ನಾಗರಹೊಳೆಯಲ್ಲಿ ಬೇಟೆ ಕಲಿತ ತಬ್ಬಲಿ ಹುಲಿ ಮರಿಗಳು!
ಮೈಸೂರು, ನವೆಂಬರ್ 17; ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ಸಮಯದಲ್ಲಿ ಪ್ರವಾಸಿಗರಿಗೆ ಮೂರು ಮರಿಯೊಂದಿಗೆ ನೋಡಲು ಸಿಗುತ್ತಿದ್ದ ಹೆಣ್ಣು ಹುಲಿ ಸಾವಿನ ಬಳಿಕ ಅದರ ಮೂರು ಮರಿಗಳಿಗೆ ಅರಣ್ಯ ಇಲಾಖೆ ಸಾಕಾನೆಗಳ ಸಹಾಯದಿಂದ ಹುಡುಕಾಟ ನಡೆಸುತ್ತಿದೆ. ಆದರೆ ಈ ನಡುವೆ ಸಿಸಿ ಕ್ಯಾಮರಾದಲ್ಲಿ ಮೂರು ಮರಿಗಳು ಪತ್ತೆಯಾಗಿದ್ದಲ್ಲದೆ, ಅವು ಬೇಟೆಯಾಡಿ ಮಾಂಸ ತಿನ್ನುತ್ತಿರುವ ದೃಶ್ಯ ಕಂಡು ಬಂದಿರುವುದು ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗೆ ನೆಮ್ಮದಿ ತಂದಿದೆ.
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಹೆಣ್ಣು ಹುಲಿ ಉರುಳಿಗೆ ಸಿಲುಕಿ ಸಾವನ್ನಪ್ಪಿತ್ತು. ಹೀಗಾಗಿ ಇದರ ಸುಮಾರು ಆರು ತಿಂಗಳ ಮೂರು ಮರಿಗಳು ಹೇಗಿದ್ದಾವೆ? ಎಂಬುದು ಚಿಂತೆಯಾಗಿತ್ತು. ಅವುಗಳನ್ನು ಪತ್ತೆ ಹಚ್ಚಿ ರಕ್ಷಿಸುವ ಕಾರ್ಯವನ್ನು ಕಳೆದ ಕೆಲವು ದಿನಗಳ ಹಿಂದೆಯೇ ಅರಣ್ಯ ಇಲಾಖೆ ಆರಂಭಿಸಲಾಗಿತ್ತು. ಇದೀಗ ಮರಿಗಳು ಕ್ಯಾಮರಾದಲ್ಲಿ ಸೆರೆಯಾಗಿರುವ ಹಿನ್ನಲೆಯಲ್ಲಿ ಅವುಗಳು ಸುರಕ್ಷಿತವಾಗಿವೆ ಎಂಬುದು ಗೊತ್ತಾಗಿದೆ.
ಹಾಗೆ ನೋಡಿದರೆ ತಾಯಿ ಸಾವಿನಿಂದ ಮಕ್ಕಳು ಆಹಾರವಿಲ್ಲದೆ ಸಾಯುವುದು ವನ್ಯಪ್ರಾಣಿಗಳಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅದರಲ್ಲೂ ಹುಲಿಯಂತಹ ಪ್ರಾಣಿಗಳು ಮನುಷ್ಯನ ದುರಾಸೆಗೆ ಸಾವನ್ನಪ್ಪುತ್ತಿರುವುದು ಬೇಸರದ ಸಂಗತಿಯಾಗಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜತೆಗೆ ಸಫಾರಿಗೆ ತೆರಳುವ ಪ್ರವಾಸಿಗರ ಕಣ್ಣಿಗೂ ಬೀಳುತ್ತಿವೆ. ಅದರಲ್ಲೂ ಈಗಾಗಲೇ ಸಾವನ್ನಪ್ಪಿರುವ ಹೆಣ್ಣು ಹುಲಿ ತನ್ನ ಮೂರು ಮರಿಗಳೊಂದಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಕನಕೋಟೆ ಸಫಾರಿಯ ವೇಳೆ ನಾಯಂಜಿಕಟ್ಟೆ ಎಂಬ ಕೆರೆ ಬಳಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು.

ಬೇಟೆಗಾರರ ಕುಕೃತ್ಯಕ್ಕೆ ಹುಲಿ ಬಲಿ
ಕಾಕನಕೋಟೆ ಸಫಾರಿಗೆ ಆಗಮಿಸುವ ಬಹುತೇಕ ಪ್ರವಾಸಿಗರ ನೆಚ್ಚಿನ ಹುಲಿಯಾಗಿದ್ದ ಈ ಹೆಣ್ಣು ಹುಲಿಯನ್ನು ನಾಯಂಜಿಕಟ್ಟೆ ಫೀಮೇಲ್ ಎಂದೇ ಗುರುತಿಸಲಾಗಿತ್ತು. ತಾರಕ ಹಿನ್ನೀರಿನ ಅರಣ್ಯ ಪ್ರದೇಶದಲ್ಲೇ ತನ್ನ ನೆಲೆಯನ್ನು ಹೊಂದಿದ್ದ ಈ ಹುಲಿ ಇತ್ತೀಚಿಗೆ ತಾರಕ ಸಮೀಪವೇ ಮರಿಗಳೊಂದಿಗೆ ಕಾಡಿನಿಂದ ಹೊರಬಂದ ವೇಳೆ ಕಳ್ಳಬೇಟೆಗಾರರ ಕುಕೃತ್ಯಕ್ಕೆ ಬಲಿಯಾಗಿತ್ತು. ಅಮ್ಮನ ಕಳೆದುಕೊಂಡ ಮೂರು ಮರಿಗಳ ರಕ್ಷಣೆ ಅರಣ್ಯ ಇಲಾಖೆಗೆ ಸವಾಲು ಆಗಿದ್ದವು. ಆದರೆ ಅವು ಬೇಟೆಯಾಡಿ ಆಹಾರ ತಿನ್ನಲು ಕಲಿಯುತ್ತಿರುವುದು ಅರಣ್ಯ ಇಲಾಖೆಗೆ ನೆಮ್ಮದಿ ತಂದಿದೆ.

ಹಿಂದೆಯೂ ಇಂತಹ ಘಟನೆ ನಡೆದಿತ್ತು
ಹಾಗೆ ನೋಡಿದರೆ ತಾಯಿಯನ್ನು ಕಳೆದುಕೊಂಡು ಮರಿಗಳು ಆಹಾರವಿಲ್ಲದೆ ಸಾವನ್ನಪ್ಪಿರುವ ಪ್ರಕರಣ ಈ ಹಿಂದೆಯೂ ನಡೆದಿದೆ. 2012ರಲ್ಲಿ ನಾಗರಹೊಳೆಯ ಮೇಟಿಕುಪ್ಪೆ ಸಮೀಪವು ಸಹ ಹುಲಿಯೊಂದು ಹೊರಬಂದು ಉಪಟಳ ನೀಡುತ್ತಿದೆ ಎಂಬ ಕಾರಣಕ್ಕೆ ಆ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಈ ವೇಳೆ ಅನಾಥವಾಗಿದ್ದ ಮರಿಗಳು ಸಾವನ್ನಪ್ಪಿರುವುದರ ಬಗ್ಗೆ ವರದಿಯಾಗಿತ್ತು. 2015-16ರಲ್ಲಿಯೂ ಸಹ ನಾಗರಹೊಳೆಯಲ್ಲೇ ಕಾಡುಹಂದಿಯ ಮುಳ್ಳುಗಳು ಚುಚ್ಚಿ ಕುತ್ತಿಗೆ ಮತ್ತು ಕಾಲುಗಳಿಗೆ ಗಾಯಗೊಂಡಿದ್ದ ಹುಲಿಯೊಂದು ಮೃತಪಟ್ಟಿದ್ದು, ಅದರ ಮರಿಗಳು ರಕ್ಷಣೆ ಸಿಗದೇ ಹಸಿವಿನಿಂದ ಬಳಲಿ ಸಾವನ್ನಪ್ಪಿದ್ದವು.

ಹಸಿವಿನಿಂದ ಸಾವನ್ನಪ್ಪಿದ್ದ ಹುಲಿ ಮರಿಗಳು
2016ರಲ್ಲಿ ನಾಗರಹೊಳೆಯ ವ್ಯಾಪ್ತಿಯ ಕಬಿನಿ ಹಿನ್ನೀರಿನ ಸಮೀಪ ಕಾಡಿನಿಂದ ಹೊರಬಂದ ಹುಲಿಯನ್ನು ಸೆರೆಹಿಡಿಯುವ ವೇಳೆ ಹುಲಿಯೂ ಮೃತಪಟ್ಟಿದ್ದು, ಬಳಿಕ ಅದರ ಮರಿಗಳು ಮತ್ತೊಂದು ಹುಲಿಯೊಡನೆ ಕಾಣಿಸಿತ್ತು. ಅಷ್ಟೇ ಅಲ್ಲದೇ 2021ರ ಮೇ ನಲ್ಲಿ ಬಂಡೀಪುರ ಅರಣ್ಯದ ನುಗು ವ್ಯಾಪ್ತಿಯಲ್ಲಿಯೂ ಸಹ ಹುಲಿಯೊಂದು ತನ್ನ ಮರಿಗಳನ್ನು ಪೊದೆಯೊಂದರಲ್ಲಿ ಬಿಟ್ಟು ಬಳಿಕ ನಾಪತ್ತೆಯಾಗಿತ್ತು. ಈ ವೇಳೆ ಅನೇಕ ದಿನಗಳ ಕಾಲ ಹಸಿವಿನಿಂದ ಬಳಲಿದ ಹುಲಿ ಮರಿಗಳನ್ನು ಅರಣ್ಯ ಇಲಾಖೆ ಕೂಡಲೇ ರಕ್ಷಣೆಗೆ ಮುಂದಾಗಿತ್ತು. ರಕ್ಷಿಸುವ ವೇಳೆ ಎರಡು ಮರಿಗಳು ಮೃತಪಟ್ಟಿದ್ದು, ಒಂದನ್ನು ರಕ್ಷಿಸಲಾಗಿದೆ.

ಮರಿಗಳನ್ನು ಗಂಡು ಹುಲಿ ಪೋಷಿಸಿತ್ತು
ರಾಜಸ್ಥಾನದಲ್ಲಿ ಹಿಂದೊಮ್ಮೆ ತಾಯಿ ಹುಲಿ ಮೃತಪಟ್ಟ ಸಂದರ್ಭದಲ್ಲಿ ಜಲೀಮ್ ಎಂಬ ಗಂಡುಹುಲಿಯೇ 2 ಅನಾಥ ಮರಿಗಳನ್ನು ಸಾಕಿದ ಘಟನೆ ನಡೆದಿತ್ತು. 2018ರಲ್ಲಿ ಮಹರಾಷ್ಟ್ರದ ತಿಪ್ಪೇಶ್ವರ ಎಂಬ ಅರಣ್ಯದಲ್ಲಿ ಆನ್ವಿ ಎಂಬ ಹೆಣ್ಣುಹುಲಿ ಮನುಷ್ಯನ ಜೀವಕ್ಕೆ ಅಪಾಯವಾದ ನಂತರ ಅದನ್ನು ಗುಂಡಿಕ್ಕಿ ಕೊಂದ ಬಳಿಕ ಅದರ ಮರಿಗಳು ಅನಾಥವಾಗಿದ್ದವು. ಮಧ್ಯಪ್ರದೇಶದ ಪನ್ನ ರಾಷ್ಟ್ರೀಯ ಉದ್ಯಾನವನದಲ್ಲಿ 2021ರ ಮೇ ತಿಂಗಳಲ್ಲಿ ತಾಯಿ ಹುಲಿಯೊಂದು ಮೃತಪಟ್ಟ ಬಳಿಕ ಟಿ-243 ಎಂಬ ಗಂಡು ಹುಲಿ 4 ಮರಿಗಳಿಗೆ ಆಹಾರವನ್ನು ಪೂರೈಕೆ ಮಾಡಿ ನೋಡಿಕೊಂಡ ಬಗ್ಗೆ, 2022ರಲ್ಲಿ ಮಧ್ಯಪ್ರದೇಶದ ಸಂಜಯ್ ದುಬ್ರಿ ಅರಣ್ಯದಲ್ಲಿಯೂ ಸಹ ಟಿ-18 ಎಂಬ ಹೆಣ್ಣು ಹುಲಿ ರೈಲಿಗೆ ಸಿಲುಕಿ ಸಾವನ್ನಪ್ಪಿದ ನಂತರ ಅದೇ ಅದರ ಕುಟುಂಬಕ್ಕೆ ಸೇರಿದ ಮೌಸಿ ಎಂಬ ಹುಲಿ ತನ್ನ 4 ಮರಿಗಳೊಂದಿಗೆ ಟಿ-18ನ 3 ಮರಿಗಳನ್ನು ಪೋಷಿಸಿತ್ತು.

ಹುಲಿ ಮರಿಗಳ ಹುಡುಕಾಟ ಹೇಗಿತ್ತು?
ಇದೀಗ ತಾಯಿಯನ್ನು ಕಳೆದುಕೊಂಡ ಮರಿಗಳ ಪತ್ತೆಗಾಗಿ 130 ಅರಣ್ಯ ಇಲಾಖೆ ಸಿಬ್ಬಂದಿ, ಸಾಕಾನೆಗಳ ಮೂಲಕ ಪತ್ತೆಕಾರ್ಯ ಆರಂಭಿಸಿದ್ದರು. 30 ಟ್ರ್ಯಾಪಿಂಗ್ ಕ್ಯಾಮರಾ ಮತ್ತು 2 ಡ್ರೋನ್ ಬಳಸಿ ಹುಡುಕಾಟ ನಡೆಸಿದ ವೇಳೆ ಜಿಂಕೆಯ ಕಳೇಬರದ ಬಳಿ ಬಂದು ಮಾಂಸ ತಿನ್ನುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ಅರಣ್ಯ ಇಲಾಖೆ ನೆಮ್ಮದಿಯುಸಿರು ಬಿಟ್ಟಿದೆ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications