲು, ಒಡೆಯರ್, ಲಲಿತ್ ಮಹಲ್ ಮೊದಲಾದ ಹೂವಿನ ಮಾದರಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ಮೈಸೂರಿನವರೇ ಆದ ಜಯಶ್ರೀ ನಾಗಪ್ರಸಾದ್ ಅವರು ದೇವಿ ವೈಭವ', ಲೀಲಾವತಿ ಅವರು ಶ್ರೀ ರಾಮಾಯಣ ದರ್ಶನಂ, ಮಂಜುಳಾ ವೆಂಕಟೇಶ್ ಮೂರ್ತಿ ಶಿವಮಯಮಿದಂ ಜಗತ್' ಶೀರ್ಷಿಕೆಯಡಿ ಗೊಂಬೆಗಳನ್ನು ಪ್ರದರ್ಶಿಸಿದ್ದಾರೆ.

ಫಲಪುಷ್ಪ ಪ್ರದರ್ಶನ ವೀಕ್ಷಿಸಿದ 300ಕ್ಕೂ ಹೆಚ್ಚು ಮಂದಿಗೆ ಅಲವೆರಾ, ಕೃಷ್ಣ ತುಳಸಿ, ಮಲ್ಲಿಗೆ ಗಿಡಗಳನ್ನು ವಿತರಿಸಲಾಗುತ್ತಿರುವುದು ಪ್ರಶಂಸನಾರ್ಹ.

ಮೈಸೂರು ವಿವಿ ಕ್ರಿಕೆಟ್ ಮೈದಾನದಲ್ಲಿ ಪ್ಯಾರಾ ಮೋಟರಿಂಗ್ ರೈಡ್ ಗೆ ಚಾಲನೆ ನೀಡಲಾಗಿದ್ದು, 10 ನಿಮಿಷ ಮೈಸೂರಿನ ಸೌಂದರ್ಯ ಸವಿಯಬಹುದು.












Click it and Unblock the Notifications