ಪಿರಿಯಾಪಟ್ಟಣ ಕ್ರೀಡಾಂಗಣವೀಗ ಕುರಿ, ದನಗಳಿಗೆ ಹುಲ್ಲುಗಾವಲು!
ಮೈಸೂರು, ಆಗಸ್ಟ್ 14: ಕಲ್ಲು ಮುಳ್ಳುಗಳಿಂದ, ಗಿಡಗಂಟಿಗಳಿಂದ ಕೂಡಿದ ಮೈದಾನ. ಮುರಿದ ಕಬ್ಬಿಣದ ಸರಳುಗಳು. ಅಪೂರ್ಣಗೊಂಡ ಸ್ಟೇಡಿಯಂ ಕಟ್ಟಡ. ಶೌಚಾಲಯವಿಲ್ಲದೆ ಬಯಲಿಗೆ ತೆರಳಬೇಕಾದ ಅನಿವಾರ್ಯತೆ. ಹೀಗೆ ಹಲವು ಮೂಲಭೂತ ಸೌಲಭ್ಯದ ಕೊರತೆಯಿಂದ ನಿರ್ವಹಣೆಯಿಲ್ಲದೆ ಕ್ರೀಡಾಪಟುಗಳ ಪಾಲಿಗೆ ಇದ್ದೂ ಇಲ್ಲವಾಗಿರುವ ಕ್ರೀಡಾಂಗಣ ಪಿರಿಯಾಪಟ್ಟಣದ ಹರವೆ-ಮಲ್ಲರಾಜಪಟ್ಟಣದಲ್ಲಿದೆ.
ಈ ಕ್ರೀಡಾಂಗಣವು ಯುವಜನ ಸೇವೆ ಮತ್ತು ಕ್ರೀಡಾ ಸಬಲೀಕರಣ ಇಲಾಖೆಗೆ ಸೇರಿದ್ದು, ಒಂದು ಅತ್ಯುತ್ತಮ ಕ್ರೀಡಾಂಗಣವಾಗಬೇಕಾಗಿದ್ದ ಇದು ಇವತ್ತು ನಿರ್ಲಕ್ಷ್ಯಕ್ಕೊಳಗಾಗಿ, ಕುರಿ, ದನಗಳಿಗೆ ಹುಲ್ಲುಗಾವಲಾಗಿ ಪರಿಣಮಿಸಿದೆ.

ಪಿರಿಯಾಪಟ್ಟಣಕ್ಕೆ ಹೊಂದಿಕೊಂಡಿರುವ ಹರವೆ-ಮಲ್ಲರಾಜಪಟ್ಟಣದ ಈ ಕ್ರೀಡಾಂಗಣ ಕ್ರೀಡಾಪಟುಗಳಿಗೆ ಉಪಯುಕ್ತವಾಗಬೇಕಾಗಿತ್ತು. ಆದರೆ ಇದರ ನಿರ್ವಹಣೆ ಮಾಡಬೇಕಾದ ಇಲಾಖೆ ಕೈಕಟ್ಟಿ ಕುಳಿತಿರುವುದರಿಂದ ಅಭಿವೃದ್ಧಿ ಕಾಣದೆ ಪಾಳುಬೀಳುವಂತಾಗಿದೆ. ಆದರೂ ಬೇರೆ ದಾರಿಯಿಲ್ಲದೆ ಮೈದಾನದ ಒಂದು ಬದಿಯಲ್ಲಿ ಮಾತ್ರ ಶಿಕ್ಷಣ ಇಲಾಖೆ ಸೇರಿದಂತೆ ಸಂಘಸಂಸ್ಥೆಗಳು ಪದೇ ಪದೇ ಕ್ರೀಡಾಕೂಟಗಳನ್ನು ಆಯೋಜಿಸುತ್ತಿರುತ್ತವೆ.

ಕ್ರೀಡಾಂಗಣದ ಫೆವಿಲಿಯನ್ ನಲ್ಲಿ ಕಬ್ಬಿಣದ ಸಲಾಕೆಗಳು ಎಲ್ಲೆಂದರಲ್ಲಿ ಚಾಚಿಕೊಂಡಿವೆ. ಕೆಲವು ವಿದ್ಯಾರ್ಥಿಗಳು ಇದನ್ನು ಹಿಡಿದುಕೊಂಡು ಕಸರತ್ತು ಮಾಡುತ್ತಾರೆ. ಹೀಗೆ ಮಾಡುವಾಗ ಅಥವಾ ಇಲ್ಲಿ ನಡೆದಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಕಬ್ಬಿಣದ ಸರಳುಗಳು ಚುಚ್ಚುವ ಅಪಾಯವಿದೆ.
ಇನ್ನೊಂದು ಬೇಸರದ ಸಂಗತಿ ಎಂದರೆ ಈ ಕ್ರೀಡಾಂಗಣದಲ್ಲಿ ಶೌಚಾಲಯವೇ ಇಲ್ಲವಾಗಿದೆ. ಕ್ರೀಡಾಕೂಟಕ್ಕೆ ಬರುವ ವಿದ್ಯಾರ್ಥಿನಿಯರೂ ಶೌಚಕ್ಕೆ ಬಯಲಿಗೇ ಹೋಗಬೇಕಾದ ಹಿನಾಯ ಸ್ಥಿತಿ ಇಲ್ಲಿದೆ.
-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ












Click it and Unblock the Notifications