ವೇದಿಕೆಯಲ್ಲಿ ಬಯಲಾಯ್ತು ಹುಣಸೂರು ಶಾಸಕನ ದರ್ಪ!
ಮೈಸೂರು, ಆಗಸ್ಟ್ 30 : ಚುನಾವಣೆಯಲ್ಲಿ ಗೆಲ್ಲುವವರೆಗೂ ಅಷ್ಟೇ ಮತದಾರ ನಮ್ಮ ರಾಜಕಾರಣಿಗೆ ದೈವ. ಅದಾದ ಬಳಿಕ ದೈವ ಪ್ರಶ್ನೆ ಮಾಡುವಂತಿಲ್ಲ. ಅಕಸ್ಮಾತ್ ಪ್ರಶ್ನೆ ಮಾಡಿದರು, ಮನಸೋಇಚ್ಛೆ ಜನಸಂದಣಿಯ ಸಭೆಯಲ್ಲಿ ಮನಬಂದಂತೆ ಹೇಳಿಕೆ ಕೊಡುತ್ತಾರೆ ಜನಪ್ರತಿನಿಧಿಗಳು. ಅಂತಹ ವೇದಿಕೆಗೆ ಸಾಕ್ಷಿಯಾಗಿದ್ದು, ಮೈಸೂರಿನ ಬಿಳಿಗೆರೆ ಗ್ರಾಮದಲ್ಲಿ ನಡೆದ ಸ್ವಚ್ಛತಾ ಸಂಭ್ರಮ ಕಾರ್ಯಕ್ರಮದಲ್ಲಿ.
ಹೌದು, ಜನನಾಯಕ ಹಾಗೂ ಹುಣಸೂರು ಕ್ಷೇತ್ರದ ಶಾಸಕ ಎಚ್.ಪಿ. ಮಂಜುನಾಥ್, ಶಾಸಕರು ಭಾಷಣ ಮಾಡುವಾಗ ಮಧ್ಯ ವ್ಯಕ್ತಿಯೊಬ್ಬ ಶೌಚಾಲಯ ಕಟ್ಟುವ ವಿಚಾರದಲ್ಲಿ ಅಧಿಕಾರಿಯೊಬ್ಬರ ನಡೆ ಬಗ್ಗೆ ಪ್ರಶ್ನಿಸಿದ ಹಿನ್ನೆಲೆ ಶಾಸಕರು ಆತನಿಗೆ ನೀಡಿದ್ದಲ್ಲದೇ ಏಕವಚನದಲ್ಲಿ ಬೈದಿದ್ದಾರೆ.

ಕೇವಲ ಪ್ರಶ್ನೆ ಮಾಡಿದ ಎಂಬ ಒಂದೇ ಕಾರಣಕ್ಕೆ, 'ಬಾರೋ ನೀನೇ ಮೈಕ್ ಮುಂದೆ ಮಾತಾಡು. ನಿನ್ನ ಹೆಂಡತಿ ಬೆಳಗ್ಗೆ ನಾಲ್ಕು ಗಂಟೆಗೆ ಬಯಲು ಪ್ರದೇಶದಲ್ಲಿ ಶೌಚಾಲಯಕ್ಕೆ ಕೂತಾಗ ಆಕೆಯನ್ನು ಅಲ್ಲಿಂದ್ದ ಎದ್ದೇಳಿಸಲು ಆ ಅಧಿಕಾರಿ ಬಂದು ವಿಷಲ್ ಊದಬೇಕಿತ್ತೇನೋ? ನೀನು ದೊಡ್ಡ ಸ್ವಾಭಿಮಾನಿ, ಸುಮ್ನೆ ನಿಂತುಕೋ' ಎಂದು ದರ್ಪದಿಂದ ಮಾತಾಡಿದ್ದಾರೆ
ಹಾಗಾದರೆ ಮತದಾರರು ಸಾರ್ವಜನಿಕವಾಗಿ ಶಾಸಕರನ್ನು ಪ್ರಶ್ನಿಸುವುದೇ ತಪ್ಪಾ? ಒಂದು ವೇಳೆ ಪ್ರಶ್ನಿಸಿದರೆ ಪ್ರಶ್ನೆ ಮಾಡಿದವರ ಕುಟುಂಬಸ್ಥರನ್ನು ಉದಾಹರಣೆಗೆ ತೆಗೆದುಕೊಂಡು ಏಕವಚನದಲ್ಲೆ ಗದರುವುದು ಶಾಸಕರ ಸುಸಂಸ್ಕೃತ ವರ್ತನೆಯಾ? ಜನಸೇವೆ ಮಾಡುವುದು ಬಿಟ್ಟು, ಇಂತಹ ಮನಬಂದಂತಹ ಹೇಳಿಕೆ ನೀಡುವುದು ನಿಮ್ಮ ವರ್ತನೆಯೇ..? ಇನ್ನಾದರೂ ಉತ್ತರಿಸಿ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications