ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜನಗೂಡಲ್ಲಿ ಸಂತ್ರಸ್ತರ ಭೇಟಿ ಮಾಡಿದ ನಟ ಚೇತನ್

By ಮೈಸೂರು ಪ್ರತಿನಿಧಿ
|
Google Oneindia Kannada News

ನಂಜನಗೂಡು, ಆಗಸ್ಟ್ 12: ಕಪಿಲಾ ನದಿಯ ಆರ್ಭಟಕ್ಕೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಸಾವಿರಾರು ಕುಟುಂಬಗಳು ಆಸ್ತಿ ಪಾಸ್ತಿ, ಮನೆ ಕಳೆದುಕೊಂಡು ಬೀದಿಗೆ ಬಿದ್ದಿವೆ. ಪಟ್ಟಣದ ನಂಜುಂಡೇಶ್ವರ ದೇವಾಲಯದ ತಗ್ಗು ಪ್ರದೇಶಗಳ ಮನೆಗಳು ಮುಳುಗಡೆಯಾಗಿದ್ದು, ಇಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಪಟ್ಟಣದ ಒಕ್ಕಲಗೇರಿ, ಕುರುಬಗೇರಿ, ಚಾಮಲಪುರದ ಹುಂಡಿ, ತೋಪಿನಬೀದಿ, ಸರಸ್ವತಿ ಕಾಲೋನಿ ಮತ್ತಿತರ ಬಡಾವಣೆಗಳಿಗೆ ಭೇಟಿ ನೀಡಿ, ನಂತರ ಪರಿಹಾರ ಕೇಂದ್ರಗಳಿಗೆ ತೆರಳಿ ಸಂತ್ರಸ್ತರ ಜೊತೆ ಮಾತನಾಡಿದರು.

 ವಿಷಕಂಠನಿಗೂ ಎದುರಾಯಿತೇ ಜಲಕಂಟಕ? ವಿಷಕಂಠನಿಗೂ ಎದುರಾಯಿತೇ ಜಲಕಂಟಕ?

"ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಜತೆ ಮಾತುಕತೆ ನಡೆಸಲಾಗಿದೆ. ಮನೆ, ಆಸ್ತಿ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ದಿನ ಕಳೆಯುತ್ತಿರುವ ಸಂತ್ರಸ್ತರ ಜೀವನ ಮತ್ತು ಮಕ್ಕಳ ಭವಿಷ್ಯ ರೂಪಿಸಲು ಅವರ ಜೊತೆ ಕೈ ಜೋಡಿಸಲಾಗುವುದು" ಎಂದು ಭರವಸೆ ನೀಡಿದರು ಚೇತನ್.

Film Actor Chethan Visited Nanjanagud

ವಿಡಿಯೋ ಮಾಡಲು ಹೇಳಿ ನೀರಿಗೆ ಧುಮುಕಿದ ಪೂಜಾರಿ ಕಣ್ಮರೆವಿಡಿಯೋ ಮಾಡಲು ಹೇಳಿ ನೀರಿಗೆ ಧುಮುಕಿದ ಪೂಜಾರಿ ಕಣ್ಮರೆ

ನಟ ಚೇತನ್ ಅವರ ಸಾಮಾಜಿಕ ಕಾರ್ಯಕ್ಕೆ ಇನ್ನೂ ಹಲವು ಜನ ಕೈ ಜೋಡಿಸಿದ್ದಾರೆ.

English summary
Film actor Chetan visited nanjanagud today and spoke with flood victims. The houses of Nanjanagudu are submerged in water. Today actor and social activist Chetan visited nanjanagud.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X