Get Updates
Get notified of breaking news, exclusive insights, and must-see stories!

ಭುವನೇಶ್ವರಿ ದೇಗುಲಕ್ಕೆ ಹೋಗದ, ಮೈಸೂರು ಪೇಟ ನಿರಾಕರಿಸಿದ ಚಂಪಾ

ಮೈಸೂರು, ನವೆಂಬರ್ 24: ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು ಅನಿರೀಕ್ಷಿತಗಳು ಎದುರಾದವು. ಮೈಸೂರು ಅರಮನೆ ಆವರಣದಲ್ಲಿ ಇರುವ, ಇಡೀ ರಾಜ್ಯದ ಏಕೈಕ ಭುವನೇಶ್ವರಿ ದೇವಾಲಯಕ್ಕೆ ಮೆರವಣಿಗೆಗೂ ಉನ್ನ ಸಚಿವರಾದ ಮಹದೇವಪ್ಪ ಸೇರಿ ಇತರರು ತೆರಳಿದರು. ಅಲ್ಲಿ ಪೂಜೆ ಕೂಡ ಮಾಡಿಸಿದರು.

ಚಿತ್ರಗಳು : ಮೈಸೂರಲ್ಲಿ 83ನೇ ಸಾಹಿತ್ಯ ಸಮ್ಮೇಳನ ಸಂಭ್ರಮ

ಆದರೆ, ಸಮ್ಮೇಳನಾಧ್ಯಕ್ಷರಾದ ಚಂದ್ರಶೇಖರ ಪಾಟೀಲ (ಚಂಪಾ) ಭುವನೇಶ್ವರಿ ದೇವಾಲಯಕ್ಕೆ ತೆರಳಲಿಲ್ಲ. ಇನ್ನು ಅಧ್ಯಕ್ಷರಿಗೆ ತೊಡಿಸಲು ಕನ್ನಡ ಅಭಿಮಾನಿಗಳು ತಂದಿದ್ದ ಮೈಸೂರು ಪೇಟ ಧರಿಸುವುದಕ್ಕೆ ಕೂಡ ಚಂಪಾ ನಿರಾಕರಿಸಿದರು. ಇದರಿಂದ ಪೇಟ ತಂದಿದ್ದವರು ಪೇಚಿಗೆ ಸಿಕ್ಕಿದಂತೆ ಕಂಡು ಬಂದಿತು.

Chmapa did not go to Bhuvaneshwari temple

ಬಂಡಾಯ ಸಾಹಿತ್ಯದ ಹಿನ್ನೆಲೆಯ ಚಂದ್ರಶೇಖರ ಪಾಟೀಲರು ಸಂಪ್ರದಾಯದ ಹೆಸರಿನಲ್ಲಿನ ಗುಲಾಮಗಿರಿಯನ್ನು ಹಾಗೂ ಮೌಢ್ಯವನ್ನು ಧಿಕ್ಕರಿಸಿದವರು. ಮತ್ತು ಅವುಗಳ ವಿರುದ್ಧ ಹೋರಾಟ-ಚಳವಳಿಗಳನ್ನು ರೂಪಿಸಿ, ಧ್ವನಿ ಎತ್ತಿದವರು. ಆದರೂ ಭುವನೇಶ್ವರಿ ದೇವಾಲಯಕ್ಕೆ ತೆರಳದಿರುವುದು ಹಾಗೂ ಪೇಟ ತೊಡಿಸಲು ಬಂದಾಗ ನಿರಾಕರಿಸಿರುವುದು ಆ ಬಗ್ಗೆ ಭಾವನಾತ್ಮಕ ನಂಟು ಹೊಂದಿದವರಿಗೆ ನೋವುಂಟು ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+