ಲಾಕ್‌ಡೌನ್‌: ಕೇವಲ 15 ನಿಮಿಷ ಕೆಲಸ; ಅಧಿಕಾರಿಣಿಗೆ ಶೋಕಾಸ್ ನೋಟೀಸ್

ಮೈಸೂರು,

ಏ.
27:
ಕೊರೊನಾ
ವೈರಸ್
ಸೋಂಕಿಗೆ
ರಾಜ್ಯದಲ್ಲಿ
ಈಗಾಗಲೇ
19
ಜನರು
ಬಲಿಯಾಗಿದ್ದಾರೆ.
ರಾಜ್ಯದಲ್ಲಿ
ಸೋಂಕಿತರ
ಸಂಖ್ಯೆ
513ಕ್ಕೆ
ಏರಿಕೆಯಾಗಿದೆ.
ಲಾಕ್‌ಡೌನ್‌
ಸಂದರ್ಭದಲ್ಲಿ
ಸರ್ಕಾರಿ
ಸಿಬ್ಬಂದಿ
ಜೀವದ
ಹಂಗು
ತೊರೆದು
ಕೆಲಸ
ಮಾಡುತ್ತಿದ್ದಾರೆ.
ಸಂದರ್ಭದಲ್ಲಿ
ಇಡೀ
ಪೊಲೀಸ್
ವ್ಯವಸ್ಥೆಯ
ಮಾನವೀಯ
ಮುಖ
ತೆರೆದು
ಕೊಂಡಿದೆ.
ಸ್ವತಃ
ಪ್ರಧಾನಿ
ನರೇಂದ್ರ
ಮೋದಿ
ಅವರು
ಪೊಲೀಸ್
ಸಿಬ್ಬಂದಿಯ
ಸೇವಾ
ಮನೋಭಾವನೆಯನ್ನು
ಕೊಂಡಾಡಿದ್ದಾರೆ.
ಸರ್ಕಾರದ
ವಿವಿಧ
ಇಲಾಖೆಗಳ
ಅಧಿಕಾರಿಗಳು
ಕೂಡ
ಕಳೆದ
ಒಂದೂವರೆ
ತಿಂಗಳಿನಿಂದ
ತಮ್ಮ
ಮನೆ,
ಮಕ್ಕಳನ್ನು
ಮರೆತು
ಕೆಲಸ
ಮಾಡುತ್ತಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

ಆದರೆ

ಇಂತಹ
ಸಂದರ್ಭದಲ್ಲಿಯೂ
ಅಧಿಕಾರಿಣಿಯೊಬ್ಬರು
ಬೇಜವಾಬ್ದಾರಿ
ಮೆರೆದಿದ್ದಾರೆ.
ಕೊರೊನಾ
ಸಂಕಷ್ಟದಲ್ಲಿ
ವೈದ್ಯರಿಗೆ
ಆಹಾರ
ಸರಬರಾಜು
ಮಾಡುವ
ಕೆಲಸಕ್ಕೆ
ನಿಯೋಜನೆಯಾಗಿದ್ದ
ಮೈಸೂರಿನ
ಸಮಾಜ
ಕಲ್ಯಾಣ
ಇಲಾಖೆಯ
ಜಿಲ್ಲಾ
ಅಧಿಕಾರಿಯೊಬ್ಬರು
ತುರ್ತಿನ
ಸಂದರ್ಭದಲ್ಲಿ
ಕೇವಲ
15
ನಿಮಿಷಗಳ
ಕಾಲ
ಕೆಲಸ
ಮಾಡಿದ್ದಾರೆ.

id='are-slot-2'
class='oiad
oi-axt
oiadv'>

ಲಾಕ್‌ಡೌನ್‌ ಜಾರಿಯಾದಾಗಿನಿಂದ ಕೆಲಸಕ್ಕೆ ಗೈರು

ಲಾಕ್‌ಡೌನ್‌ ಜಾರಿಯಾದಾಗಿನಿಂದ ಕೆಲಸಕ್ಕೆ ಗೈರು

ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಅವರು ಹಿಂದುಳಿದ ವರ್ಗಗಳ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿಂದಿಯಾ ಅವರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಿದ್ದಾರೆ. ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಬದಲಿಸಿ, ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಹಾಗೂ ದಾಖಲಾದ ರೋಗಿಗಳಿಗೆ ಸರಿಯಾದ ಸಮಯದಲ್ಲಿ ಆಹಾರ ಸರಬರಾಜು ಮಾಡುವುದು, ಆಹಾರದ ತ್ಯಾಜ್ಯವನ್ನು ಸೋಂಕು ಹರಡದ ರೀತಿಯಲ್ಲಿ ವಿಲೇವಾರಿ ಮಾಡಲು ನಿಯೋಜಿಸಲಾಗಿತ್ತು.

ವಿಪತ್ತು ನಿರ್ವಹಣಾ ಕಾಯ್ದೆಯಡಿ ನೋಟೀಸ್

ವಿಪತ್ತು ನಿರ್ವಹಣಾ ಕಾಯ್ದೆಯಡಿ ನೋಟೀಸ್

ಕರ್ನಾಟಕ ಸಾಂಕ್ರಾಮಿಕ ರೋಗಗಳು ಕೋವಿಡ್19 ರೆಗ್ಯುಲೇಷನ್ 2020 ನಿಯಮ‌ 12 ರಲ್ಲಿ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ಕಲಂ24 ಮತ್ತು 34 (h) ಮತ್ತು(m) ಅಡಿಯಲ್ಲಿ ಜಿಲ್ಲಾ ಅಧಿಕಾರಿಯಾಗಿ ಕೋವಿಡ್19 ಜಿಲ್ಲಾ ಆಸ್ಪತ್ರೆಗೆ ಕರ್ತವ್ಯಕ್ಕೆ ಬಿಂದಿಯಾ ಅವರು ನೇಮಕವಾಗಿದ್ದರು. ನೋಟೀಸ್ ತಲುಪಿದ 24 ಗಂಟೆಗಳಲ್ಲಿ ಲಿಖಿತ ಸಮಜಾಯಿಷಿ ಕೊಡಬೇಕು, ಕೊಡದೇ ಇದ್ದರೆ ನಿಮ್ಮ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಎಚ್ಚರಿಕೆ ಕೊಟ್ಟಿದ್ದಾರೆ.

ಮಾರ್ಚ್‌ 30 ರಂದು ಕೇವಲ 15 ನಿಮಿಷಗ ಆಸ್ಪತ್ರೆಗೆ ಭೇಟಿ

ಮಾರ್ಚ್‌ 30 ರಂದು ಕೇವಲ 15 ನಿಮಿಷಗ ಆಸ್ಪತ್ರೆಗೆ ಭೇಟಿ

ಲಾಕ್‌ಡೌನ್‌ ಜಾರಿಯಾದಾಗಿನಿಂದ ಈವರೆಗೆ ಕೇವಲ 15 ನಿಮಿಷಗಳ ಕರ್ತವ್ಯ ನಿರ್ವಹಿಸಿರುವ ಆರೋಪವನ್ನು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ ಎದುರಿಸುತ್ತಿದ್ದಾರೆ. ನಿಯೋಜನೆ ಮಾಡಿದಾಗಿನಿಂದ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ ಕುರಿತು ಈವರೆಗೂ ಯಾವುದೇ ವರದಿಯನ್ನು ಸರ್ಕಾರಕ್ಕೆ ಬಿಂದಿಯಾ ಅವರು ಸಲ್ಲಿಸಿಲ್ಲ. ನಿಯೋಜನೆ ಮಾಡಿದ್ದ ದಿನದಿಂದ ಮಾರ್ಚ್‌ 30 ರಂದು ಕೇವಲ 15 ನಿಮಿಷಗಳ ಮಟ್ಟಿಗೆ ಮಾತ್ರ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ. ನಂತರ ಈವರೆಗೂ ಆಸ್ಪತ್ರೆಗೆ ಭೇಟಿ ಕೊಟ್ಟಿಲ್ಲ, ಕರ್ತವ್ಯದ ಮೇಲ್ವಿಚಾರಣೆಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ನೋಡಲ್ ಅಧಿಕಾರಿಯಾದ ಮೈಸೂರು ವಿಭಾಗಾಧಿಕಾರಿಗಳು ವರದಿ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಶೋಕಾಸ್ ನೋಟೀಸ್‌ನಲ್ಲಿ ತಿಳಿಸಿದ್ದಾರೆ.

ಹಾಟ್‌ಸ್ಪಾಟ್‌ ಜಿಲ್ಲೆಯಲ್ಲಿ ಅಧಿಕಾರಿಯ ನಿರ್ಲಕ್ಷ

ಹಾಟ್‌ಸ್ಪಾಟ್‌ ಜಿಲ್ಲೆಯಲ್ಲಿ ಅಧಿಕಾರಿಯ ನಿರ್ಲಕ್ಷ

ಮೈಸೂರು ಜಿಲ್ಲೆಯಲ್ಲಿ ಈವರೆಗೆ ಒಟ್ಟು 89 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಬೆಂಗಳೂರನ್ನು ಹೊರತು ಪಡಿಸಿದರೆ ಮೈಸೂರಿನಲ್ಲಿಯೆ ಅತಿಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತ 89 ಪ್ರಕರಣಗಳಲ್ಲಿ 43 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಿಗದಿತ ಆಸ್ಪತ್ರೆಗಳಲ್ಲಿ ಇನ್ನೂ 46 ಸೋಂಕಿತರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಹೀಗಿದ್ದಾಗ್ಯೂ ಅಧಿಕಾರಿ ಬಿಂದಿಯಾ ಅವರು ಕರ್ತವ್ಯ ಲೋಪ ಎಸಗಿರವುದನ್ನು ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಗಂಭೀರವಾಗಿ ಪರಿಗಣಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+