ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೈಭಜರಂಗಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಪ್ರತಾಪ್ ಸಿಂಹ, ರಿಷಿಕುಮಾರ ಸ್ವಾಮೀಜಿ

|
Google Oneindia Kannada News

ಮೈಸೂರು, ಡಿಸೆಂಬರ್ 23: ಹುಣಸೂರಿನಲ್ಲಿ ನಡೆದ ಹನುಮ ಜಯಂತಿ ಮೆರವಣಿಗೆಯಲ್ಲಿ ಸಂಸದ ಪ್ರತಾಪ್ ಸಿಂಹ, ರಿಷಿಕುಮಾರ ಸ್ವಾಮೀಜಿ ಜೈಭಜರಂಗಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.

ಪಟ್ಟಣದ ಕಲ್ಕುಣಿಕೆ ರಂಗನಾಥ ಬಡಾವಣೆಯಲ್ಲಿ 11 ಅಡಿ ಎತ್ತರದ ಆಂಜನೇಯಮೂರ್ತಿ, ವಾರಣಾಸಿಯಿಂದ ತರಿಸಿದ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರ ಪಂಚಲೋಹ ಮೂರ್ತಿ, 6 ಅಡಿ ಪಂಚಲೋಹದ ಆಂಜನೇಯ ಮೂರ್ತಿಗೆ ಸಂಸದ ಪ್ರತಾಪ ಸಿಂಹ, ಶಾಸಕ ಎಚ್.ವಿಶ್ವನಾಥ್, ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ನಗರಸಭಾಧ್ಯಕ್ಷ ಎಚ್.ವೈ.ಮಹದೇವ್ ಇನ್ನಿತರರು ಪುಷ್ಪಾರ್ಚನೆ ಮಾಡಿ 26ನೇ ಹನುಮ ಜಯಂತಿಯ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.

ವೈರಲ್ ಆಯ್ತು ಸಂಸದ ಪ್ರತಾಪ್ ಸಿಂಹರ ಫೇಸ್ ಬುಕ್ ಪೋಸ್ಟ್ವೈರಲ್ ಆಯ್ತು ಸಂಸದ ಪ್ರತಾಪ್ ಸಿಂಹರ ಫೇಸ್ ಬುಕ್ ಪೋಸ್ಟ್

ಮೆರವಣಿಗೆ ಆರಂಭವಾಗುತ್ತಿದ್ದಂತೆ ತಾಲ್ಲೂಕಿನ ವಿವಿಧ ಕಡೆಗಳಿಂದ ಯುವಕರು ಜಮಾವಣೆಗೊಂಡರು. ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಮೆರವಣಿಗೆಗೆ ಸಾಕ್ಷಿಯಾದರು. ಮೆರವಣಿಗೆಯಲ್ಲಿ ಕೇಸರಿ ಬಾವುಟಗಳು ಹಾರಾಡಿದವು. ಯುವಕರು ಬಾವುಟಗಳನ್ನು ಹಿಡಿದು ಜೈಕಾರ ಕೂಗುತ್ತಾ ಸಂತಸಪಟ್ಟರು. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಕೇಸರಿ ಬಾವುಟ ಹಿಡಿದು ಪಿರಮಿಡ್ ರಚಿಸಿ 'ಜೈ ಭಜರಂಗಬಲಿ' ಎಂದು ಘೋಷಣೆಗಳನ್ನು ಕೂಗಿದರು.

ಮೆರವಣಿಗೆಯಲ್ಲಿ ಕೇರಳದಿಂದ ಕರೆಸಿದ್ದ ಚೆಂಡೆ ವಾದನಕ್ಕೆ ಜನ ಕುಣಿದು ಕುಪ್ಪಳಿಸಿದರು. ಪಟ್ಟಣ ವ್ಯಾಪ್ತಿಯ ಕಲ್ಕುಣಿಕೆ ಕನಕದಾಸ, ವಾಲ್ಮೀಕಿ ಗರಡಿಮನೆ, ಕರೀಗೌಡರ ಬೀದಿ, ಸರಸ್ವತಿಪುರಂ, ಬನ್ನೀಬೀದಿ ಗರಡಿಮನೆ ಬಡಾವಣೆಗಳ ಆಂಜನೇಯ ವಿಗ್ರಹಗಳುನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.

ಮೆರವಣಿಗೆಯಲ್ಲಿ ಸಾಗಿದ ಜನಪ್ರತಿನಿಧಿಗಳು

ಮೆರವಣಿಗೆಯಲ್ಲಿ ಸಾಗಿದ ಜನಪ್ರತಿನಿಧಿಗಳು

ಯುವಪಡೆ ಆಂಜನೇಯನ ವೇಷ ತೊಟ್ಟು ಎಲ್ಲರ ಗಮನಸೆಳೆದರು. ಈ ಬಾರಿ ಮೆರವಣಿಗೆಯಲ್ಲಿ ಜನಪ್ರತಿನಿಧಿಗಳಿಗೆ ವಾಹನ ಬಳಕೆ ನಿಷೇಧಿಸಿದ್ದರಿಂದ ಸಂಸದ, ಶಾಸಕರು ಹಾಗೂ ಜನಪ್ರತಿನಿಧಿಗಳು ಮೆರವಣಿಗೆಯಲ್ಲಿ ಸಾಗಿದರು.

ರಕ್ಷಣೆಗೆ ಮುಂದಾದ ಪೊಲೀಸರು

ರಕ್ಷಣೆಗೆ ಮುಂದಾದ ಪೊಲೀಸರು

ಮೆರವಣಿಗೆಯಲ್ಲಿ ಸಂಸದ ಪ್ರತಾಪ ಸಿಂಹ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಯುವಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ರಕ್ಷಣೆಗೆ ಮುಂದಾದರು. ರಕ್ಷಣೆ ದೃಷ್ಟಿಯಿಂದ ಪ್ರತಾಪ ಸಿಂಹ ಅವರನ್ನು ಆಟೊದಲ್ಲಿ ಹತ್ತಿಸಿದರು.

ಪ್ರತಾಪ್ ಸಿಂಹಗೆ ಭಾಷಣ ನಿಲ್ಲಿಸಿ ಸಾಕು ಎಂದು ಸಿಎಂ ಕುಮಾರಸ್ವಾಮಿಪ್ರತಾಪ್ ಸಿಂಹಗೆ ಭಾಷಣ ನಿಲ್ಲಿಸಿ ಸಾಕು ಎಂದು ಸಿಎಂ ಕುಮಾರಸ್ವಾಮಿ

ಭಕ್ತಿ ಹೆಚ್ಚುತ್ತಿರುವುದು ಖುಷಿಯ ವಿಷಯ

ಭಕ್ತಿ ಹೆಚ್ಚುತ್ತಿರುವುದು ಖುಷಿಯ ವಿಷಯ

ಮೆರವಣಿಗೆ ಆರಂಭಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಪ್ರತಾಪ ಸಿಂಹ, ಈ ಬಾರಿ ಸೌಹಾರ್ದತಯುತವಾಗಿ, ಯಾವುದೇ ಗೊಂದಲವಿಲ್ಲದೇ ಹನುಮ ಜಯಂತಿ ಆಚರಣೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದು ಸಂತಸದ ವಿಷಯವಾಗಿದೆ. ಹುಣಸೂರಿನಲ್ಲಿ ಮಾತ್ರ ನಡೆಯುತ್ತಿದ್ದ ಹನುಮ ಜಯಂತಿ ಈಗ ಪಿರಿಯಾಪಟ್ಟಣ, ಕೆ.ಆರ್.ನಗರ, ಎಚ್.ಡಿ.ಕೋಟೆ, ನಂಜನಗೂಡು ತಾಲ್ಲೂಕಿನಲ್ಲೂ ನಡೆಯುತ್ತಿದೆ. ಹನುಮ ಜಯಂತಿಯ ಮೂಲಕ ಜನರಲ್ಲಿ ಧಾರ್ಮಿಕ ಶ್ರದ್ಧೆ, ಭಕ್ತಿ ಹೆಚ್ಚುತ್ತಿರುವುದು ಖುಷಿಯ ವಿಷಯ ಎಂದರು.

ಕಾಳಿ ಸ್ವಾಮಿ ಡ್ಯಾನ್ಸ್

ಕಾಳಿ ಸ್ವಾಮಿ ಡ್ಯಾನ್ಸ್

ಜೈ ಭಜರಂಗಿ ಹಾಡಿಗೆ ಸಂಸದ ಪ್ರತಾಪ್ ಸಿಂಹ ಡಾನ್ಸ್ ಮಾಡುತ್ತಿದ್ದ ವೇಳೆ ಕಾಳಿ ಸ್ವಾಮಿ ಕೂಡ ಸಖತ್ ಡ್ಯಾನ್ಸ್ ಮಾಡಿದರು. ಇವರ ನೃತ್ಯ ಕಂಡು ಯುವಕರು ಕೂಡ ಹುಚ್ಚೆದ್ದು ಕುಣಿದರು.

ಕುಮಾರಸ್ವಾಮಿ ಅಪ್ಪನ ಕಾಲ ಬಳಿಯೇ ಕುಳಿತೀರಲ್ಲ ಸಿದ್ದರಾಮಯ್ಯ?: ಚುಚ್ಚಿದ ಸಿಂಹಕುಮಾರಸ್ವಾಮಿ ಅಪ್ಪನ ಕಾಲ ಬಳಿಯೇ ಕುಳಿತೀರಲ್ಲ ಸಿದ್ದರಾಮಯ್ಯ?: ಚುಚ್ಚಿದ ಸಿಂಹ

English summary
In the Hanuman Jayanti procession held in Hunsur, MP Pratap Simha and Rishikumar Swamiji made step of the song Jai bhajarangi .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X