ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾರಾಜರ ಅಂತಿಮ ಸಂಸ್ಕಾರಕ್ಕೆ 250 ಕೆಜಿ ಶ್ರೀಗಂಧ

|
Google Oneindia Kannada News

ಮೈಸೂರು, ಡಿ. 11 :ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಂತ್ಯಕ್ರಿಯೆಯ ಪ್ರಕ್ರಿಯೆಗಳು ಆರಂಭವಾಗಿದೆ.ಮೈಸೂರು ನಂಜನಗೂಡು ರಸ್ತೆಯಲ್ಲಿರುವ ಮಧುವನದಲ್ಲಿ ಅಂತಿಮ ಸಂಸ್ಕಾರಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸುಮಾರು 250 ಕೆಜಿ ಶ್ರೀಗಂಧವನ್ನು ಅಂತಿಮ ಸಂಸ್ಕಾರಕ್ಕೆ ಬಳಕೆ ಮಾಡಲಾಗುತ್ತಿದೆ. ಸ್ಥಳಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಅಂಭಾವಿಲಾಸ ಅರಮನೆಯಲ್ಲಿ ಒಡೆಯರ್ ಅವರ ಅಂತ್ಯ ಸಂಸ್ಕಾರದ ವಿಧಿವಿಧಾನಗಳು ಆರಂಭವಾಗಿವೆ. ಮಧ್ಯಾಹ್ನ 1.30ರ ಸುಮಾರಿಗೆ ಅರಮನೆಯಿಂದ ಒಡೆಯರ್ ಪಾರ್ಥಿವ ಶರೀರದ ಮೆರವಣಿಗೆ ಹೊರಡುತ್ತದೆ. ಚಿನ್ನದ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿಸುವ ಮೂಲಕ ಪಾರ್ಥಿವ ಶರೀರವನ್ನು ಅಂತ್ಯ ಸಂಸ್ಕಾರ ನಡೆಯುವ ಮಧುವನಕ್ಕೆ ತರಲಾಗುತ್ತದೆ. (ಒಡೆಯರ್ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ)

cremation

ಮಧುವನದಲ್ಲಿ ನಡೆಯುವ ಅಂತಿಮ ಸಂಸ್ಕಾರದಲ್ಲಿ ರಾಜಮನೆತನದವರು, ಗಣ್ಯರು ಮತ್ತು ಮಾಧ್ಯಮಗಳು ಮಾತ್ರ ಭಾಗವಹಿಸಬಹುದಾಗಿದೆ. ಅರಮನೆಯಿಂದ ಹೊರಡುವ ಪಾರ್ಥಿವ ಶರೀರಿದ ಮೆರವಣಿಗೆ 4 ಗಂಟೆ ಸುಮಾರಿಗೆ ಮಧುವನಕ್ಕೆ ಆಗಮಿಸಬಹು ಎಂದು ಅಂದಾಜಿಸಲಾಗಿದೆ. ಸುಮಾರು 45 ನಿಮಿಷಗಳ ವಿಧಿವಿಧಾನಗಳ ನಂತರ ಸುಮಾರು 5 ಗಂಟೆಗೆ ಚಿತೆಗೆ ಅಗ್ನಿ ಸ್ಪರ್ಶ ಮಾಡಬಹುದು ಎಂದು ತಿಳಿದು ಬಂದಿದೆ. (ಅಳಿವಿನ ಅಂಚಿನಲ್ಲಿ ಆಳರಸರ ಮಧುವನ)

ವಿಧಿವಿಧಾನಗಳು : ಮೃತದೇಹ ಮಧುವನಕ್ಕೆ ಆಗಮಿಸುತ್ತಿದ್ದಂತೆ ಮೊದಲು ಪಂಚದ್ರವ್ಯದ ಅಭಿಷೇಕ ನಡೆಯಲಿದೆ. ನಂತರ ಶ್ರೀಗಂಧ ಮತ್ತು ಚಂದನದ ಅಲಂಕಾರ ನಡೆಯಲಿದೆ. ಭಾನುಪ್ರಕಾಶ್ ಅಂತಿಮ ವಿಧಿವಿಧಾನಗಳ ನೇತೃತ್ವ ವಹಿಸಿದ್ದಾರೆ. ಅರಮನೆ ಆವರಣದಲ್ಲಿ ಗೋದಾನ, ಎರಡು ಬಗೆಯ ಹೋಮಗಳನ್ನು ಮಾಡಲಾಗುತ್ತಿದೆ.

ಪೊಲೀಸ್ ಸರ್ಪಗಾವಲು : ಒಡೆಯರ್ ಅಂತ್ಯ ಸಂಸ್ಕಾರ ನಡೆಯುವ ಮಧುವನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗಣ್ಯರು ಆಗಮಿಸುತ್ತಿರುವುದರಿಂದ ಮಂಡ್ಯ ಮತ್ತು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ವತಃ ಬಂದೋಬಸ್ತ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

English summary
Srikantadatta Narasimharaja Wadiyar cremation ceremony will be held at Madhuvana, the graveyard of the Mysore Royal Family, off National Highway 212 (Mysore-Nanjangud road) in Mysore on Wednesday, December 11 evening. District administration to provide sandalwood logs for cremation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X