ಪ್ಲಾಸ್ಟಿಕ್ ಕವರ್ನಿಂದ ಟೈಲ್ಸ್ ತಯಾರಿಕೆ: ಮೈಸೂರು ಪಾಲಿನಿಂದ ವಿನೂತನ ಪ್ರಯೋಗ
ಮೈಸೂರು, ಡಿಸೆಂಬರ್ 1: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್ ಕವರ್ ನಿಂದ ಟೈಲ್ಸ್ ಮಾಡಲಾಗುತ್ತಿದ್ದು, ನಿತ್ಯ 2 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಇಂಟರ್ ಲಾಕಿಂಗ್ ಮಾದರಿ ಟೈಲ್ಸ್ ಆಗಿ ಪರಿವರ್ತಿಸುತ್ತಿದೆ.
ನಗರಪಾಲಿಕೆಯ ನಾನಾ ಕಾಮಗಾರಿ ಹಾಗೂ ಫುಟ್ ಪಾತ್ ಗೆ ನೆಲಹಾಸು ಹಾಕಲು ಈ ಟೈಲ್ಸ್ ಅನ್ನೇ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಇದರಿಂದ ಪ್ರೇರಣೆಗೊಂಡ ಚೆನ್ನೈನ ಅನೇಕ ಕಂಪನಿಗಳು ಈ ಟೈಲ್ಸ್ ಕೊಂಡೊಯ್ಯುತ್ತಿವೆ. ಆಶ್ಚರ್ಯವೆಂದರೆ 150 ಡಿಗ್ರಿವರೆಗೆ ಉಷ್ಣಾಂಶವನ್ನು ಈ ಟೈಲ್ಸ್ ತಡೆದು ಕೊಳ್ಳುತ್ತವೆ. ಬೆಂಕಿ ಬಿದ್ದರೂ ಟೈಲ್ಸ್ ಹೊತ್ತಿಕೊಳ್ಳುವುದಿಲ್ಲ.

ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್ ಕವರ್ಗಳಿಗೆ ಮೈಸೂರು ಮಹಾನಗರಪಾಲಿಕೆ 'ಟೈಲ್ಸ್' ರೂಪ ನೀಡಿದೆ. ಇಂದು ಜಗತ್ತನ್ನೇ ಪ್ಲಾಸ್ಟಿಕ್ ಸಮಸ್ಯೆ ಕಾಡುತ್ತಿದೆ. ಹಾಲಿನ ಕವರ್, ಶಾಂಪೋ, ಪೆನಾಯಿಲ್ ಬಾಟಲ್ಗಳನ್ನು ಹೇಗೋ ಮರು ಮಾಡಬಹುದು. ನಿತ್ಯ ಪೌರಕಾರ್ಮಿಕರು ಇದನ್ನು ಪ್ರತ್ಯೇಕಗೊಳಿಸುತ್ತಾರೆ. ಆದರೆ, ತಿಂಡಿ ತಿನಿಸು ಕವರ್ಗಳು, ಬಳಸಿ ಬಿಸಾಡಿದ ಖಾಲಿ ಪೊಟ್ಟಣಗಳನ್ನು ಮರು ಬಳಕೆ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ಜಾಗೃತ್ ಟೆಕ್ ಪ್ರೈ.ಲಿ. ಕಂಪನಿ ಜತೆ ಒಡಂಬಡಿಕೆ ಮಾಡಿಕೊಂಡಿದೆ. ಆರು ತಿಂಗಳಿಂದ 350 ಟನ್ ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿರುವ ಕಂಪನಿ 100 ಟನ್ ನಷ್ಟು ತ್ಯಾಜ್ಯವನ್ನು 'ಟೈಲ್ಸ್' ಆಗಿ ಪರಿವರ್ತಿಸಿದೆ.
"ನಗರಪಾಲಿಕೆ ಇಲ್ಲಿಯವರೆಗೂ 350ಕ್ಕೂ ಹೆಚ್ಚು ಟನ್ ಪ್ಲಾಸ್ಟಿಕ್ ಕಸವನ್ನು ಜಾಗೃತ್ ಟೆಕ್ ಕಂಪನಿಗೆ ನೀಡಿದ್ದು, 100ಕ್ಕೂ ಹೆಚ್ಚು ಟನ್ ತ್ಯಾಜ್ಯದಿಂದ ಟೈಲ್ಸ್ ಉತ್ಪಾದನೆ ಮಾಡಲಾಗಿದೆ. ಇದರಿಂದ ಇಂಗಾಲದ ಹೊರೆಯನ್ನೂ ತಗ್ಗಿಸಿದ್ದೇವೆ. ಪರಿಸರ ಸಂರಕ್ಷಣೆಗೂ ಇದು ಅನುಕೂಲಕರವಾಗಿದೆ" ಎಂದು ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್ ತಿಳಿಸಿದ್ದಾರೆ.

ಟೈಲ್ಸ್ ಮಾಡುವುದು ಹೇಗೆ?
ಜಾಗೃತ್ ಟೆಕ್ ಗೆ ವಿದ್ಯಾರಣ್ಯಪುರಂನ ಸೂಯೇಜ್ ಫಾರಂ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಉಚಿತವಾಗಿ ಪಾಲಿಕೆ ಜಾಗ ನೀಡಿದೆ. ಅಲ್ಲೇ ಪೌರಕಾರ್ಮಿಕರು ಸಂಗ್ರಹಿಸಿ ತಂದಂತಹ ಪ್ಲಾಸ್ಟಿಕ್ ಕವರ್ಗಳಿಗೆ ಅಂಟಿದ ಕಸವನ್ನು ಮೊದಲು ವಿಂಗಡನೆ ಮಾಡಲಾಗುತ್ತದೆ. ಇದಕ್ಕೆ ಪ್ರತ್ಯೇಕ ಯಂತ್ರ ಇದೆ. ನಂತರ ಸಣ್ಣದಾಗಿ ಕತ್ತರಿಸಿ ಮತ್ತೊಂದು ಯಂತ್ರದಲ್ಲಿ ಸೆಮಿ ಸಾಲಿಡ್ ಆಗಿ ಕಂಪ್ರೆಸ್ ಮಾಡಲಾಗುತ್ತದೆ. ಬಳಿಕ ಎರಡೂವರೆ ಕೆಜಿ ತೂಕದ ತ್ಯಾಜ್ಯ ಎರಡು ಕೆಜಿ ಟೈಲ್ಸ್ ಆಗಿ ಪರಿವರ್ತನೆಯಾಗುತ್ತದೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications