ಮೈಸೂರಿನ ಬೀದಿಯಲ್ಲಿ ದೈತ್ಯ 'ಡೆಂಗ್ಯೂ' ಸೊಳ್ಳೆ!
ಮೈಸೂರು, ಆಗಸ್ಟ್ 3 : ಮೈಸೂರಿನ ಹೋಟೆಲ್ ದಾಸ್ಪ್ರಕಾಶ್ ಪ್ಯಾರಡೈಸ್ ನ ಹಿಂಭಾಗದಲ್ಲಿ ಹಿಂದೆಂದೂ ಕಂಡರಿಯಂದಂತಹ ಅತಿ ದೊಡ್ಡ ಸೊಳ್ಳೆಯೊಂದು ಕಂಡು ಬಂದು, ಜನರನ್ನು ಗಾಬರಿಗೊಳಿಸಿತ್ತು. ಅಷ್ಟೇ ಅಲ್ಲದೇ ಆ ಸೊಳ್ಳೆಯನ್ನು ನೆರೆದಿದ್ದ ವೀಕ್ಷಕರೆಲ್ಲರೂ ಕಣ್ಣು - ಬಾಯಿ ಬಿಟ್ಟು ನೋಡಿ ಗಾಬರಿಗೊಂಡಿದ್ದರು. ಅದು ಸಾವನ್ನು ತನ್ನತ್ತ ಕರೆಯುತ್ತಿದ್ದ ದೈತ್ಯಾಕಾರದ ಸೊಳ್ಳೆ!
ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು...
ಅರೇ ಇದ್ಯಾವ ಸೊಳ್ಳೆ...! ಅಷ್ಟು ದೈತ್ಯಾಕಾರವಾಗಿತ್ತೆ ? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದ್ದರೆ, ಅದರಲ್ಲಿ ಅಚ್ಚರಿಪಡುವಂತಹದ್ದೇನಿಲ್ಲ. ಸೊಳ್ಳೆಯನ್ನು ರಸ್ತೆಗಿಳಿಸಿದವರು, ಮೈಸೂರಿನ ಕುಂಚ ಕಲಾವಿದರಾದ ಬಾದಲ್ ನಂಜುಂಡಸ್ವಾಮಿ.
ನಗರದ ಪ್ರತಿಷ್ಠಿತ ಯಾದವಗಿರಿ ರಸ್ತೆಯ ಮಧ್ಯೆ ಕಳೆದ 2 ತಿಂಗಳಿನಿಂದ ಆಳವಾದ ಗುಂಡಿ ಬಿದ್ದಿದೆ. ಈ ಬಗ್ಗೆ ಅಲ್ಲಿನ ನಾಗರೀಕರು ಪಾಲಿಕೆಯ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿರಲಿಲ್ಲ. ಸ್ಥಳೀಯ ನಿವಾಸಿಗಳು ಕಲಾವಿದ ಬಾದಲ್ ನಂಜುಂಡಸ್ವಾಮಿಗೆ ತಿಳಿಸಿದ್ದರು. ಕಲಾವಿದ ನಂಜುಂಡಸ್ವಾಮಿ ಸ್ಥಳಕ್ಕೆ ಹೋಗಿ ಪಾಲಿಕೆಯನ್ನು ಎಚ್ಚರಿಸಲು ಹಾಗೂ ಡೆಂಗ್ಯೂವಿನ ಬಗ್ಗೆ ಎಚ್ಚರಿಕೆ ನೀಡಲು ಡೆಂಗ್ಯೂ ಸೊಳ್ಳೆಯ ಚಿತ್ರ ಬರೆದು ಜಾಗೃತಿ ಮೂಡಿಸಿದ್ದಾರೆ.

ಕುಂಚದಿಂದ ಅರಿವು ಮೂಡಿಸುವು ಕೆಲಸ
ಮೈಸೂರಿನವರಾಗಿರುವ ಬಾದಲ್ , ನಾಗರಿಕ ಸಮಸ್ಯೆಗಳಿಗೆ ತಮ್ಮದೇ ರೀತಿಯಾದ ವಿಶೇಷ ಕಲಾಕುಂಚದೊಂದಿಗೆ ಗಮನ ಸೆಳೆಯುವ ಅಪ್ರತಿಮ ಕಲಾವಿದ. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮೈಸೂರು ಬೀದಿಗಳಲ್ಲಿ ಈ ಸಮಸ್ಯೆಯನ್ನು ಹೈಲೈಟ್ ಮಾಡಲು ತೆಗೆದುಕೊಂಡ ಮಾರ್ಗ ಎಲ್ಲರನ್ನು ನಿಬ್ಬೆರಗಾಗಿಸಿತ್ತು.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ!
ಈ ಕುರಿತು ಮಾತನಾಡಿದ ಅವರು, "ಈ ಗುಂಡಿಯನ್ನು ನಾನು ಕಳೆದ 2 ತಿಂಗಳಿನಿಂದಲೂ ಗುರುತಿಸಿದ್ದೇನೆ, ನನಗೆ ಇಂತಹ ವಿಚಾರಗಳು ಗೋಚರಿಸಿದಾಗ ತಕ್ಷಣವೇ ನನ್ನ ಕಲ್ಪನೆಯಿಂದ ಸಮಸ್ಯೆಗಳ ಪರಿಹಾರಕ್ಕಾಗಿ ಏನು ಮಾಡಬಹುದೆಂದು ಯೋಚಿಸುತ್ತೇನೆ. ಹಾಗಾಗಿ ಇಲ್ಲಿ ಎರಡು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಡೆಂಗ್ಯೂ ಮತ್ತು ಗುಂಡಿಗಳಿಗೆ, ಸಮಾಪ್ತಿ ಹಾಡಲು ಹೊರಟ್ಟಿದ್ದೇನೆ" ಎಂದು ಅವರು ತಿಳಿಸಿದರು.

30 ನಿಮಿಷದಲ್ಲಿ ಅಮೋಘ ಕಲಾಕೃತಿ
ಒಂದು ಕಲಾಕೃತಿಯನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯವು ಯೋಜನೆಯಿಂದ ಯೋಜನೆಯನ್ನು ಬದಲಾಗುತ್ತದೆ, ಮತ್ತು ಈ ಡೆಂಗ್ಯೂ ಗುಂಡಿಯು ಬಾದಲ್ 30 ನಿಮಿಷದಲ್ಲಿ ಪೂರ್ಣಗೊಳಿಸಿದ್ದಾರೆ.
|
ಬಾದಲ್ ನ ರಚನೆಗಳು ಆಗಾಗ್ಗೆ ಅಂತರ್ಜಾಲದಲ್ಲಿ ಸುತ್ತುತ್ತಿದ್ದು, ಇತ್ತೀಚೆಗೆ ಇದು ಆನಂದ್ ಮಹೀಂದ್ರಾರ ಗಮನ ಸೆಳೆದಿದೆ. .
ಸೋಮವಾರ, ಮಹೀಂದ್ರಾ ಗ್ರೂಪ್ ಎಕ್ಸಿಕ್ಯುಟಿವ್ ಚೇರ್ಮನ್ ಆದ ಆನಂದ್, ಇವರ ಕಲೆಯನ್ನು ಗಮನಿಸಿ "ಸ್ಟ್ರೀಟ್" ಎಂದು ಟ್ವೀಟ್ ಮಾಡಿದ್ದರು. ಆದರೆ ಆ ಸಮಯದಲ್ಲಿ, ಕಲಾವಿದ ಬಾದಲ್ ಎಂದು ತಿಳಿದಿರಲಿಲ್ಲ. ಟ್ವಿಟ್ಟರ್ ಬಳಕೆದಾರರು ಕಲಾವಿದನ ಹೆಸರನ್ನು ಸೂಚಿಸಿದ ನಂತರ, ಆನಂದ್ ಮಹೀಂದ್ರಾ ತಮ್ಮ ಕಲೆಯ ಮೂಲಕ ಅವರ ಸೃಜನಶೀಲತೆಯನ್ನು ಬೆಂಬಲಿಸುವಲ್ಲಿ ಬಾದಲ್ ಆಸಕ್ತಿ ಹೊಂದಿದ್ದಾನೆ ಎಂದು ಮತ್ತೊಮ್ಮೆ ಟ್ವೀಟ್ ಮಾಡುವ ಮೂಲಕ ಪ್ರಶಂಸಿರುವುದು ಸಂತಸಕರ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications