Get Updates
Get notified of breaking news, exclusive insights, and must-see stories!

ಜಂಬೂಸವಾರಿ ಪುಷ್ಪಾರ್ಚನೆಯಲ್ಲಿ ಯದುವೀರ್‌ ಗೈರು, ಕಾರಣವೇನು?

ಇಂದು ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿ ವೈಭವಪೋತದಿಂದ ಸಂಪನ್ನಗೊಂಡಿದೆ. ದಸರಾ ಮಹೋತ್ಸವ ಸಂಭ್ರಮದಿಂದ ಮುಗಿದಿದೆ. ಆದರೆ, ಈ ಬಾರಿಯ ಜಂಬೂಸವಾರಿಯಲ್ಲಿ ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಒಡೆಯರ್ ಗೈರಾಗಿದ್ದರು.

ಬಿಜೆಪಿ ಸಂಸದರೂ ಆಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪ್ರತಿ ವರ್ಷ ದಸರಾ ಜಂಬೂಸವಾರಿ ಪುಷ್ಪಾರ್ಚನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಹಬ್ಬದ ವೇಳೆಯೇ ಯದುವೀರ್‌ ಹಾಗೂ ತ್ರಿಷಿಕಾ ಕುಮಾರಿ ದಂಪತಿಗೆ ಎರಡನೇ ಮಗು ಜನನವಾಗಿದೆ.

What Is The Reason For Yaduveer Wodeyar s Absence From Jamboosawari

ಯದುವೀರ್‌ ಅವರಿಗೆ ಕಂಕಣ ಧಾರಣೆ ನಂತರ ಮಗು ಜನಿಸಿದ್ದರಿಂದ ಅರಮನೆಯಲ್ಲಿನ ದಸರಾ ಧಾರ್ಮಿಕ ಕಾರ್ಯವನ್ನು ಯದುವೀರ್ ಅವರು ಮುಂದುವರಿಸಿದ್ದರು. ಆದರೆ ಕಂಕಣ ವಿಸರ್ಜನೆಯಾದ ಬಳಿಕ ಮತ್ತೆ ಜನನ ಸೂತಕ ಅನ್ವಯವಾದ ಹಿನ್ನೆಲೆಯಲ್ಲಿ ಜಂಬೂಸವಾರಿಗೆ ಪುಷ್ಪಾರ್ಚನೆಯಲ್ಲಿ ಯದುವೀರ್‌ ಪಾಲ್ಗೊಳ್ಳಲಿಲ್ಲ ಎನ್ನಲಾಗಿದೆ.

ಅರಮನೆಯಲ್ಲಿನ ಶರನ್ನವರಾತ್ರಿ ಕಾರ್ಯ ಹಾಗೂ ವಿಜಯದಶಮಿ ಧಾರ್ಮಿಕ ಕಾರ್ಯ, ವಿಜಯಯಾತ್ರೆ ಮುಗಿಸಿದ ಬಳಿಕ ಯದುವೀರ್ ಅವರು ಕಂಕಣ ವಿಸರ್ಜನೆ ಮಾಡಿದರು. ಇದಾದ ಬಳಿಕ ಮಗುವಿನ ಜನನದ ಸೂತಕ ಅನ್ವಯವಾಗಿದ್ದು, ಚಾಮುಂಡೇಶ್ವರಿ ದೇವತೆಯ ಆರಾಧಕರಾದ ಯದುವೀರ್ ದೇವಿಯ ಪುಷ್ಪಾರ್ಚನೆಗೆ ಪಾಲ್ಗೊಳ್ಳಲಿಲ್ಲ.

ಅರಮನೆಯಲ್ಲಿ ಅಕ್ಟೋಬರ್‌ 3ರಂದು ಶರನ್ನವರಾತ್ರಿಯ ಮೊದಲ ದಿನ ಯದುವೀರ್ ಒಡೆಯರ್ ಒಂಬತ್ತು ದಿನಗಳ ಖಾಸಗಿ ದರ್ಬಾರ್ ಆರಂಭಿಸಿದರು. ಈ ಧಾರ್ಮಿಕ ಕಾರ್ಯಗಳಲ್ಲಿ ಯದುವೀರ್ ಜತೆಗೆ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಕೂಡ ಇದ್ದರು. ಆದರೆ ಆಯುಧ ಪೂಜೆ ದಿನದಂದು ತ್ರಿಷಿಕಾ ಒಡೆಯರ್ ಅವರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಗೆ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದರು ಎನ್ನಲಾಗಿದೆ.

What Is The Reason For Yaduveer Wodeyar s Absence From Jamboosawari

ಹಾಗಾಗಿ ನಿನ್ನೆ ಶುಕ್ರವಾರ ಸಂಜೆ ರತ್ನಖಚಿತ ಸಿಂಹಾಸನದಲ್ಲಿ ಯದುವೀರ್‌ ಒಡೆಯರ್ ಅವರು ಖಾಸಗಿ ದರ್ಬಾರ್ ನಡೆಸಿ, ಬಳಿಕ ಸಿಂಹಾಸನದಲ್ಲಿ ಜೋಡಿಸಲಾದ ಸಿಂಹದ ತಲೆಯನ್ನು ನಿಮಜ್ಜನಗೊಳಿಸಿದರು. ಇದಾದ ನಂತರ ಅಂಬಾವಿಲಾಸ ಪೂಜೆ ನಡೆಸಿದ ನಂತರ ಯದುವೀರ್ ದೇವರ ದರ್ಶನ ಪಡೆದು, ನವರಾತ್ರಿ ಪೂಜೆಯನ್ನು ಸಮಾಪನಗೊಳಿಸಿದರು ಎಂದು ತಿಳಿದುಬಂದಿದೆ.

ಈ ವರ್ಷ ಯುವರಾಜ ಯದುವೀರ್‌ ಒಡೆಯರ್‌ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸದ್ಯ ಬಿಜೆಪಿ ಸಂಸದರೂ ಆಗಿದ್ದಾರೆ. ಮತ್ತೊಂದೆಡೆ ದಸರಾ ಸಂಭ್ರಮದ ಜೊತೆಗೆ ಎರಡನೇ ಪುತ್ರನ ಆಗಮನದೊಂದಿಗೆ ಹರುಷದ ಕಡಲಲ್ಲಿ ತೇಲಿದ್ದಾರೆ.

ಮಗುವಿನ ಜನನದ ಬೆನ್ನಲ್ಲೇ ಮೈಸೂರಿಗೆ ಮತ್ತೊಬ್ಬ ಯುವರಾಜನ ಆಗಮನವಾಗಿದೆ ಎಂದು ಸಾಂಸ್ಕೃತಿಕ ನಗರಿಯ ಜನ ಫುಲ್‌ ಖುಷ್‌ ಆಗಿದ್ದಾರೆ. ಯುವರಾಜನ ಜನನವು ದಸರಾ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.

What Is The Reason For Yaduveer Wodeyar s Absence From Jamboosawari

ಯುವರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ತ್ರಿಷಿಕಾ ಕುಮಾರಿ ಅವರನ್ನು 2016ರಲ್ಲಿ ವಿವಾಹವಾಗಿದ್ದರು. ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಆದ್ಯವೀರ್‌ ಎಂದು ನಾಮಕರಣ ಮಾಡಲಾಗಿದೆ. ಇದೀಗ ಮೈಸೂರು ರಾಜಮನೆತನಕ್ಕೆ ಮತ್ತೊಂದು ಕುಡಿ ಕಾಲಿಟ್ಟಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+