ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಒಳ್ಳೆ ಹುಡುಗ ಪ್ರಥಮ್
Recommended Video

ಮೈಸೂರು, ನವೆಂಬರ್ 29 : ನಿಮ್ಮ ಸೈದ್ಧಾಂತಿಕ ನಿಲುವು ನನಗೆ ಇಷ್ಟವಾಗಲ್ಲ ಕಣ್ರೀ... ನಾನು ಇದನ್ನು ಖಂಡಿಸ್ತೀನಿ, ಪ್ರತಿಭಟಿಸುತ್ತೀನಿ ಎನ್ನುವ ಮಾತು ಕೇಳಿದಾಗಲೆಲ್ಲ ನಮಗೆ ಥಟ್ಟೆಂದು ನೆನಪಾಗೋದು 'ಒಳ್ಳೆ ಹುಡುಗ' ಪ್ರಥಮ್.
ಅಪ್ಪ -ಅಮ್ಮ ಇಟ್ಟಿರುವ ಹೆಸರಿನೊಂದಿಗೆ 'ಒಳ್ಳೆ ಹುಡುಗ' ಎನ್ನುವ ಅನುವಾಚಕಪದವನ್ನು ಸೇರಿಸಿಕೊಂಡಿರುವ ಕನ್ನಡಪರ ಹೋರಾಟಗಾರ 'ಬಿಗ್ ಬಾಸ್' ಪ್ರಥಮ್ ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ.
ಯಾವ ಪಕ್ಷದಿಂದ ಪ್ರಥಮ್ ಸ್ಪರ್ಧಿಸಲಿದ್ದಾರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿದ್ದಾರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್! ಆದರೆ, ಅವರು ವಿಧಾನಸಭೆ ಚುನಾವಣೆಗೆ ಧುಮುಕುತ್ತಿರುವುದಂತೂ ಸತ್ಯ.
ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗುವ ಮುನ್ನ ಪ್ರಥಮ್ ಅವರು ಎಲ್ಲ ರಾಜಕೀಯ ನಾಯಕರೊಂದಿಗೆ ಫೋಟೋ ತೆಗೆಸಿಕೊಂಡಿದ್ದರು. ಬಿಗ್ ಬಾಸ್ ಗೆದ್ದ ನಂತರವೂ ಹಲವಾರು ನಾಯಕರೊಂದಿಗೆ ಕಾಣಿಸಿಕೊಂಡಿದ್ದಾರೆ. ಆದರೆ, ಯಾರೊಂದಿಗೂ ಗುರುತಿಸಿಕೊಂಡಿಲ್ಲ ಎನ್ನುವುದು ಅವರ ನುಡಿ.
ಈ ಕುರಿತಾಗಿ ಖುದ್ದು ಪ್ರಥಮ್ ರವರೇ 'ಒನ್ಇಂಡಿಯಾ ಕನ್ನಡ'ಕ್ಕೆ ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ರಾಜಕೀಯ ಸೇರುವ ಆಶಯ, ಮುಂದಿನ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ.

ಪ್ರಥಮ್ ನಿಮಗೆ ರಾಜಕೀಯ ಪ್ರವೇಶಿಸಲು ಆಸಕ್ತಿ ಇದೆಯೇ ?
ಖಂಡಿತಾ ಇದೆ. ನಾನು ಎಲ್ಲರಂತೆ ಸಾಮಾನ್ಯ ಪ್ರಜೆ. ಆದರೆ ಅಸಮಾನ್ಯನಾಗಿ ಕೆಲಸ ಮಾಡಬೇಕೆಂಬುದು ನನ್ನ ಹಂಬಲ. ಅದಕ್ಕಾಗಿ ನಾನು ಈ ಬಾರಿಯ ಚುನಾವಣೆಗೆ ಸ್ಪರ್ಧಿಸುತ್ತಿರುವುದು ನಿಜ.

ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದೀರಾ ಪ್ರಥಮ್?
ನಾನು ದೇವೇಗೌಡರ ಜೊತೆ, ಕುಮಾರಣ್ಣನ ಜೊತೆ ಕೆಲಸ ಮಾಡುತ್ತಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ನಾನು ಎಲ್ಲಿಯೂ ಕೂಡ ಇದೇ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆಂದು ಹೇಳಲಾರೆ. ಆದರೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದು ಮಾತ್ರ ನಿಜ. ಅದಕ್ಕಾಗಿ ಸಜ್ಜಾಗುತ್ತಿದ್ದೇನೆ. ತಯಾರಿ ಕೂಡ ನಡೆಸುತ್ತಿದ್ದೇನೆ.

ನೀವೊಬ್ಬ ಸೆಲಿಬ್ರಿಟಿ ಆಗಿದ್ದೀರಾ ಅಂತ ಸ್ಫರ್ಧಿಸುತ್ತೀದ್ದೀರಾ ?
ಇಲ್ಲ. ನಾನು ಎಂದಿಗೂ ಆ ಭಾವನೆ ಹೊಂದಿದವನಲ್ಲ. ನಾನು ಸಾಮಾನ್ಯರೊಂದಿಗೆ ಸಾಮಾನ್ಯವಾಗಿಯೇ ಇದ್ದೇನೆ. ನಾನು ಈಗಲೂ ಕನ್ನಡಪರ ಕೆಲಸಗಳನ್ನು ಮಾಡುತ್ತಿದ್ದೇನೆ. ನಾನು ಜೀವನದ ಕೊನೆ ಉಸಿರಿನವರೆಗೂ ಅದನ್ನು ಮಾಡುತ್ತಿರುತ್ತೇನೆ. ಕಾವೇರಿ ಹೋರಾಟದ ವಿಚಾರವಾಗಿಯೂ ನನ್ನ ಕೈಲಾದ ಸೇವೆ ಮಾಡಿದ್ದೇನೆ. ನಾನು ರಿಯಾಲಿಟಿ ಶೋನಲ್ಲಿ ಗೆದ್ದ ಹಣವನ್ನು ನನಗಾಗಿ ನಾನು ವಿನಿಯೋಗಿಸಿಲ್ಲ. ನನ್ನ ಬಳಿ 5 ಸಿನಿಮಾಗಳು ರಿಲೀಸ್ ಗೆ ಸಜ್ಜಾಗಿದೆ. ಇನ್ನು 6 ಸಿನಿಮಾಗಳಿಗೆ ಸಹಿ ಹಾಕಿದ್ದೇನೆ. ಹಾಗಿದ್ದರೂ ಸಾಮಾನ್ಯನಂತೆಯೇ ಜನರೊಡನೆ ಬೆರೆಯುತ್ತೇನೆ ಕೂಡ. ನನಗೆ ಅವಕಾಶ ಮಾಡಿಕೊಟ್ಟವರೇ ನಮ್ಮ ಕನ್ನಡಿಗರು. ಅವರ ಸೇವೆಗೆ ನನ್ನ ರಾಜಕೀಯ ಪ್ರವೇಶ ಅಷ್ಟೇ.

ಎಲ್ಲಿಂದ ಸ್ಪರ್ಧಿಸಲಿದ್ದಾರೆ ಲಾರ್ಡ್ ಪ್ರಥಮ್?
ಚುನಾವಣೆಗೆ ಸ್ಪರ್ಧಿಸಲು 3 ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಒಂದು ನನ್ನ ಸ್ವಕ್ಷೇತ್ರ ಚಾಮರಾಜನಗರ. ಮತ್ತೊಂದು ಚಾಮರಾಜಪೇಟೆ. ಇನ್ನೊಂದು ಕ್ಷೇತ್ರ ಹುಡುಕಾಟ ನಡೆಸುತ್ತಿದ್ದೇನೆ. ಎದುರಾಳಿಯ ಎದುರಿಗೆ ನಿಂತರೂ ಗೆಲುವು ನನ್ನದಾಗಬೇಕು ಅಂತಹ ಸ್ಟ್ರಾಂಗ್ ಕ್ಯಾಂಡಿಡೇಟ್ ನಾನಾಗಬೇಕು. ಅಂತಹ ಕ್ಷೇತ್ರದ ಆಯ್ಕೆಗಾಗಿ ಹುಡುಕಾಟ ನಡೆಸಿದ್ದೇನೆ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು












Click it and Unblock the Notifications