ಪುರೋಹಿತ ಶ್ಯಾಮಾಚಾರ್ಯರ ರಾಯಲ್ ಎನ್ಫೀಲ್ಡ್ ಬದರೀಯಾತ್ರೆ
ಮೈಸೂರು, ಜುಲೈ 06: ಪೂಜೆ ಪುನಸ್ಕಾರಗಳಿಗೆ ತಮ್ಮನ್ನು ಒಡ್ಡಿಕೊಂಡಿರುವ ಸಾತ್ವಿಕ ಪುರೋಹಿತ ಮೈಸೂರಿನ ಹೆಚ್.ಎಸ್.ಶ್ಯಾಮಾಚಾರ್ ಅವರು ಸಾಹಸ ಕಾರ್ಯವೊಂದಕ್ಕೆ ಕೈ ಹಾಕಿದ್ದಾರೆ.
ಶ್ರೀಪಾದರಾಯರ ಮಠದ ಬಲ ಸೇವೆಯಲ್ಲಿರುವ ಇವರು ದಿನನಿತ್ಯದ ಕೆಲಸ ಕೇವಲ ದೇವ ಪೂಜೆಯೊಂದೇ. ಇದರ ಮಧ್ಯೆ ತಾನು ಕೂಡ ಹೊಸದಾಗಿ ಏನಾದರೂ ಮಾಡಬೇಕೆಂಬ ಉಮೇದಿನಿಂದ ತಮ್ಮ ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಬದರಿ, ಕೇದರಾ, ದ್ವಾರಕಾನಾಥ, ಮಥುರಾ ಪ್ರವಾಸವನ್ನು ಹೊರಟ್ಟಿದ್ದಾರೆ.
ಸಾಕಷ್ಟು ಮಂದಿ ಹೀಗೆ ಬೈಕಿನಲ್ಲಿ ಉತ್ತರ ಭಾರತ ಪ್ರವಾಸ ಮಾಡಿದ್ದಾರೆ ಇದರಲ್ಲಿ ಹೊಸತೇನು ಎಂಬ ಪ್ರಶ್ನೆಗೆ ಉತ್ತರವೂ ಇದೆ. ಇವರು ಬುಲೆಟ್ ಪ್ರವಾಸ ಮಾಡುತ್ತಿರುವುದು ತಮ್ಮ ಟ್ರೇಡ್ ಮಾರ್ಕ್ ಪಂಚೆ ಮತ್ತು ಶಲ್ಯದಲ್ಲೇ.
ಹೌದು, ವಾಹನ ಓಡಿಸುವಾಗ ಹೊರತುಪಡಿಸಿ ಮಿಕ್ಕೆಲ್ಲಾ ಕಡೆ ಬರಿಗಾಲಿನಲ್ಲೇ ಪ್ರಯಾಣಿಸುತ್ತಾರೆ. ಪ್ರವಾಸದುದ್ದಕ್ಕೂ ಇವರ ಉಡುಗೆ ಪಂಚೆ ಮತ್ತು ಶಲ್ಯವೇ ಆಗಿರುತ್ತದೆ.

ಗಾಡಿ ಓಡಿಸುವಾಗ ಧಾರ್ಮಿಕ ಉಡುಪು
ನನಗೆ ಗಾಡಿ ಓಡಿಸುವಾಗಲೂ ಸಂಪೂರ್ಣ ಧಾರ್ಮಿಕ ಉಡುಪನ್ನು ಧರಿಸಿಯೇ ಮಾಡಬೇಕೆಂಬ ಹಂಬಲವಿದೆ. ಆದರೆ ಎಲ್ಲರ ಒತ್ತಾಯದ ಹಾಗೂ ನನ್ನ ರಕ್ಷೆಗೋಸ್ಕರ ಲೈಫ್ ಜಾಕೆಟ್ ಅನಿವಾರ್ಯ ಎಂದೆನಿಸಿದ ಕಾರಣ ಇಷ್ಟವಿಲ್ಲದಿದ್ದರೂ ಧರಿಸುತ್ತಿದ್ದೇನೆ ಎನ್ನುತ್ತಾರೆ ಶ್ಯಾಮಾಚಾರ್.

ಹೊರಗಿನ ಆಹಾರ ಸೇವನೆ ಇಲ್ಲ
ಇನ್ನೊಂದು ವಿಷಯವೆಂದರೇ ಇವರು ಎಲ್ಲಿಯೂ ಕೂಡ ಹೊರಗಿನ ಆಹಾರವನ್ನು ಸಹ ಸ್ವೀಕರಿಸದೇ ಕೇವಲ ದೇವಸ್ಥಾನಗಳಲ್ಲಿ ನೀಡುವ ನೈವೇದ್ಯವನ್ನು ಮಾತ್ರ ಸ್ವೀಕರಿಸುತ್ತಾರೆ. ಇಲ್ಲವಾದರೇ ಉಪವಾಸವೇ ಸರಿ. ಇನ್ನು ಏಕಾದಶಿಯ ದಿನವಂತೂ ನೀರು ಕುಡಿಯದೇ ಪ್ರವಾಸ ಮಾಡಿ ಸಾಧನೆ ಮಾಡಲು ಮುಂದಾಗುತ್ತಿದ್ದಾರೆ ಶ್ಯಾಮಾಚಾರ್ಯರು.

ದಿನಕ್ಕೆ 500 ಕಿ.ಮೀ ಪೂರೈಸುವ ಗುರಿ
ದಿನಕ್ಕೆ 500 ಕಿ.ಮೀ ಪೂರೈಸಬೇಕೆಂಬ ಗುರಿಯಿರುವ ಇವರು, ಈವರೆಗೂ ಸುಮಾರು 9 ಬಾರಿ ಬದರಿ ಯಾತ್ರೆಯನ್ನು ಮುಗಿಸಿ ಇದು 10 ನೇ ಬಾರಿ ಹೊರಟ್ಟಿದ್ದಾರೆ. ಪುರೋಹಿತರೆಂದರೇ ಮೂಗು ಮುರಿದು, ಅವರೆಂದರೇ ಹುಳಿ ಗೊಜ್ಜಿನವರು ಎಂದು ರಾಗವೆಳೆಯುವ ಅನೇಕರನ್ನು ನೋಡಿದ್ದೇನೆ. ಆದರೆ ನಾನು ಅವರಂತಾಗದೇ ಏನಾದರೂ ವಿಶೇಷ ಸಾಧನೆ ಮಾಡಲು ಮುಂದಾಗಿದ್ದೇನೆ ಎನ್ನುತ್ತಾರೆ ಶ್ಯಾಮಾಚಾರ್ಯರು.

ವರ್ಷದ ಹಿಂದಿನ ಯೋಜನೆ
ಇದು ನನ್ನ ಒಂದು ವರುಷದ ಹಿಂದಿನ ಯೋಜನೆ. ಅದಕ್ಕೆ ನನ್ನ ಸ್ನೇಹಿತರು ಹಾಗೂ ಶ್ರೀಪಾದ ರಾಯರ ಮಠದ ಯತಿಗಳು ಯಾತ್ರೆ ನಡೆಸುವಂತೆ ಪ್ರೇರೆಪಿಸಿದರು. ಆ ಹಿನ್ನೆಲೆ ಹೊರಟೆ. ಇದುವರೆಗೂ 6 ದಿನಗಳನ್ನು ಪೂರೈಸಿದ್ದೇನೆ ಯಾವುದೇ ತೊಂದರೆಯಾಗಿಲ್ಲ ಎಂದು ಸಂತಸದಿಂದಲೇ ನುಡಿಯುತ್ತಾರೆ.

ಸರ್ವರಿಗೂ ಒಳಿತಾಗಲಿ ಎಂದು ಯಾತ್ರೆ
ಕರ್ನಾಟಕದಲ್ಲಿಯುವ ಸರ್ವರಿಗೂ ಒಳಿತಗಲಿ ಎಂಬ ನಿಟ್ಟಿನಲ್ಲಿಯೇ ತೀರ್ಥಯಾತ್ರೆ ನಡೆಸುತ್ತಿರು ಇವರು ನಮ್ಮೆಲ್ಲರಿಗೂ ಮಾದರಿ. ಒಟ್ಟಾರೆ ನಮ್ಮಲ್ಲಿ ಪುರೋಹಿತರೆಂದರೇ ಏನು ಸಾಧ್ಯ, ಅವರೇನು ದೇವರ ಪೂಜೆಗಷ್ಟೇ ಸೀಮಿತ ಎನ್ನುವ ಯುವಕರೇ ಹೆಚ್ಚಿರುವಾಗ ಶ್ಯಾಮಾಚಾರ್ ರವರಂತಹ ಪುರೋಹಿತ ಸಾಧಕರು ಇದ್ದಾರೆ ಎಂಬುದನ್ನು ಗಮನಿಸಿ.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications