ದಸರಾ ಆನೆಗಳಿಗೆ ತೂಕ ಪರೀಕ್ಷೆ: ನಂಬರ್ 1 ಸ್ಥಾನ ಕಾಯ್ದುಕೊಂಡ ಮಾಜಿ ಕ್ಯಾಪ್ಟನ್ ಅರ್ಜುನ
ಮೈಸೂರು, ಸೆಪ್ಟೆಂಬರ್, 29: ಮೈಸೂರು ದಸರಾ 2023 ಜಂಬೂ ಸವಾರಿಯ ಆನೆಗಳ ತೂಕ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಮಾಜಿ ಕ್ಯಾಪ್ಟನ್ ಅರ್ಜುನ ಆನೆ ತೂಕದಲ್ಲಿ ನಂಬರ್ ಒನ್ ಸ್ಥಾನ ಕಾಯ್ದುಕೊಂಡಿದ್ದು, 5600 ಕೆ.ಜಿ. ಇದ್ದಾನೆ ಎಂದು ತಿಳಿದುಬಂದಿದೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ನಲ್ಲಿ 14 ದಸರಾ ಆನೆಗಳಿಗೆ ತೂಕ ಪರೀಕ್ಷೆ ನಡೆಯಿತು. 5,300 ಕೆ.ಜಿ ತೂಕ ಇದ್ದ ಅಭಿಮನ್ಯು ಮೊದಲ ಹಂತದ ಆನೆಗಳ ತಂಡದಲ್ಲಿ ಹೆಚ್ಚು ತೂಕವಂತನಾಗಿದ್ದ. ಆದರೆ, ಎರಡನೇ ಹಂತದಲ್ಲಿ ಎಲ್ಲಾ ದಸರಾ ಆನೆಗಳ ತೂಕ ಹಾಕುವ ಪ್ರಕ್ರಿಯೆಯಲ್ಲಿ ಅರ್ಜುನ (5,600 ಕೆ.ಜಿ) ಮೊದಲ ಸ್ಥಾನ ಪಡೆದಿದ್ದಾನೆ.

"ನಿಯಮಾನುಸಾರ ಜಂಬೂ ಸವಾರಿ ಯಶಸ್ವಿಗೊಳಿಸುವ ಆನೆಗಳಿಗೆ ವಿಶೇಷ ಪೋಷಣೆ, ಆರೈಕೆ ಹಾಗೂ ಆಹಾರ ನೀಡಿದ್ದರಿಂದ ಮೊದಲ ತಂಡದ ಆನೆಗಳ ತೂಕ ಹೆಚ್ಚಾಗಿದೆ. ಭೀಮ 315 ಕೆ.ಜಿ ಹೆಚ್ಚಿಸಿಕೊಂಡಿದ್ದಾನೆ. ಎರಡನೇ ತಂಡದ ಆನೆಗಳಿಗೆ ಅರಮನೆ ಆವರಣದಲ್ಲಿಯೇ ತಾಲೀಮು ನಡೆಸಲಾಗುತ್ತಿದೆ" ಎಂದು ಡಿಸಿಎಫ್ ಸೌರಭ್ ಕುಮಾರ್ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಆಗಮಿಸಿದ ಆನೆಗಳಿಗೆ 20 ದಿನದ ಹಿ೦ದೆ ತೂಕ ಪರೀಕ್ಷೆನಡೆಯಿತು. ಆಗ 5,160 ಕೆ.ಜಿ. ಭಾರವಿದ್ದ ಅಭಿಮನ್ಯು ಇದೀಗ 140 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದಾನೆ. ಹೀಗೆ ಅರಣ್ಯ ಇಲಾಖೆ ನೀಡುತ್ತಿರುವ ವಿಶೇಷ ಪೋಷಣೆಯಿಂದಾಗಿ ಮೊದಲ ತಂಡದ ಆನೆಗಳು ಸರಾಸರಿ 55ರಿಂದ 315 ಕೆ.ಜಿ ವರೆಗೂ ತೂಕ ಹೆಚ್ಚಿಸಿಕೊಂಡಿವೆ.
ಹೆಚ್ಚಿಸಿಕೊಂಡವರಲ್ಲಿ ಭೀಮನೇ (315 ಕೆ.ಜಿ ತೂಕ) ಮೊದಲ ಸ್ಥಾನದಲ್ಲಿದ್ದಾನೆ. ಕಳೆದ ಬಾರಿ 395 ಕೆ.ಜಿ ಹೆಚ್ಚಿಸಿಕೊಂಡಿದ್ದನು. ಗೋಪಿ 5,145 ಕೆ.ಜಿ, ಧನಂಜಯ 4,990 ಕೆ.ಜಿ, ಮಹೇಂದ್ರ 4,665, ಕೆ.ಜಿ ತೂಕ ಹೊಂದಿವೆ. 2ನೇ ತಂಡದಲ್ಲಿ ಆಗಮಿಸಿದ 5 ಆನೆಗಳಲ್ಲಿ ಸುಗ್ರೀವ ಹೆಚ್ಚು ತೂಕ ಹೊಂದಿದ್ದಾನೆ. ತೂಕ ಪರೀಕ್ಷೆಯಲ್ಲಿ 5,035 ಕೆ.ಜಿ. (ಕಳೆದ ವರ್ಷ 4,785 ಕೆಜಿ) ತೂಗಿದ್ದಾನೆ. ಪ್ರಶಾಂತ 4,970 ಕೆ.ಜಿ, ಲಕ್ಷ್ಮಿ 3,295 ಕೆ.ಜಿ, ರೋಹಿತ್ 3,350 ಹಾಗೂ ಹಿರಣ್ಯ 2,915 ಕೆ.ಜಿ ತೂಕ ಹೊಂದಿವೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications