ಮೈಸೂರಿನ ಸಬ್ಹರ್ಬನ್ ಬಸ್ ನಿಲ್ದಾಣ ಸ್ಥಳಾಂತರ ಸಾಧ್ಯತೆ
ಮೈಸೂರು, ಡಿಸೆಂಬರ್ 14: ಜಿಲ್ಲೆಯ ವಿವಿಧ ತಾಲೂಕು ಸೇರಿದಂತೆ ಅಂತಾರಾಜ್ಯ ಬಸ್ಗಳು ಬಂದು ಹೋಗುವ ಮೈಸೂರಿನ ಸಬ್ಹರ್ಬನ್ ಬಸ್ ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಚಿಂತನೆ ನಡೆಸಲಾಗಿದೆ.
ಮೈಸೂರಿನ ಈ ಕೇಂದ್ರ ಬಸ್ ನಿಲ್ದಾಣವನ್ನು ಬನ್ನಿಮಂಟಪದ ಬಸ್ ಡಿಪೋಗೆ ಸ್ಥಳಾಂತರಿಸಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ ಎಂದು ವರದಿಗಳ ಬೆನ್ನಲ್ಲೇ ಈ ನಿರ್ಧಾರ ಮಾಡಲಾಗುತ್ತಿದೆ ಎಂದು ಹೇಳಿದೆ. ಸದ್ಯ ಮೈಸೂರಿನ ಈ ನಿಲ್ದಾಣದಿಂದ ನಿತ್ಯ 1,400ಕ್ಕೂ ಹೆಚ್ಚು ಬಸ್ಗಳು ಸಂಚರಿಸುತ್ತಿದ್ದು ಸ್ಥಳದ ಕೊರತೆಯಿಂದ ಬಸ್ಗಳ ನಿಲುಗಡೆಗೆ ಅವಕಾಶವಿಲ್ಲದಂತಾಗಿದೆ.

ಕಾರಣದಿಂದ ಪ್ರಸ್ತುತ ಬಸ್ ನಿಲ್ದಾಣವನ್ನು ಪರ್ಯಾಯ ವ್ಯವಸ್ಥೆಯಾಗಿ ಬನ್ನಿ ಮಂಟಪ ಬಸ್ ಡಿಪೋಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಲಾಗಿದೆ ಎನ್ನಲಾಗುತ್ತಿದೆ.
ಸ್ಥಳಾಂತರ ಏಕೆ?
ಸಬ್ಹರ್ಬನ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣವು ಮೈಸೂರಿನ ಕೇಂದ್ರ ಭಾಗದಲ್ಲಿದ್ದು, ಜಿಲ್ಲೆಯ ವಿವಿಧ ಊರುಗಳಿಗೆ ಮತ್ತು ತಾಲೂಕುಗಳಿಗೆ ಮತ್ತು ರಾಜ್ಯದ ಇತರ ಜಿಲ್ಲೆಗಳಿಗೆ ಹಾಗೂ ಅಂತರ-ರಾಜ್ಯ ಬಸ್ ಸೇವೆಗಳನ್ನು ಒದಗಿಸುತ್ತದೆ. ಸಾವಿರಾರು ಬಸ್ಗಳು ದಿನಗಟ್ಟಲೇ ಇಲ್ಲಿ ಬಂದು ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ.
ಈ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಏರುತ್ತಿರುವುದರಿಂದ ಪ್ಲಾಟ್ಫಾರ್ಮ್ಗಳ ಕೊರತೆ ಆಗುತ್ತಿದೆ. ಬಸ್ ನಿಲ್ದಾಣದಲ್ಲಿ ಹೆಚ್ಚು ಸಮಯ ನಿಲುಗಡೆ ಮಾಡಲು ಸ್ಥಳಾವಕಾಶ ಕೊರತೆಯಿಂದಾಗಿ ಕೆಎಸ್ಆರ್ಟಿಸಿ ಬಸ್ಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದಿದ್ದರೂ ಬಸ್ ನಿಲ್ದಾಣದಿಂದ ಹೊರಡಬೇಕಾದ ಅನಿವಾರ್ಯ ವಾತಾವರಣ ನಿರ್ಮಾಣವಾಗುತ್ತಿದೆ.
ಎಲ್ಲ ಬಸ್ಗಳಿಗೆ ಫ್ಲಾಟ್ ಫಾರಂಗಳಿಲ್ಲ:
ಇದು ಹೆಸರಿಗಷ್ಟೇ ಗ್ರಾಮೀಣ ಬಸ್ ನಿಲ್ದಾಣ ಎಂದು ಗುರುತಿಸಿಕೊಂಡಿದೆ. ಈ ಕೇಂದ್ರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಇನ್ನೂ ವಿವಿಧ ಗ್ರಾಮಗಳಿಗೆ ತೆರಳುವ ಬಸ್ ಗಳಿಗೆ ಪ್ಲಾಟ್ ಫಾರಂ ವ್ಯವಸ್ಥೆ ಕಲ್ಪಿಸಿಲ್ಲ. ಈ ಬಸ್ ನಿಲ್ದಾಣದಿಂದ ಜಿಲ್ಲೆಯ ವಿವಿಧ ಪಟ್ಟಣಗಳಿಗೆ ಕರ್ನಾಟಕ ಸಾರಿಗೆಯಿಂದ ಬಸ್ ವ್ಯವಸ್ಥೆ ಮಾಡಲಾಗಿದ್ದು, ಕೆಎಸ್ಆರ್ಟಿಸಿ ಬಸ್ಗಳಿಗೆ ನಿರ್ದಿಷ್ಟ ಪ್ಲಾಟ್ಫಾರ್ಮ್ಗಳನ್ನು ನಿರ್ಮಿಸದ ಕಾರಣ ಈ ಬಸ್ಗಳಿಗೆ ನಿಲ್ದಾಣದಲ್ಲಿ ಹೆಚ್ಚು ಸಮಯ ನಿಲ್ಲಲು ಅವಕಾಶವಿಲ್ಲ.
ಬಸ್ ನಿಲ್ದಾಣವು ಈ ಪಟ್ಟಣಗಳಿಗೆ ಸಂಚಾರವನ್ನು ನಡೆಸುತ್ತದೆ, ಆದ್ದರಿಂದ ಪ್ಲಾಟ್ಫಾರ್ಮ್ಗಳ ಕೊರತೆಯಿಂದಾಗಿ ಈ ಬಸ್ಗಳು ಬಸ್ ನಿಲ್ದಾಣದಲ್ಲಿ ದೀರ್ಘಕಾಲ ಉಳಿಯುತ್ತವೆ. ವಾಹನ ನಿಲುಗಡೆಗೆ ಅವಕಾಶವಿಲ್ಲ, ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಉದಾಹರಣೆಗೆ ಕೊಳ್ಳೇಗಾಲ, ಮಳವಳ್ಳಿ, ತುಮಕೂರಿಗೆ ಹೋಗುವ ಬಸ್ ಗಳಿಗೆ ಫ್ಲಾಟ್ ಫಾರಂಗಳಿಲ್ಲದ ಕಾರಣ ಗೋಡೆಯ ಪಕ್ಕದ ಜಾಗದಲ್ಲಿ ನಿಲ್ಲಿಸಿ ಜನರನ್ನು ಹತ್ತಿಸಿಕೊಳ್ಳಬೇಕಾಗಿದೆ.
ಅಲ್ಲದೆ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸ್ಥಳವಿಲ್ಲದೇ ಚಾಮರಾಜನಗರ ಭಾಗದಲ್ಲಿ ಸಂಚರಿಸುವ ಬಸ್ಗಳಿಗೆ ಕೇವಲ 2ರಿಂದ 3 ಬಸ್ಗಳಿಗೆ ಫ್ಲಾಟ್ ಫಾರಂ ಕಲ್ಪಿಸಲಾಗಿದೆ. 4ನೇ ಬಸ್ ಬಂದರೆ ನಗರದ ಪ್ರವೇಶ ದ್ವಾರದ ಬಳಿ ರಸ್ತೆಯಲ್ಲೇ ನಿಲ್ಲಬೇಕು. ಇದರಿಂದ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಗಳಲ್ಲಿ ಆಗಾಗ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಟ್ರಾಫಿಕ್ ಜಾಮ್ ಹೆಚ್ಚಾಗಿ ಆಗುತ್ತಿದೆ.
56 ಎಕರೆ ಬಸ್ ಡಿಪೋಗೆ ಸ್ಥಳಾಂತರ?
ಮೈಸೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಜಾಗದ ಕೊರತೆ ಇದ್ದು, ಪರ್ಯಾಯವಾಗಿ ಬನ್ನಿಮಂಟಪದ ಬಳಿ ಇರುವಂತಹ ಬಸ್ ಡಿಪೋಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಬನ್ನಿಮಂಟಪದ ಬಳಿ 56 ಎಕರೆ ವಿಶಾಲ ಪ್ರದೇಶದಲ್ಲಿ ಬಸ್ ಡಿಪೋ ನಿರ್ಮಿಸಲಾಗಿದೆ. ಕೇಂದ್ರೀಯ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ಸೂಕ್ತವಾದ ಆಯ್ಕೆಯಾಗಿದೆ, ಆದರೆ ಇದು ಪ್ರಸ್ತುತ ಬಸ್ ನಿಲ್ದಾಣದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ, ಆದ್ದರಿಂದ ಸಿಟಿ ಬಸ್ ನಿಲ್ದಾಣ ಮತ್ತು ಕೇಂದ್ರ ಬಸ್ ನಿಲ್ದಾಣದ ನಡುವಿನ ಅಂತರವನ್ನು ಹೆಚ್ಚಿಸಲಾಗುವುದು ಇದು ಪ್ರಯಾಣಿಕರಿಗೆ ಸ್ವಲ್ಪ ಹೊರೆಯಾಗಬಹುದು.
ಪ್ರಸ್ತುತ ನಿಲ್ದಾಣ ಬಳಕೆ ಹೇಗೆ?
ಒಂದು ವೇಳೆ ಬನ್ನಿಮಂಟಪ ಬಳಿ ಇರುವ ಡಿಪೋಗೆ ಬಸ್ ನಿಲ್ದಾಣ ಸ್ಥಳಾಂತರಿಸಿದರೆ ಈಗಿರುವ ನಿಲ್ದಾಣವನ್ನು ಬೆಂಗಳೂರು-ಮೈಸೂರು ನಡುವಿನ ಮಾರ್ಗಕ್ಕೆ ಮಾತ್ರ ಪ್ರಸ್ತುತ ನಿಲ್ದಾಣದಲ್ಲಿ ಬಸ್ ನಿಲ್ದಾಣ ಸೇವೆ ಒದಗಿಸಬೇಕು ಎಂದು ಈಗಾಗಲೇ ಸೂಚಿಸಲಾಗಿದೆ.












Click it and Unblock the Notifications