ದಸರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸೋಕೆ ಅರ್ಜಿ ಸಲ್ಲಿಸಿ
ಮೈಸೂರು, ಆಗಸ್ಟ್ 30: ಮೈಸೂರು ದಸರಾ ಮಹೋತ್ಸವ 2017ರ ಅಂಗವಾಗಿ ಸೆಪ್ಟೆಂಬರ್ 21 ರಿಂದ 29 ರವರೆಗೆ ದಸರಾ ಸಾಂಸ್ಕೃತಿಕ ಉಪಸಮಿತಿಯ ವತಿಯಿಂದ ಮೈಸೂರಿನ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ಶಾಸ್ತ್ರೀಯ ಸಂಗೀತ ಹಾಗೂ ವಿವಿಧ ಸಂಗೀತ ಕಲಾಪ್ರಕಾರಗಳು (ಹಿಂದೂಸ್ತಾನಿ, ಸುಗಮ, ಜಾನಪದ, ವಾದ್ಯಸಂಗೀತ ಹಾಗೂ ಇನ್ನಿತರ), ಶಾಸ್ತ್ರೀಯ ನೃತ್ಯ ಪ್ರಕಾರಗಳು, ನೃತ್ಯ ರೂಪಕ ಹಾಗೂ ನೃತ್ಯದ ವಿವಿಧ ಕಲಾಪ್ರಕಾರಗಳು, ಜಾನಪದ ನೃತ್ಯ ಕಲಾಪ್ರಕಾರಗಳು, ಹರಿಕಥೆ, ಗಮಕ, ಸಾಮಾಜಿಕ, ಪೌರಾಣಿಕ, ಹಾಸ್ಯ ನಾಟಕಗಳು, ಯಕ್ಷಗಾನ, ತಾಳಮದ್ದಳೆ, ಸೂತ್ರದಗೊಂಬೆ, ತೊಗಲುಗೊಂಬೆ ಕಲಾಪ್ರಕಾರಗಳಲ್ಲಿ ಅನುಭವವಿರುವ ಕಲಾವಿದರುಗಳು ಅರ್ಜಿ ಸಲ್ಲಿಸಬಹುದು.

ಆಸಕ್ತರು ಸೆಪ್ಟೆಂಬರ್ 2 ರಂದು ಸಂಜೆ 5 ಗಂಟೆಯೊಳಗೆ ಸ್ವವಿವರವುಳ್ಳ ಅರ್ಜಿ ದಾಖಲೆಗಳನ್ನು ಕಾರ್ಯದರ್ಶಿ ಹಾಗೂ ಸಹಾಯಕ ನಿರ್ದೇಶಕರು, ಸಾಂಸ್ಕೃತಿಕ ಉಪಸಮಿತಿ, ದಸರಾ ಮಹೋತ್ಸವ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಕಲಾಮಂದಿರ, ಮೈಸೂರು ಇಲ್ಲಿ ಹಾಜರಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2513225 ನ್ನು ಸಂಪರ್ಕಿಸುವುದು.
ಆಹಾರ ಮೇಳದಲ್ಲೂ ಕಾರ್ಯಕ್ರಮ ನೀಡಲು ಅವಕಾಶ
ವಿಶ್ವ ವಿಖ್ಯಾತ ದಸರಾ ಮಹೋತ್ಸವ 2017ರ ಅಂಗವಾಗಿ ನಡೆಯುವ ಜನಪ್ರಿಯ ಆಹಾರ ಮೇಳಕ್ಕೆ ಆಗಮಿಸುವ ಭೋಜನ ಪ್ರಿಯರಿಗಾಗಿ ಪ್ರತಿ ದಿನ ಸಂಜೆ 5 ರಿಂದ ರಾತ್ರಿ 10 ಗಂಟೆಯವರೆಗೆ ಜಾನಪದ ಕಲೆಗಳು, ಸಂಗೀತ, ಆರ್ಕೆಸ್ಟ್ರಾಗಳು, ಫ್ಯೂಜನ್ ಬ್ಯಾಂಡ್ಗಳು, ಶಾಸ್ತ್ರೀಯ ನೃತ್ಯ, ನೃತ್ಯರೂಪಕ, ಸಮಕಾಲಿನ ನೃತ್ಯಗಳು, ಯಕ್ಷಗಾನ ಮತ್ತು ಮ್ಯಾಜಿಕ್, ಘಝಲ್, ಖವಾಲಿ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಾಲಾ, ಕಾಲೇಜುಗಳೂ ಸಹ ಭಾಗವಹಿಸಬಹುದು. ಅರ್ಹ ಕಲಾವಿದರುಗಳು ತಮ್ಮ ಕಲಾಪ್ರತಿಭೆ ಮತ್ತು ಅನುಭವಗಳ ವಿವರಗಳೊಂದಿಗೆ ಮನವಿಯನ್ನು ಸೆಪ್ಟೆಂಬರ್ 5 ರೊಳಗೆ ನೇರವಾಗಿ/ ಅಂಚೆ ಮೂಲಕ ಅಥವಾ ಇ-ಮೇಲ್ ಮೂಲಕ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಡಾ.ಕೆ. ರಾಮೇಶ್ವರಪ್ಪ, ಹಿರಿಯ ಉಪನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಕಾರ್ಯಾಧ್ಯಕ್ಷರು, ಆಹಾರ ಮೇಳ, ಜಿಲ್ಲಾಧಿಕಾರಿಗಳ ಕಚೇರಿ, ಮೈಸೂರು ದೂರವಾಣಿ ಸಂಖ್ಯೆ 0821-2422107, ಮೊಬೈಲ್ ಸಂಖ್ಯೆ 9611165967, ಹೆಚ್.ಕೆ. ರಾಮು, ಸಹಾಯಕ ನಿರ್ದೇಶಕರು, ಅನೌಪಚಾರಿಕ ಪಡಿತರ ಪ್ರದೇಶ, ಮೈಸೂರು ನಗರ ಮೊಬೈಲ್ ಸಂಖ್ಯೆ 9448051793 ನ್ನು ಸಂಪರ್ಕಿಸಬಹುದು
-
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications