Get Updates
Get notified of breaking news, exclusive insights, and must-see stories!

Mysuru: ಸ್ವಚ್ಛನಗರ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಪಡೆಯಲು ಪಣತೊಟ್ಟ ಮೈಸೂರು

ಮೈಸೂರು, ಫೆಬ್ರವರಿ 13: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರತಿ ವರ್ಷದಂತೆ ಈ ಬಾರಿಯೂ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆ ನಡೆಸುತ್ತಿದ್ದು, ಇದೇ ಫೆ.15ರಿಂದ ದೇಶದ ಎಲ್ಲಾ ನಗರಗಳಲ್ಲೂ ನಡೆಯಲಿದೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಮೈಸೂರು ಮಹಾನಗರ ಪಾಲಿಕೆಯು ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೊದಲ ಐದು ಸ್ವಚ್ಛ ನಗರಗಳಲ್ಲಿ ಸ್ಥಾನ ಪಡೆಯಲು ಪಣತೊಟ್ಟಿದ್ದು, ಈ ಸಂಬಂಧ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಲ್ವರನ್ನು ಸ್ವಚ್ಛತಾ ರಾಯಭಾರಿಗಳನ್ನಾಗಿ ನೇಮಕ ಮಾಡಿ ಗಮನಸೆಳೆದಿದೆ.

ಸಾಮಾಜಿಕ ಜಾಲತಾಣದ ಇನ್ ಫ್ಲುಯನ್ಸರ್ ಆಗಿರುವ ಎ.ಎಸ್.ಧರ್ಮೇಂದ್ರ, ಸಿನಿಮಾ ನಟಿ ಅಮೃತಾ ಅಯ್ಯಂಗಾರ್, ಪರ್ವತಾರೋಹಿ ಡಾ. ಉಷಾ ಹೆಗಡೆ ಹಾಗೂ ಅಂತಾರಾಷ್ಟ್ರೀಯ ಖೋ-ಖೋ ಪಟು ಬಿ.ಚೈತ್ರಾ ಅವರನ್ನು ಸ್ವಚ್ಛತಾ ರಾಯಭಾರಿಗಳನ್ನಾಗಿ ಮೈಸೂರು ಮಹಾನಗರ ಪಾಲಿಕೆಯು ನೇಮಕ ಮಾಡಿದ್ದು, ಸ್ವಚ್ಛತೆ ಕುರಿತಂತೆ ರಾಯಭಾರಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅರಿವು ಮೂಡಿಸಲಿದ್ದಾರೆ.

Mysuru Aims for Top 5 Position in Swachh Survey 2024

ಈ ಬಾರಿಯ ಸ್ವಚ್ಛತಾ ಸಮೀಕ್ಷೆಯಲ್ಲಿ ಮೈಸೂರು ನಗರ ಮೊದಲ 5 ಸ್ಥಾನಗಳ ಪೈಕಿ ಒಂದು ಸ್ಥಾನ ಪಡೆಯಲು ಪಣ ತೊಟ್ಟಿದ್ದು, ಅದಕ್ಕಾಗಿ ಹತ್ತಾರು ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶ ಹೊಂದಲಾಗಿದೆ. ಈ ಹಿನ್ನಲೆಯಲ್ಲಿ ನಾಲ್ವರು ಸಾಧಕರನ್ನು ಸ್ವಚ್ಛತಾ ರಾಯಬಾರಿಗಳನ್ನಾಗಿ ನೇಮಕ ಮಾಡಿಕೊಂಡಿದೆ. ಬೇರೆಡೆಗೆ ಹೋಲಿಸಿದರೆ ಸ್ವಚ್ಛತೆ ವಿಚಾರದಲ್ಲಿ ಈಗಾಗಲೇ ಮೈಸೂರು ದೇಶದ ಗಮನಸೆಳೆದಿದೆ ಆದರೂ ಈ ಬಾರಿ ಮೊದಲ ಸ್ಥಾನ ಪಡೆಯುವ ಮೂಲಕ ದೇಶದ ಗಮನಸೆಳೆಯ ಬೇಕೆಂದು ಉದ್ದೇಶಿಸಲಾಗಿದೆ.

ಈ ಕುರಿತಂತೆ ಮಾತನಾಡಿರುವ ಪಾಲಿಕೆ ಆಯುಕ್ತ ಶಾಹಿದ್ ತನ್ವೀರ್ ಆಸೀಫ್ ಅವರು, 2014ರಿಂದ ದೇಶದಲ್ಲಿ ಆರಂಭವಾದ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು ನಗರ ಸ್ವಚ್ಛ ನಗರವಾಗಿ ಅಗ್ರ ಸ್ಥಾನ ಪಡೆದುಕೊಂಡಿತ್ತು. ಆದರೆ, ಕಳೆದ ವರ್ಷ ಮೈಸೂರು ನಗರಕ್ಕೆ 24ನೇ ಸ್ಥಾನ ಲಭಿಸಿದೆ.

Mysuru Aims for Top 5 Position in Swachh Survey 2024

ಈ ಹಿನ್ನೆಲೆಯಲ್ಲಿ 2024-25ನೇ ಸಾಲಿನ ಸ್ವಚ್ಛ ನಗರ ಸಮೀಕ್ಷೆಯಲ್ಲಿ ಮೈಸೂರು ನಗರ ಟಾಪ್ 5ರಲ್ಲಿ ಸ್ಥಾನ ಪಡೆಯಬೇಕು ಎನ್ನುವುದು ಬಯಕೆಯಾಗಿದೆ. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಲ್ಲದೆ ಈ ಕಾರ್ಯದಲ್ಲಿ ಮೈಸೂರು ನಗರದ ಕೈಜೋಡಿಸಿ ಸ್ವಚ್ಛತೆಗೆ ಒತ್ತು ನೀಡುವ ಮೂಲಕ ಪಾಲಿಕೆಗೆ ಅಗತ್ಯ ಸಲಹೆ, ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಮೈಸೂರನ್ನು ಸ್ವಚ್ಛ ನಗರವನ್ನಾಗಿ ಮಾಡಲು ಸಹಕಾರಿಯಾಗುವಂತೆ ನಾಲ್ವರು ಸಾಧಕರನ್ನು ಸ್ವಚ್ಛತಾ ರಾಯಭಾರಿಗಳನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಇವರ ಮೂಲಕ ಜನರಲ್ಲಿ ಸ್ವಚ್ಛತೆ ಬಗ್ಗೆ, ಪ್ಲಾಸ್ಟಿಕ್ ಬಳಕೆ ಬಗ್ಗೆ ಅರಿವು ಕಾರ್ಯಕ್ರಮ ನಡೆಸಲಾಗುವುದು. ಇವರಿಂದ ಸಾಮಾಜಿಕ ಜಾಲತಣದಲ್ಲಿ ಸ್ವಚ್ಛತೆ ಸಂಬಂಧ ಜನರಲ್ಲಿ ಜಾಗೃತಿ ಉಂಟು ಮಾಡುವ ಸಂದೇಶ ನೀಡಲಾಗುವುದು ಎಂದು ಹೇಳಿದ್ದಾರೆ.

ಇದೇ ಸಂದರ್ಭ 2024ರ ಸಾಲಿನಲ್ಲಿ ಸ್ವಚ್ಛತೆಗಾಗಿ ದುಡಿದ ಏಳು ಮಂದಿ ಸ್ವಚ್ಛತಾ ಚಾಂಪಿಯನ್ ಗಳಾದ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಹಿರಿಯ ಪ್ರಾಧ್ಯಾಪಕಿ ಡಾ.ಸಪ್ನಾ, ಲೀಲಾ ವೆಂಕಟೇಶ್, ಡಾ.ಪಿ.ಎಸ್.ಮಧುಸೂಧನ್, ಡಾ.ಅಜಯ್ ಕುಮಾರ್ ಜೈನ್, ಎನ್.ರಾಘವನ್ ಸೈಯದ್ ಅಬ್ದುಲ್ ಅಜೀಜ್, ಅಮೂಲ್ಯ ಅವರುಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ಮುಕ್ತ ಮೈಸೂರು ನಗರ ಪಾಲಿಕೆ ಮಾಡುವ ಸಂಬಂಧ ಪಾಲಿಕೆ ನಡೆಸುವ ಸೈಕಲ್ ಜಾಥಾ, ಜಾಗೃತಿ ನಡಿಗೆ, ಕ್ಲೀನಿಂಗ್ ಡ್ರೈವ್ ಹಾಗೂ ಇತರೆ ಅರಿವು ಕಾರ್ಯಕ್ರಮಗಳಲ್ಲಿ ನಗರದ ನಿವಾಸಿಗಳು ಸ್ವಯಂ ಪ್ರೇರಿತವಾಗಿ ಭಾಗವಹಿಸಲು ಕ್ಯೂ ಆರ್ ಕೋಡ್ ಬಿಡುಗಡೆ ಮಾಡಲಾಯಿತು. ಆಸಕ್ತರು ಸ್ವಯಂ ಸೇವಕರಾಗಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಭಾಗವಹಿಸಲು ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಈ ವೇಳೆ ಪಾಲಿಕೆ ಕಂದಾಯ ಉಪ ಆಯುಕ್ತ ಸೋಮಶೇಖರ್ ಜಿಗಣಿ, ಪಾಲಿಕೆ ಆರೋಗ್ಯಾಧಿಕಾರಿ ಡಾ.ಎನ್.ವೆಂಕಟೇಶ್ ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+