"ಜ್ಯುಬಿಲಿಯಂಟ್ ಕಾರ್ಮಿಕನಿಗೆ ಕಂಟೈನರ್‌ ಮೂಲಕ ಸೋಂಕು ತಗುಲಿಲ್ಲ'

ಮೈಸೂರು, ಏಪ್ರಿಲ್ 16: ಜ್ಯುಬಿಲಿಯಂಟ್ ಕಾರ್ಮಿಕನಿಗೆ ಕಂಟೈನರ್​ ಮೂಲಕ ಸೋಂಕು ತಗುಲಿಲ್ಲ ಎನ್ನುವುದು ರುಜುವಾತಾಗಿದೆ ಎಂದು ಎಡಿಜಿಪಿ ಡಾ.ಪರಶಿವಮೂರ್ತಿ ತಿಳಿಸಿದ್ದಾರೆ. ಈ ಕುರಿತು ಕಂಟೈನರ್ ಗಳನ್ನು ಪರೀಕ್ಷೆ ಮಾಡಿಸಿದಾಗ ನೆಗೆಟಿವ್‌ ವರದಿ ಬಂದಿದೆ, ಇದು ಕೇವಲ ವದಂತಿ ಎಂದು ಸಾಬೀತಾಗಿದೆ ಎಂದರು.

Recommended Video

      ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಯಾರಿಗೂ ಹೊಟ್ಟೆಗೆ ಊಟ ಇಲ್ಲ..! | D V Sadananda Gowda | Krishna Byregowda

      ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ಮೊದಲ ಬಾರಿಗೆ ಪತ್ತೆಯಾದ ಕೊರೊನಾ ಸೋಂಕಿತ ವ್ಯಕ್ತಿಯ ಹೇಳಿಕೆಯ ಆಧಾರದಲ್ಲೇ ಕಂಟೈನರ್ ನ್ನು ಕೂಲಂಕಷವಾಗಿ ಪರೀಕ್ಷೆ ಮಾಡಲಾಗಿದೆ, ಆದರೆ, ಅದರ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದರು.

      ಈ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸುತ್ತೇವೆ ಎಂದ ಅವರು, ಜ್ಯುಬಿಲಿಯಂಟ್ ಕಾರ್ಖಾನೆಗೆ ಯಾರೆಲ್ಲ ಬಂದಿದ್ದರು? ಸೋಂಕು ಹರಡಲು ಕಾರಣಕರ್ತರಾರು? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.

      Jubilient Factory Worker Has Not Been Infected By Container: ADGP

      ಇದರಿಂದ ಯಾರೂ ಕೂಡ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ಎಲ್ಲರೂ ಕೂಡ ಗುಣಮುಖರಾಗಲಿದ್ದಾರೆ ಎಂದು ಹೇಳಿದರು. ‌ ಮುಂದಿನ‌ ದಿನಗಳಲ್ಲಿ ಪೊಲೀಸ್ ವ್ಯವಸ್ಥೆ ಮತ್ತಷ್ಟು ಬಿಗಿಗೊಳಿಸಲಾಗುವುದಲ್ಲದೇ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.

      ಮೈಸೂರು ಜಿಲ್ಲೆ ಹಾಗೂ ರಾಜ್ಯದ ಚೆಕ್​ ಪೋಸ್ಟ್​ಗಳಲ್ಲಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುವ ವಾಹನಗಳಿಗೆ ಪಾಸ್ ನೀಡಲಾಗಿದೆ. ಕೃಷಿ ಉತ್ಪನ್ನಗಳನ್ನು ಸಾಗಿಸಲು ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಭರವಸೆ ನೀಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+