ಮೈಸೂರಿನಲ್ಲಿ ಆಗಷ್ಟೇ ಹುಟ್ಟಿದ ಕೂಸನ್ನು ಮೋರಿಗೆಸೆದ ದುರುಳರು
ಮೈಸೂರು, ಜೂನ್ 13 : ಆಗ ತಾನೇ ಜನಿಸಿದ ಮಗುವನ್ನು ಚರಂಡಿಯಲ್ಲಿ ಬಿಸಾಡಿ ಹೋದ ಅಮಾನವೀಯ ಘಟನೆ ಮೈಸೂರಿನ ಎಚ್.ಡಿ.ಕೋಟೆಯ ಕೆಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜನಿಸಿ ಕೆಲವೇ ಗಂಟೆಗಳಾಗಿದ್ದ ಹಸುಗೂಸನ್ನು ಅನಾಮಿಕರು ಮೋರಿಗೆಸೆದು ಪರಾರಿಯಾಗಿದ್ದಾರೆ.
ಕವರ್ ನಲ್ಲಿ ಮಗುವನ್ನು ಕಟ್ಟಿ ಎಸೆದು ಹೋದ ಪರಿಣಾಮ ಹಸುಗೂಸು ಸಾವನ್ನಪ್ಪಿದೆ. ಸ್ಥಳೀಯರ ಸಹಾಯದಿಂದ ಪೊಲೀಸರು ಮಗುವಿನ ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆ ಸಂಬಂಧ ಬೀಚನಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಕ್ರಮ ಸಂಬಂಧದ ಹಿನ್ನೆಲೆ ಮಗು ಜನಿಸಿದ ಶಂಕೆ ವ್ಯಕ್ತಪಡಿಸಿದ್ದು, ಹೀಗಾಗಿ ಮೋರಿಗೆ ಬಿಸಾಡಿ ಹೋಗಿದ್ದಾರೆ ಎಂಬ ಅನುಮಾನ ಮೂಡಿದೆ.












Click it and Unblock the Notifications