ಮೈಸೂರಿನಲ್ಲಿ ಪ್ರಗತಿಪರರಿಂದ ಮಹಿಷ ದಸರಾ
ಮೈಸೂರು, ಸೆಪ್ಟಂಬರ್ 18 : ದಸರಾ ಮಹೋತ್ಸವದ ಹೊಸ್ತಿಲಲ್ಲಿ ದಲಿತ ವೆಲ್ ಫೇರ್ ಟ್ರಸ್ಟ್, ಅಶೋಕಪುರಂ ಅಭಿಮಾನಿಗಳ ಬಳಗ, ಗಂಗೋತ್ರಿ ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮಹಿಷ ದಸರಾ ಆಚರಿಸಲಾಯಿತು.
ಮೂಲನಿವಾಸಿಗಳ ಮಹಿಷ ಸಾಂಸ್ಕೃತಿಕ ಹಬ್ಬದ ಅಂಗವಾಗಿ ಮೂಲನಿವಾಸಿ ಶೋಷಿತ ಕೇರಿಗಳಿಂದ ಚಾಮುಂಡಿ ಬೆಟ್ಟಕ್ಕೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಮಹಿಷಾಸುರನ ಭಾವಚಿತ್ರವಿರುವ ಬೆಳ್ಳಿರಥದೊಂದಿಗೆ ಬೈಕ್ ರ್ಯಾಲಿ ನಗರದ ಪುರಭವನದಿಂದ ಪ್ರಾರಂಭವಾಗಿ ಚಾಮುಂಡಿ ಬೆಟ್ಟ ತಲುಪಿತು. ಮೆರವಣಿಗೆಗೆ ಗಾಂಧಿನಗರದ ಉರಿಲಿಂಗಿಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಚಾಲನೆ ನೀಡಿದರು. ಮೆರವಣಿಗೆಗೆ ತಮಟೆ, ನಗಾರಿ, ಕಂಸಾಳೆ, ಡೊಳ್ಳುಕುಣಿತ, ಪೂಜಾಕುಣಿತ ಕಲಾ ಮೆರಗು ನೀಡಿದವು. ಮಹಿಷಾಸುರ, ಭಗವಾನ್ ಬುದ್ಧನ ವೇಷಧಾರಿಗಳು ಮೆರವಣಿಗೆಯ ಆಕರ್ಷಣೆಯಾಗಿದ್ದರು.

ಕಳೆದ ಐದು ವರ್ಷಗಳಿಂದ ಮಹಿಷ ಹಬ್ಬದ ಆಚರಣೆ ಆರಂಭವಾಗಿದ್ದು, ಮಹಿಷಾಸುರ ರಾಕ್ಷಸನಲ್ಲ, ಮೈಸೂರಿನ ಮೂಲ ಅರಸ. ಚಾಮುಂಡೇಶ್ವರಿಯ ಮಹಿಷಮರ್ದಿನಿ ಕಟ್ಟುಕಥೆ ಎಂಬ ಉದ್ದೇಶದಿಂದ ಮಹಿಷ ಹಬ್ಬ ಆಚರಿಸಲಾಗುತ್ತಿದೆ. ವೈದಿಕ ಧಾರ್ಮಿಕ ವಕ್ತಾರರು ಮತ್ತು ಅವರ ಧಾರ್ಮಿಕ ಸಾಹಿತ್ಯಗಳು, ಪುರಾಣ ಪುಣ್ಯಕಥೆಗಳು, ಪ್ರವಚನಗಳು, ನಾಟಕ, ನಾಟ್ಯ ಮುಂತಾದವುಗಳಲ್ಲಿ ಮಹಿಷಾಸುರನನ್ನು ರಾಕ್ಷಸ, ದುಷ್ಟ, ನೀಚ, ಲೋಕಕಂಟಕ ಎಂದೆಲ್ಲಾ ಚಿತ್ರಿಸಿ ಜನರಿಗೆ ಮಹಿಷಾಸುರನ ಬಗ್ಗೆ ಕೆಟ್ಟ ಭಾವನೆ ಬರುವಂತೆ ಮಾಡಿದ್ದಾರೆ.

ಇದರ ಸತ್ಯಾಸತ್ಯತೆಯನ್ನು ತಿಳಿಯಲು ಹೊರಟ ಚಿಂತಕರಿಗೆ ಕಂಡ ಸತ್ಯಸಂಗತಿ ಎಂದರೆ ಮಹಿಷಾಸುರ ಕೆಟ್ಟವನಲ್ಲ. ದುಷ್ಟನೂ ಅಲ್ಲ. ಲೋಕಕಂಟಕನೂ ಅಲ್ಲ. ಆತ ಮೈಸೂರು ಜನರ ರಕ್ಷಣೆಗಾಗಿ ಹೋರಾಡಿದ ಸ್ವಾಭಿಮಾನಿ ಸಾಂಸ್ಕೃತಿಕ ನಾಯಕ ಎಂದು ಮಹಿಷಾಸುರನ ಬಗ್ಗೆ ಮಹಿಷಮಂಡಲದ ಮೂಲನಿವಾಸಿಗಳಿಗೆ ಅರಿವನ್ನು ಮತ್ತು ಜಾಗೃತಿಯನ್ನು ಮೂಡಿಸುವ ಚಿಂತನೆಯಲ್ಲಿ ಮಹಿಷ ದಸರಾ ಆಚರಿಸಲಾಗುತ್ತಿದೆ ಎನ್ನತ್ತಾರೆ ಕಾರ್ಯಕ್ರಮ ಆಯೋಜಕರು.
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications