ಮೈಸೂರು ದಸರಾ ಕವಿಗೋಷ್ಠಿ: ಹೆಚ್ಚು ಚಪ್ಪಾಳೆ ಗಿಟ್ಟಿಸಿಕೊಂಡವರು ಯಾರು?
ಮೈಸೂರು, ಅಕ್ಟೋಬರ್. 14 :ಎಂದಿನಂತೆ ದಸರಾ ಉಪ ಸಮಿತಿ ವತಿಯಿಂದ ರಾಣಿಬಹದ್ದೂರ್ ಸಭಾಂಗಣದಲ್ಲಿ ನಡೆದ ದಸರಾ ಕವಿಗೋಷ್ಠಿಯಲ್ಲಿ ಭಿನ್ನ ಭಿನ್ನ ದನಿಗಳು ವ್ಯಕ್ತವಾಗಿದ್ದು,
ಮಹಿಳೆಯರು ಅದ್ಭುತ ಕವಿತೆಗಳನ್ನು ವಾಚಿಸಿದರು.
"ಕಾವ್ಯ... ಅನೇಕ ರೂಪಕಗಳ ಮೂಲಕ ಹುಟ್ಟುತ್ತದೆ, ಮನುಷ್ಯತ್ವದ ಬಗ್ಗೆ ಮಾತನಾಡುತ್ತದೆ. ಸೃಜನಶೀಲ ಸೃಷ್ಟಿ ಮಾತ್ರ ಕಾವ್ಯವಲ್ಲ. ಆ ಹೊತ್ತಿನ ತಲ್ಲಣಗಳಿಗೆ ಅದು ದಿವ್ಯ ಔಷಧ. ಕಾವ್ಯಕ್ಕೆ ಜವಾಬ್ದಾರಿ ಇದೆ. ಆದರೆ, ಇಂದಿನ ಬರಹ ಕತ್ತಿ ಅಲುಗಿನ ನಡಿಗೆಯಾಗಿದೆ. ಸೋಷಿಯಲ್ ಮಿಡಿಯಾದಲ್ಲಿನ ತಕ್ಷಣದ ಪತಿಕ್ರಿಯೆಯನ್ನು ನಾವು ಪರಿಗಣಿಸಬೇಕಿದೆ" ಎಂದರು ನೆರೆದ ಕವಿಗಳು.
ಸಾಹಿತಿ ಶೂದ್ರ ಶ್ರೀನಿವಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕಾವ್ಯಾಸಕ್ತಿಯಿಂದ ಆರೋಗ್ಯಪೂರ್ಣ ಸಮಾಜ, ಚಿಂತನೆ ಸಾಧ್ಯ. ಕಾವ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು ಸಾಹಿತ್ಯ, ಸಂಸ್ಕೃತಿ ಬಗ್ಗೆ ಆರೋಗ್ಯ ಪೂರ್ಣ ಮನಸ್ಥಿತಿ ಹೊಂದಿರುತ್ತಾರೆ. ಕಾವ್ಯಾಸಕ್ತಿಯಿಂದ ಮಾನಸಿಕ ಚಿಂತನೆ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕವಿ ಎಚ್.ಎನ್.ಈಶಕುಮಾರ್ ಅವರು ಸರಿಸುಮಾರು ಮಾನವರಾಗದೇ!' ಶೀರ್ಷಿಕೆ ಬಗ್ಗೆ ವಾಚಿಸಿ ಮಾನವ ಪ್ರೀತಿಯ ಪಾಠ ಮಾಡಿದರು.
ಕವಿ ಗೋವಿಂದಸ್ವಾಮಿ ಗುಂಡಾಪುರ ಅವರು ಪ್ರೀತಿಸ ಬೇಡ ಗೆಳೆಯ' ಈ ಕವಿತೆಯ ಮೂಲಕ ಮರ್ಯಾದೆಗೇಡು ಹತ್ಯೆಯನ್ನು ಖಂಡಿಸಿದರು.
ಸದ್ಯ ದೇಶದಾದ್ಯಂತ ಸುದ್ದಿಯಾಗಿರುವ ಮೀ ಟೂ ಕುರಿತು ನಿರ್ಮಲಾ ಯಲಿಗಾರ ಅವರು ಓದಿದ ಕವಿತೆ ಗಮನ ಸೆಳೆಯಿತು. ಡಾ.ರೇಷ್ಮಾ ರಮೇಶ್ ಅವರು ಸ್ವಚ್ಛ ಭಾರತಕ್ಕೆ ಸಂಬಂಧಿಸಿದಂತೆ 'ದಯವಿಟ್ಟು ಇಲ್ಲಿ ಮೂತ್ರ ವಿಸರ್ಜನೆ ಮಾಡಿ' ಎನ್ನುವ ಕವಿತೆ ಓದಿ ಹೆಚ್ಚು ಚಪ್ಪಾಳೆ ಗಿಟ್ಟಿಸಿಕೊಂಡರು.
ಜತೆಗೆ ಕಾ.ಹು.ಚಾನ್ ಪಾಷಾ, ಎನ್.ಎಸ್.ಚಾಂದ್ ಪಾಷಾ ಹಾಗೂ ಕೆ.ಆರ್.ಸೌಮ್ಯಾ ಅವರು ಸೀತೆ ಕುರಿತ ವಾಚಿಸಿದ ಕವಿತೆಗಳು ಮನಸ್ಸನ್ನು ಹಿಡಿದಿಟ್ಟವು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯುವ ಕವಿಗೋಷ್ಠಿಯಲ್ಲಿ 31 ಕವಿಗಳಲ್ಲಿ ಕೆಲವರಷ್ಟೇ ಗಂಭೀರ ಪದ್ಯಗಳನ್ನು ಮಂಡಿಸಿದರೆ, ಉಳಿದವರು ಕವಿತೆಯ ಮೊದಲ ಸಾಲನ್ನೇ ಪುನರಾವರ್ತಿಸಿದರು. ಕೆಲವರು ವಾಚ್ಯವಾಗಿ, ಘೋಷಣಾ ವಾಕ್ಯಗಳನ್ನೇ ಕವಿತೆಗಳೆಂದು ವಾಚಿಸಿದರು. ಜೊತೆಗೆ ಹೆಣ್ಣಿನ ಸಮಸ್ಯೆಗಳು, ನೋವು, ತವಕ- ತಲ್ಲಣಗಳನ್ನು ಬಿಚ್ಚಿಟ್ಟರು.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications