Get Updates
Get notified of breaking news, exclusive insights, and must-see stories!

Chunchanakatte waterfall: ಚುಂಚನಕಟ್ಟೆಯ ನೀರಿನಲ್ಲಿ ಸ್ನಾನ ಮಾಡಿದ್ದ ಸೀತಾ ಮಾತೆ....

ಚುಂಚನಕಟ್ಟೆ ಜಲಪಾತ... ಈ ಜಲಪಾತದ ಬಗ್ಗೆ ನೀವು ಕೇಳಿರುತ್ತೀರಿ. ಜೊತೆಗೆ ಇದಕ್ಕೆ ಭೇಟಿ ಕೂಡ ನೀಡಿರುತ್ತೀರಿ. ಮೈಸೂರು, ಹಾಸನ, ಬೆಂಗಳೂರಿನಲ್ಲಿ ವಾಸವಾಗಿರುವವರಿಗೆ ಈ ಜಲಪಾತ ತುಂಬಾ ಹತ್ತಿರ. ವಾರಾಂತ್ಯ ಹಾಗೂ ವಿಶೇಷ ರಜೆ ದಿನಗಳಲ್ಲಿ ಈ ಜಲಪಾತಕ್ಕೆ ಭೇಟಿ ನೀಡುವವರು ಹೆಚ್ಚು. ಈ ಜಲಪಾತದ ಬಗ್ಗೆ ಕೆಲ ಕುತೂಹಲಕಾರಿ ವಿಷಯಗಳಿವೆ. ಅವು ಶ್ರೀರಾಮನಿಗೆ ಸಂಬಂಧಿಸಿದ ವಿಚಾರಗಳು.

ಹೌದು.. ಈ ಜಲಪಾತಕ್ಕೂ ಶ್ರೀರಾಮನಿಗೂ ಒಂದು ಸಂಬಂಧವಿದೆ. ಅದನ್ನು ತಿಳಿದರೆ ಈ ಜಲಪಾತಕ್ಕೆ ಭೇಟಿ ನೀಡುವ ಮನಸ್ಸಾಗದೇ ಇರದು. ಈ ನೈಸರ್ಗಿಕ ವಿಸ್ಮಯ ಸ್ಥಳವು ಶ್ರೀಮಂತ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸುಂದರವಾದ ಭೂದೃಶ್ಯದಲ್ಲಿ ನೆಲೆಗೊಂಡಿದೆ ಈ ಚುಂಚನಕಟ್ಟೆ ಜಲಪಾತ. ನೋಡುಗರ ಮನಸೂರೆಗೊಳಿಸುವ ಈ ಸುಂದರ ಜಲಪಾತವಿರುವ ಸ್ಥಳಕ್ಕೆ ಶ್ರೀರಾಮನು ಆಗಮಿಸಿದ್ದನೆನ್ನಲಾಗುತ್ತದೆ.

Goddess Sita bathed in the waters of Chunchanakatta in Mysore

ಸ್ಥಳೀಯ ಪುರಾಣಗಳ ಪ್ರಕಾರ ಈ ಜಲಪಾತಕ್ಕೆ ಶ್ರೀರಾಮ ಭೇಟಿ ನೀಡಿದ್ದನು. ರಾಮ, ಲಕ್ಷ್ಮಣ ಮತ್ತು ಸೀತೆ ಮೂವರ ವಿಶ್ರಾಂತಿ ಸ್ಥಳ ಇದಾಗಿತ್ತು. ಪುಣ್ಯ ಮತ್ತು ಭಕ್ತಿಯ ಅಧಿದೇವತೆಯಾದ ಸೀತೆ ಚುಂಚನಕಟ್ಟೆಯ ನೀರಿನಲ್ಲಿ ಸ್ನಾನ ಮಾಡಿ, ಆ ಸ್ಥಳದ ಮೇಲೆ ಅಳಿಸಲಾಗದ ಗುರುತು ಹಾಕಿದಳು ಎಂದು ಪುರಾಣಗಳು ಹೇಳುತ್ತವೆ. ನೀರಿನ ಹಳದಿ ಬಣ್ಣವು ಈ ದೈವಿಕ ಘಟನೆಗೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ನಂಬುತ್ತಾರೆ. ಸೀತಾ ಸ್ನಾನ ಮಾಡಿದ ನಿರ್ದಿಷ್ಟ ಸ್ಥಳವನ್ನು 'ಸೀತಾ ಮಧು' ಎಂದು ಕರೆಯಲಾಗುತ್ತದೆ.

ಪುರಾಣ ಪ್ರಸಿದ್ಧ ಸ್ಥಳ

ಚುಂಚನಕಟ್ಟೆ ಜಲಪಾತ ಕಾವೇರಿ ನದಿಯಿಂದ ರೂಪಗೊಂಡಿದೆ. ಮೈಸೂರಿನ ಕೃಷ್ಣರಾಜನಗರ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದಲ್ಲಿ ಈ ಜಲಪಾತವಿದೆ. ಸುಮಾರು 40 ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವನ್ನು ನೋಡುವುದೇ ಒಂದು ರೀತಿಯ ಆನಂದ. ಇಲ್ಲಿ ಶ್ರೀರಾಮ ವನವಾಸಕ್ಕೆ ಬಂದಿದ್ದಾಗ ಚುಂಚಿ ಎಂಬ ಆದಿವಾಸಿ ಕುಟುಂಬದ ಆತಿಥ್ಯ ಸ್ವೀಕರಿಸಿದ್ದನಂತೆ.

Goddess Sita bathed in the waters of Chunchanakatta in Mysore

ಈ ಸ್ಥಳದಲ್ಲಿ ಶ್ರೀರಾಮನಿಗೆ ಮುಡಿಪಾದ ಕೋದಂಡ ರಾಮನ ದೇವಾಲಯವಿದೆ. ಇದು ತುಂಬಾ ಹಳೆಯದಾಗಿದ್ದು ವಿಶೇಷ ಅಂದರೆ ಇದರ ಒಳಗೆ ಜಲಪಾತದ ಶಬ್ಧ ಕೇಳಿಸುವುದಿಲ್ಲ. ಇದಕ್ಕೆ ಒಂದು ಪೌರಾಣಿಕ ಕಾರಣವೂ ಇದೆ. ಶ್ರೀರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಯ ನಿರಂತರ ಮಾತುಗಳಿಂದ ಬೇಸರಗೊಂಡು ಹೆಣ್ಣುಮಕ್ಕಳ ನಾಲಿಗೆಯು ನಿಯಂತ್ರಣದಲ್ಲಿರಬೇಕೆಂದು ಶಪಿಸಿದ್ದನಂತೆ. ಕಾವೇರಿಯನ್ನು ಒಂದು ಹೆಣ್ಣಾಗಿ ಭಾವಿಸುವುದರಿಂದ ರಾಮನ ದೇವಾಲಯದ ಗರ್ಭ ಗೃಹದಲ್ಲಿದ್ದಾಹ ಹರಿಯುವ ನದಿಯ ಶಬ್ದವು ಕೇಳುವುದಿಲ್ಲವೆಂದು ಪುರಾಣಗಳು ಹೇಳುತ್ತವೆ.

ಸೀತಾ ಮಾತೆ ಸ್ನಾನ ಮಾಡಿದ ಸ್ಥಳ

ರಾಮ, ಲಕ್ಷ್ಮಣ ಹಾಗೂ ಸೀತೆ ವನವಾಸಕ್ಕೆ ಹೋದಾಗ ಸೀತಾ ಮಾತೆ ಸುಸ್ತಾಗಿ ಸ್ನಾನ ಮಾಡಲು ಬಯಸಿದಳಂತೆ. ಆಗ ಶ್ರೀರಾಮ ಲಕ್ಷ್ನಣನಿಗೆ ಒಂದು ಬಾಣಬಿಡಲು ಹೇಳುತ್ತಾನೆ. ಬಾಣಬಿಟ್ಟಾಗ ಭೂಮಿಯಿಂದ ಅರಿಶಿನ, ಎಣ್ಣೆ ಮತ್ತು ಸೀಗೆಕಾಯಿಯ ಅಂಶವಿರುವ ಮೂರು ಬಣ್ಣದ ನೀರು ಹೊಮ್ಮಿತೆಂದು ಹೇಳಲಾಗುತ್ತದೆ.

ಆಗ ಸೀತಾ ಮಾತೆ ಈ ನೀರಿನಲ್ಲಿ ಸ್ನಾನ ಮಾಡಿದಳೆಂದು ಸ್ಥಳೀಯ ಪುರಾಣಗಳು ಹೇಳುತ್ತವೆ. ಈ ಬಣ್ಣವನ್ನು ಮಳೆಗಾಲದ ಸಮಯದಲ್ಲಿ ಹೆಚ್ಚು ನೀರಿರುವಾಗ ಈಗಲೂ ಕಾಣಬಹುದು. ಹೀಗೆ ಈ ಜಲಪಾತ ಪ್ರಾಚೀನ ಪುರಾಣದೊಂದಿಗೆ ಸಂಪರ್ಕವನ್ನು ಹೊಂದಿದೆ.

Goddess Sita bathed in the waters of Chunchanakatta in Mysore

ರಜಾ ದಿನಗಳಲ್ಲಿ ಪ್ರವಾಸಿಗರ ದಂಡು

ಮಳೆಗಾಲ ಹಾಗೂ ಬೇಸಿಗೆ ರಜಾ ದಿನಗಳಲ್ಲಿ ಪ್ರವಾಸಿಗರ ದಂಡೆ ಇಲ್ಲಿಗೆ ಹರಿದು ಬರುತ್ತದೆ. ಅಲ್ಲದೆ ಸಾಕಷ್ಟು ಕನ್ನಡ ಚಿತ್ರಗಳು ಚಿತ್ರೀಕರಣಗೊಂಡಿದ್ದು ಚಿತ್ರೀಕರಣಕ್ಕೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ. ಪ್ರವಾಸಿಗರ ಹೃದಯ ಕದಿಯುವ ಈ ಜಲಪಾತ ವರ್ಣಿಸಲಾಗದಷ್ಟು ಚಂದವಿದೆ.

ಮೈಸೂರಿನಿಂದ 57 ಕಿ.ಮೀ, ಕೆ.ಆರ್ ನಗರ ಪಟ್ಟಣದಿಂದ ಸುಮಾರು 16 ಕಿ.ಮೀ ದೂರದಲ್ಲಿ ಚುಂಚನಕಟ್ಟೆ ಜಲಪಾತವಿದೆ. ಮಳೆಗಾಲದಲ್ಲಿ ಈ ಜಲಪಾತಕ್ಕೆ ಜೀವಕಳೆ ತುಂಬಿರುತ್ತದೆ. 40 ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಈ ಜಲಪಾತಕ್ಕೆ ರಜಾ ದಿನಗಳಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+