ಅವಾಚ್ಯ ಶಬ್ದ ಬಳಕೆ: ಹುಣಸೂರು ಶಾಸಕ ಮಂಜುನಾಥ್ ರಿಂದ ಸ್ಪಷ್ಟನೆ
ಮೈಸೂರು, ಸೆಪ್ಟೆಂಬರ್ 1: ಸಾರ್ವಜನಿಕ ಭಾಷಣದ ವೇಳೆ ನನ್ನ ಹೇಳಿಕೆಯನ್ನು ಸಂಪೂರ್ಣವಾಗಿ ತಿರುಚಲಾಗಿದೆ ಎಂದು ಹುಣಸೂರು ಕ್ಷೇತ್ರದ ಶಾಸಕ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.
ಭಾಷಣದ ವೇಳೆ ಗ್ರಾಮ ಪಂಚಾಯ್ತಿ ಸದಸ್ಯೆಗೆ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಶಾಸಕ ಮುಂಜುನಾಥ್, ಸಾಮಾಜಿಕ ಜಾಲತಾಣಗಳಿಂದ ನಾನು ಬಲಿಪಶುವಾಗಿದ್ದೇನೆ. ಸಾರ್ವಜನಿಕ ಜೀವನಲ್ಲಿ ಇನ್ಮುಂದೆ ಎಚ್ಚರಿಕೆಯಿಂದ ಇರುತ್ತೇನೆ. ಸಮಾರಂಭದಲ್ಲಿ ನಡೆದ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತಿರುಚಿ ಹರಿಬಿಡುವ ಮೂಲಕ ನನ್ನ ಮೇಲೆ ತೇಜೋವಧೆ ನಡೆಸಿ ರಾಜಕೀಯ ಜೀವನ ಮುಗಿಸುವ ಹುನ್ನಾರ ಅಡಗಿದ್ದು ನಾನು ಯಾವುದೇ ರೀತಿಯಾ ಅವಾಚ್ಯ ಪದ ಬಳಸಿಲ್ಲವೆಂದು ಸ್ಪಷ್ಟೀಕರಣ ನೀಡಿದರು.

ತಾಲೂಕಿನ ಜನರ ಒಡನಾಟ ಹೋಗು ಬಾ ಎಂಬಂತಿದೆ. ಹೀಗಾಗಿ ನಾನು ಅವರ ಜೊತೆ ಏಕ ವಚನದಲ್ಲಿಯೇ ಮಾತನಾಡಿದ್ದೇನೆ. ಆದರೆ ದೃಶ್ಯಮಾದ್ಯಮದವರು ನನ್ನ ಮಾತುಗಳನ್ನು ತಿರುಚಿ ಪ್ರಸಾರ ಮಾಡಿದ್ದಾರೆ. 'ವಿಷಲ್' ಅನ್ನೊ ಪದವನ್ನು ಬೇರೆ ಪದವಾಗಿ ತಿರುಚಿದ್ದು, ನಾನು ಯಾವುದೇ ಅವಾಚ್ಯಶಬ್ದಗಳನ್ನು ಬಳಸಿಲ್ಲ. ನನ್ನ ಭಾಷಣವನ್ನ ತಿರುಚಿ 46 ನಿಮಿಷದ ಕಾರ್ಯಕ್ರಮವನ್ನ ಕೇವಲ 29 ಸೆಕೆಂಡ್ ಗೆ ಇಳಿಸಲಾಗಿದೆ. ವಿಕೃತ ಮನಸ್ಸಿದ್ದವ್ರಿಗೆ ಮಾತ್ರ ಕೆಟ್ಟ ಪದ ಕೇಳಿಸುತ್ತೆ. ಒಳ್ಳೆಯ ಮನಸ್ಸಿದ್ದವ್ರಿಗೆ ಒಳ್ಳೆ ಪದ ಕೇಳಿಸುತ್ತದೆ. ನಾನು ಎಲ್ಲಿಯೂ ಅವಹೇಳನಕಾರಿಯಾಗಿ ಮಾತಾಡಿಲ್ಲ. ಗ್ರಾಮ ಪಂಚಾಯ್ತಿ ಸದಸ್ಯೆ ಅಗೌರವ ತೋರಿದ್ರು. ನಾನು ಹಾಗೇ ಮಾತಾಡಿಲ್ಲ ಎಂದು ಹೇಳಿದರು.
ರಾಜ್ಯವ್ಯಾಪಿ ನನ್ನ ಮಾನ ಹೋಗಿದೆ. ಸಾಮಾಜಿಕ ಜಾಲತಾಣಗಳಿಗೆ ನಾನು ಬಲಿಯಾಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿ ಮಂಜುನಾಥ್, ಮಾಧ್ಯಮಗಳ ಮುಂದೆ ನನ್ನದು ತಪ್ಪಿಲ್ಲ ಅಂತಾ ಹೇಳಲು ಬಂದಿದ್ದೇನೆ.ಕಾರ್ಯಕ್ರಮದ ವೇದಿಕೆಯಲ್ಲಿ ನಿಮ್ಮ ಸ್ವಾಭಿಮಾನವನ್ನ ಎಚ್ಚರಿಸಲು ವಿಷುವಲ್ಸ್ ಹೋಡಿಬೇಕಾಯ್ತಾ ಅಂದೆ ಅಷ್ಟೇ. ಆದ್ರೆ ವಿಡಿಯೋ ತಿರುಚಿ ವಿಷುವಲ್ಸ್ ಬದಲಿಗೆ ಮಿಷನ್ ಎಂದು ತಿರುಚಲಾಗಿದೆ. ವಿಡಿಯೋ ತಿರುಚಿರೋ ಬಗ್ಗೆ ಕ್ರಮ ಆಗ್ಬೇಕು ಎಂದು ಆಗ್ರಹಿಸಿದರು.
ಕಳೆದ ಆ.26ರಂದು ಹುಣಸೂರು ತಾಲ್ಲೂಕಿನ ಮಂಚಬಾಯನ ಹಳ್ಳಿ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಡೆದಿರುವ ಘಟನೆಯನ್ನು ಉದ್ದೇಶ ಪೂರ್ವಕವಾಗಿಯೇ ಬಳಸಲಾಗಿದ್ದು ನನ್ನನು ಬಲಿಪಶು ಮಾಡುವ ಹುನ್ನಾರವಾಗಿದೆ, ಅಲ್ಲದೇ ಗ್ರಾಪಂ ಅಧ್ಯಕ್ಷೆ ಕವಿತಾಕುಮಾರ್ ಅವರನ್ನು ಯಾವುದೇ ಅಶ್ಲೀಲ ಪದಗಳಿಂದ ನಿಂದಿಸಿಲ್ಲವೆಂದು ಸ್ಪಷ್ಟಪಡಿಸಿದರು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications