ಮೈಸೂರು : ಮತ್ತೊಂದು ರೈಲ್ವೆ ಟಿಕೆಟ್ ಕೌಂಟರ್ ಆರಂಭ
ಮೈಸೂರು, ಜ. 9 : ಮೈಸೂರಿನಲ್ಲಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ರೈಲ್ವೆ ಇಲಾಖೆ ಕಂಪ್ಯೂಟರೀಕೃತ ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್ಅನ್ನು ಆರಂಭಿಸಿದೆ. ಸದ್ಯ, ನಗರದಲ್ಲಿ ಒಟ್ಟು 3 ಮುಂಗಡ ಟಿಕೆಟ್ ಕೇಂದ್ರಗಳು ಇವೆ.
ಶಿವಾಜಿ
ರಸ್ತೆಯ
ಎನ್.ಆರ್.ಮೊಹಲ್ಲಾ
ಅಂಚೆ
ಕಚೇರಿಯಲ್ಲಿ
ನೂತನ
ಮುಂಗಡ
ಟಿಕೆಟ್
ಕೌಂಟರ್
ಶುಕ್ರವಾರ
ಆರಂಭಗೊಂಡಿದೆ.
ತತ್ಕಾಲ್
ಸೇರಿದಂತೆ
ಎಲ್ಲಾ
ಬಗೆಯ
ಮುಂಗಡ
ಟಿಕೆಟ್ಗಳನ್ನು
ಈ
ಕೇಂದ್ರದಿಂದ
ಬುಕ್
ಮಾಡಬಹುದಾಗಿದೆ.
[ರೈಲ್ವೆ
ಇಲಾಖೆಯ
5
ಹೊಸ
ಯೋಜನೆಗಳು
ಯಾವವು?]
ಸರ್ಕಾರಿ ರಜಾ ದಿನ ಮತ್ತು ಭಾನುವಾರ ಹೊರತುಪಡಿಸಿ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪ್ರತಿದಿನ ಈ ಕೇಂದ್ರ ಕಾರ್ಯನಿರ್ವಹಿಸಲಿದೆ. ನೂತನ ಕೇಂದ್ರ ಉದ್ಘಾಟನೆಯಿಂದ ನಗರದ ಜನರಿಗೆ ಟಿಕೆಟ್ ಬುಕ್ ಮಾಡಲು ಮತ್ತಷ್ಟು ಅನುಕೂಲವಾಗಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. [ಮೈಸೂರು-ವಾರಣಾಸಿ-ಮೈಸೂರು ರೈಲು ವೇಳಾಪಟ್ಟಿ]
ಈ ಕೇಂದ್ರದಲ್ಲಿ ಟಿಕೆಟ್ ಬುಕ್ ಮಾಡಿಸಿದರೆ ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ. ದ್ವಿತೀಯ ದರ್ಜೆಗೆ ರೂ.15, 3ಎ ಟಿಕೆಟ್ಗಳಿಗೆ 20 ಮತ್ತು 2ಎ ಟಿಕೆಟ್ಗಳಿಗೆ 30 ರೂ. ಸೇವಾ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ನರೇಗಾದಲ್ಲಿ 2 ಲಕ್ಷ ವಂಚನೆ : ಕೊಳ್ಳೇಗಾಲ ತಾಲೂಕು ಪಿಜಿ ಪಾಳ್ಯ ಗ್ರಾಮ ಪಂಚಾಯಿತಿಯ ಇಬ್ಬರು ಅಧ್ಯಕ್ಷರು, ಇಬ್ಬರು ಅಧಿಕಾರಿಗಳು ಸೇರಿಕೊಂಡು ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಕಾಯ್ದೆಯಲ್ಲಿ 2.47 ಲಕ್ಷ ರೂ. ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ನಾಲ್ವರ ವಿರುದ್ಧವೂ ಶಿಸ್ತುಕ್ರಮ ಕೈಗೊಂಡು, ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಶಿಫಾರಸು ಮಾಡಲಾಗಿದೆ.