2023ರಲ್ಲಿ ಮತ್ತೆ ಎಚ್‌ಡಿಕೆ ಕಾಲು ಹಿಡಿಯಬೇಕು; ಶಿವರಾಮೇಗೌಡ

ಮೈಸೂರು, ಮಾರ್ಚ್ 22: "2023ರ ಚುನಾವಣೆ ಬಳಿಕ ಮತ್ತೆ ಎಚ್. ಡಿ. ಕುಮಾರಸ್ವಾಮಿ‌ ಕಾಲು ಹಿಡಿಯುವ ಸ್ಥಿತಿ ಬರುತ್ತದೆ" ಎಂದು ಮಂಡ್ಯದ ಮಾಜಿ ಸಂಸದ ಎಲ್​. ಆರ್. ಶಿವರಾಮೇಗೌಡ ಭವಿಷ್ಯ ನುಡಿದರು.

ಸೋಮವಾರ ಮೈಸೂರಿನಲ್ಲಿ ಮಾತನಾಡಿದ ಅವರು, "ನಮ್ಮ ಪಕ್ಷದ ಹಣೆ ಬರಹವೇ ಇಷ್ಟು. 2018ರಲ್ಲಿ ಕುಮಾರಸ್ವಾಮಿ ಮತ್ತೆ ಸಿಎಂ ಆಗುತ್ತಾರೆ ಅಂದರೆ ಎಲ್ಲರೂ ನಗುತ್ತಿದ್ದರು. ಕುಮಾರಸ್ವಾಮಿ ಹುಡುಕಿಕೊಂಡು ಬರುವ ಸ್ಥಿತಿ ಬಂತು. 2023ರಲ್ಲಿಯೂ ಅಷ್ಟೇ ಎಚ್‌ಡಿಕೆ ಹುಡುಕಿಕೊಂಡು ಬರಲೇಬೇಕು" ಎಂದರು.

"ಶಾಸಕ ಜಿ. ಟಿ. ದೇವೇಗೌಡ ಅವರಿಗೆ ಜೆಡಿಎಸ್ ಅನಿವಾರ್ಯ. ಈಗಾಗಲೇ ಬಿಜೆಪಿಗೆ ಹೋಗಿ ಬಂದಿದ್ದಾರೆ. ಇನ್ನೂ ಕಾಂಗ್ರೆಸ್​ಗೆ ಹೋಗಲು ಅಲ್ಲಿ ಸಿದ್ದರಾಮಯ್ಯ ಇದ್ದಾರೆ. ಹೀಗಾಗಿ ಸಿದ್ದರಾಮಯ್ಯ ಇರುವವರೆಗೂ ಅವರಿಗೆ ಕಾಂಗ್ರೆಸ್‌ನಲ್ಲಿ ಅವಕಾಶ ಇಲ್ಲ. ಆದ್ದರಿಂದ ಅವರಿಗೆ ಜೆಡಿಎಸ್​ ಅನಿವಾರ್ಯ" ಎಂದು ಹೇಳಿದರು.

 JDS To Play Kingmaker Role After 2023 Elections Says LR Shivarame Gowda

"ನಾಗಮಂಗಲದಲ್ಲಿ ಈ ಬಾರಿ ನಾನೇ ರಂಗ ಕುಣಿಯೋದು. ಶಾಸಕ ಸುರೇಶ್‌ ಗೌಡರಿಗೆ ಶಾಶ್ವತವಾಗಿ ನಾಗಮಂಗಲ ಬರೆದುಕೊಟ್ಟಿಲ್ಲ. ಜೆಡಿಎಸ್‌ನಿಂದ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ಸುರೇಶ್‌ಗೌಡರನ್ನು ಎಂಎಲ್‌ಸಿ ಅಥವ ಎಂಪಿಗೆ ಕಳಿಸಲಿ ನಮ್ಮದೇನು ಅಭ್ಯಂತರ ಇಲ್ಲ" ಎಂದು ತಿಳಿಸಿದರು.

ಸಿಬಿಐಗೆ ವಹಿಸಿ; "ಕೋವಿಡ್ ಕಾರಣದಿಂದಾಗಿ ಬಂದು ಸಿಡಿ ಪ್ರಕರಣ ಮುಚ್ಚಿಕೊಂಡಿದೆ. ಬಿಜೆಪಿ‌ ನಾಯಕರೇ ಹೇಳಿರುವಂತೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು‌. ಸತ್ಯಾಸತ್ಯತೆ ಹೊರಬರಲು ಸಮಗ್ರ ತನಿಖೆ ಆಗಲೇಬೇಕು" ಎಂದು ಎಲ್. ಆರ್. ಶಿವರಾಮೇಗೌಡ ಹೇಳಿದರು.

"ನಮ್ಮ ನಾಯಕ ಕುಮಾರಸ್ವಾಮಿ ಹೇಳಿದಂತೆ ತನಿಖೆ ಹಳ್ಳ ಹಿಡಿಯುತ್ತಿದೆ. ಬಿಜೆಪಿ ದಿಕ್ಕು ತಪ್ಪಿಸುವ ರಾಜಕಾರಣ ಮಾಡುತ್ತಿದೆ. ಕೊರೊನಾ ಎರಡನೇ ಅಲೆ ನೋಡಿದರೆ ಮತ್ತೆ ಆತಂಕ ಸೃಷ್ಟಿಸುತ್ತಿದೆ. ರಾಜ್ಯ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ" ಎಂದು ದೂರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+